
ಇಫೋ(ಮಲೇಷ್ಯಾ)ಅ.16: ಕೊನೆ ಕ್ಷಣದಲ್ಲಿ ಗೋಲು ಬಿಟ್ಟುಕೊಡುವ ಭಾರತ ಹಾಕಿ ತಂಡದ ಸಮಸ್ಯೆ ಮುಂದುವರಿದಿದೆ. ಭಾನುವಾರ ಅಜ್ಲಾನ್ ಶಾ ಹಾಕಿ ಟೂರ್ನಿಯ ಕೊರಿಯಾ ವಿರುದ್ಧದ ಪಂದ್ಯದಲ್ಲೂ ಭಾರತ ಮತ್ತದೇ ತಪ್ಪು ಮಾಡಿದೆ. ಪಂದ್ಯ ಮುಕ್ತಾಯಕ್ಕೆ 22 ಸೆಕೆಂಡ್ ಬಾಕಿ ಇದ್ದಾಗ ಪೆನಾಲ್ಟಿಕಾರ್ನರ್ ಮೂಲಕ ಗೋಲು ಹೊಡೆದ ಕೊರಿಯಾ 1-1 ಗೋಲಿನಲ್ಲಿ ಪಂದ್ಯ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಇದನ್ನೂ ಓದಿ: ಫಿಟ್ನೆಸ್ಗಾಗಿ ಕೊಹ್ಲಿ ಹಿಂಬಾಲಿಸಿದ ಚೆಟ್ರಿ!
ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ ಜಯಿಸಿದ್ದ ಭಾರತಕ್ಕೆ, ಭಾನುವಾರ ಪ್ರಬಲ ಪೈಪೋಟಿ ಎದುರಾಯಿತು. ಮೊದಲ ಕ್ವಾರ್ಟರ್ ಗೋಲು ರಹಿತ ಮುಕ್ತಾಯ ಕಂಡ ಬಳಿಕ, 28ನೇ ನಿಮಿಷದಲ್ಲಿ ಮನ್ದೀಪ್ ಸಿಂಗ್ ಭಾರತಕ್ಕೆ ಮೊದಲ ಗೋಲು ತಂದುಕೊಟ್ಟರು.
ಇದನ್ನೂ ಓದಿ: ಭಾರತ ಫುಟ್ಬಾಲ್ ತಂಡದಲ್ಲಿ ಕನ್ನಡಿಗ ನಿಖಿಲ್ಗೆ ಸ್ಥಾನ
ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸುವ ಉತ್ಸಾಹದಲ್ಲಿದ್ದ ಭಾರತಕ್ಕೆ 60ನೇ ನಿಮಿಷದಲ್ಲಿ ಜಾಂಗ್ಹ್ಯುನ್ ಜಾಂಗ್ ಆಘಾತ ನೀಡಿದರು. ಇದಕ್ಕೂ ಮುನ್ನ 6 ಪೆನಾಲ್ಟಿಕಾರ್ನರ್ಗಳನ್ನು ತಡೆದಿದ್ದ ಭಾರತ, ಕೊನೆಯಲ್ಲಿ ಗೋಲು ಬಿಟ್ಟು ಗೆಲುವನ್ನು ಕೈಚೆಲ್ಲಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.