ಸಿಡಿಲು ಬಡಿದು ಕೋಚ್‌ ಸಾವು!

Published : Oct 20, 2019, 01:20 PM IST
ಸಿಡಿಲು ಬಡಿದು ಕೋಚ್‌ ಸಾವು!

ಸಾರಾಂಶ

ಸಿಡಿಲು ಬಡಿತಕ್ಕೆ ಮಾಜಿ ಫುಟ್ಬಾಲ್ ಆಟಗಾರ, ಹಾಲಿ ಕೋಚ್ ಸ್ಥಳದಲ್ಲೇ ಅಸುನೀಗಿದ ಹೃದಯವಿದ್ರಾವಕ ಘಟನೆ ಜಾರ್ಖಂಡ್’ನಲ್ಲಿ ನಡೆದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಜಾರ್ಖಂಡ್‌(ಅ.20): ಅಭ್ಯಾ​ಸದ ವೇಳೆ ಸಿಡಿಲು ಬಡಿದು ಫುಟ್ಬಾಲ್‌ ಕೋಚ್‌ ಒಬ್ಬರು ಮೈದಾ​ನ​ದಲ್ಲೇ ಸಾವ​ನ್ನಪ್ಪಿದ ಘಟನೆ ಇಲ್ಲಿ ನಡೆ​ದಿದೆ. ಮಾಜಿ ಸಂತೋಷ್‌ ಟ್ರೋಫಿ ಫುಟ್ಬಾ​ಲಿಗ ಅಭಿ​ಜಿತ್‌ ಗಂಗೂಲಿ (53) ಮೃತ ದುರ್ದೈವಿ. ಈ ಘಟ​ನೆ ವೇಳೆ ಇಬ್ಬ​ರು ಆಟ​ಗಾ​ರರಿಗೂ ಗಾಯ​ವಾ​ಗಿದ್ದು, ಪ್ರಾಣಾ​ಪಾ​ಯ​ದಿಂದ ಪಾರಾ​ಗಿ​ದ್ದಾರೆ.

ಅಭಿನವ ಬಿಂದ್ರಾ ವಿರುದ್ಧ ಕಿಡಿಕಾರಿದ ಮೇರಿ ಕೋಮ್

ಶನಿ​ವಾರ ಇಲ್ಲಿನ ಬಿರ್ಸಾ ಮುಂಡಾ ಮೈದಾನದಲ್ಲಿ ಬೆಳಗ್ಗೆ 7.30ರ ವೇಳೆಗೆ ಧನ್ಬಾದ್‌ ರೈಲ್ವೆ ಡಿವಿಷನ್‌ ಫುಟ್ಬಾಲ್‌ ತಂಡ ಅಭ್ಯಾಸ ನಡೆಸುತ್ತಿತ್ತು. ಕೋಚ್‌ ಅಭಿಜಿತ್‌ ಆಟ​ಗಾ​ರ​ರಿಗೆ ತರಬೇತಿ ನೀಡುತ್ತಿದ್ದರು. ಈ ವೇಳೆ ಮಳೆ ಆರ​ಂಭ​ವಾಗಿ ಸಿಡಿಲು ಬಡಿದ ಕಾರಣ, ಗಂಗೂಲಿ ಪ್ರಜ್ಞೆ ತಪ್ಪಿ ಬಿದ್ದರು. ಆಸ್ಪತ್ರೆಗೆ ಕೊರೆ​ದೊ​ಯ್ಯ​ಲಾ​ಯಿತು. ಆದರೆ ಅವರು ಮಾರ್ಗ ಮಧ್ಯಯೇ ಪ್ರಾಣಬಿಟ್ಟಿ​ದ್ದಾರೆ ಎಂದು ವೈದ್ಯರು ತಿಳಿ​ಸಿ​ದರು. 

ರಾಂಚಿ ಟೆಸ್ಟ್: ರೋಹಿತ್ ಶರ್ಮಾ ಭರ್ಜರಿ ಡಬಲ್ ಸೆಂಚುರಿ

1993ರ ಸಂತೋಷ್‌ ಟ್ರೋಫಿಯಲ್ಲಿ ಬಿಹಾರ ತಂಡವನ್ನು ಪ್ರತಿ​ನಿ​ಧಿ​ಸಿದ್ದ ಅಭಿಜಿತ್‌, 90ರ ದಶಕದ ಶ್ರೇಷ್ಠ ಡಿಫೆಂಡರ್‌ಗಳಲ್ಲಿ ಒಬ್ಬರೆನಿ​ಸಿ​ದ್ದರು. ರಾಷ್ಟ್ರೀಯ ತಂಡದ ಆಟಗಾರ ರವಿ ಲಾಲ್‌ ಹೆಂಬ್ರಮ್‌ ಹಾಗೂ ಉದಯೋನ್ಮುಖ ಆಟಗಾರ ಚಂದನ್‌ ಟುಡು ಗಾಯ​ಗೊಂಡ ಆಟ​ಗಾ​ರರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2026ರ FIFA ವಿಶ್ವಕಪ್ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಕ್ರಿಸ್ಟಿಯಾನೋ ರೊನಾಲ್ಡ್ ಭಾರತ ಭೇಟಿ ರದ್ದು: ತೆರೆಮರೆಯ ಹಿಂದಿನ ನಿಜವಾದ ಕಾರಣವೇನು?