ಯಾವ ಗ್ರಹದಿಂದ ಯಾವ ಕಾಯಿಲೆ, ಯಾವ ಗ್ರಹಕ್ಕೆ ಯಾವ ಶಾಂತಿಮಂತ್ರ?

Published : Nov 18, 2020, 05:03 PM ISTUpdated : Mar 10, 2021, 10:40 AM IST
ಯಾವ ಗ್ರಹದಿಂದ ಯಾವ ಕಾಯಿಲೆ, ಯಾವ ಗ್ರಹಕ್ಕೆ ಯಾವ ಶಾಂತಿಮಂತ್ರ?

ಸಾರಾಂಶ

ಕೆಲವೊಮ್ಮೆ ಗ್ರಹಗಳು ನಮ್ಮ ಮೇಲೆ ಮುನಿಸಿಕೊಂಡಾಗ ನಮಗೆ ಕಾಯಿಲೆ ಕಸಾಲೆ ಅನಾರೋಗ್ಯಗಳು ಕಾಡುತ್ತವೆ. ಅದು ಯಾವ ಗ್ರಹದ ದುಷ್ಪ್ರಭಾವ ಅಂತ ತಿಳಿದುಕೊಂಡು, ಆ ಗ್ರಹವನ್ನು ಶಾಂತಿಮಂತ್ರದ ಮೂಲಕ ಒಲಿಸಿಕೊಂಡರೆ ನೀವು ಸುಖಿಯಾಗಿ, ಯಾವುದೇ ಅನಾರೋಗ್ಯ ಇಲ್ಲದೆ ಇರಬಹುದು.

ಗ್ರಹಗಳು ನಮ್ಮ‌ ಆರೋಗ್ಯದ ಉನ್ನತಿಗೂ ಕೆಡುಕಿಗೂ ಮೂಲ. ಗ್ರಹಗಳಿಂದಲೇ ನಮಗೆ ಹಲವು ಅನಾರೋಗ್ಯ ಬಾಧೆಗಳು ಕಾಡುತ್ತವೆ. ಯಾವ ಗ್ರಹ ಯಾವ ಕಾಯಿಲೆ ಉಂಟುಮಾಡುತ್ತದೆ ಹಾಗೂ ಆ ಗ್ರಹಕ್ಕೆ ಶಾಂತಿಮಂತ್ರ ಯಾವುದು ಅಂತ ತಿಳಿದುಕೊಳ್ಳಿ. ನಿಮಗೆ ಬರುವ ಕಾಯಿಲೆಯನ್ನನುಸರಿಸಿ ಈ ಶಾಂತಿಮಂತ್ರಗಳನ್ನು ಪಠಿಸಿದರೆ ಆರೋಗ್ಯ ಉಂಟಾಗುತ್ತದೆ. ಅದಲ್ಲದೆಯೂ ದಿನನಿತ್ಯ ನವಗ್ರಹ ಮಂತ್ರವನ್ನು ಪಠಿಸುವುದು ಒಳ್ಳೆಯದು.

ಸೂರ್ಯ

ಪಿತ್ತದಿಂದ ತೊಂದರೆ, ಜ್ವರ, ಫಿಟ್ಸ್, ಮೂಳೆಗೆ ಸಂಬಂಧಿಸಿದ ತೊಂದರೆಗಳು. ಹೃದಯ ಹಾಗೂ ಹೊಟ್ಟೆಗೆ ಸಂಬಂಧಿಸಿದ ತೊಂದರೆ, ಕಾಮಾಲೆ, ಚರ್ಮದ ತೊಂದರೆ.

ಮಂತ್ರ: 

ಗ್ರಹಾಣಾಮರಾದಿತ್ಯೋ ಲೋಕರಕ್ಷಣಕಾರಕಃ |

ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ರವಿಃ ||

ಚಂದ್ರ

ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆ, ವಾಂತಿ, ಭೇದಿ, ಮನೋರೋಗ, ಅಜೀರ್ಣ, ವಾಂತಿ, ಉದರಕ್ಕೆ ಸಂಬಂಧಿಸಿದ ತೊಂದರೆ, ಪಿತ್ತಕ್ಕೆ ಸಂಬಂಧಿಸಿದ ತೊಂದರೆ, ತಲೆಸುತ್ತು, ದೃಷ್ಟಿಯ ತೊಂದರೆ.

ಮಂತ್ರ: 

ರೋಹಿಣೀಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ |

ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ವಿಧುಃ || 

ಈ ನಾಲ್ಕು ರಾಶಿಯವರಿಗಿರುತ್ತೆ ಮಹಾಲಕ್ಷ್ಮಿಯ ಕೃಪೆ: ನಿಮ್ಮ ರಾಶಿನೂ ಇದೆಯಾ..? ...

ಕುಜ

ರಕ್ತದ ಒತ್ತಡ, ರಕ್ತಕ್ಕೆ ಸಂಬಂಧಿಸಿದ ತೊಂದರೆ, ದಣಿವು, ಬಾಯಿ ಒಣಗುವುದು, ಕುಷ್ಠ, ನರಗಳ ತೊಂದರೆ, ಅಪಸ್ಮಾರ, ಚರ್ಮ ತೊಂದರೆ, ಪಿತ್ತ.

ಮಂತ್ರ: 

ಭೂಮಿಪುತ್ರೋ ಮಹಾತೇಜಾ ಜಗತಾಂ ಭಯಕೃತ್ಸದಾ |

ವೃಷ್ಟಿಕೃತ್-ದೃಷ್ಟಿಹರ್ತಾ ಚ ಪೀಡಾಂ ಹರತು ಮೇ ಕುಜಃ || 

ಬುಧ

ಕಣ್ಣು, ಮೂಗು, ಗಂಟಲು, ವಾತ, ಕಜ್ಜಿ, ತೊನ್ನು, ಪಾರ್ಶ್ವವಾಯು, ಚರ್ಮರೋಗ, ಬುದ್ಧಿವಿಕಲ್ಪ, ತುರಿಕೆ, ಮೂಳೆಗೆ ಸಂಬಂಧಿಸಿದ ತೊಂದರೆ.

ಮಂತ್ರ: 

ಉತ್ಪಾತರೂಪೋ ಜಗತಶ್ಚಂದ್ರಪುತ್ರೋ ಮಹಾದ್ಯುತಿಃ |

ಸೂರ್ಯಪ್ರಿಯಕರೋ ವಿದ್ವಾನ್ ಪೀಡಾಂ ಹರತು ಮೇ ಬುಧಃ || 

 

ಗುರು

ಚರ್ಮರೋಗ, ಹೊಟ್ಟೆಯ ತೊಂದರೆ, ಸಕ್ಕರೆ ಕಾಯಿಲೆ, ನೆನಪಿನ ಶಕ್ತಿ ಕಡಿಮೆ, ಜ್ವರ, ಕಿವಿಯ ತೊಂದರೆ, ಮೂಲವ್ಯಾಧಿ, ಕೀವಿನಿಂದ ಹುಣ್ಣು, ಕುರು, ಶ್ವಾಸಕೋಶದ ತೊಂದರೆ.

ಮಂತ್ರ: 

ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇ ರತಃ |

ಅನೇಕಶಿಷ್ಯಸಂಪೂರ್ಣಃ ಪೀಡಾಂ ಹರತು ಮೇ ಗುರುಃ || 

 

ಶುಕ್ರ

ಗುಹ್ಯೇಂದ್ರಿಯ ಕಾಯಿಲೆಗಳು, ಸಕ್ಕರೆ ಕಾಯಿಲೆ, ಕಣ್ಣಿನ ತೊಂದರೆ, ಮೂತ್ರದ ಕಾಯಿಲೆ, ನಿಶಕ್ತಿ, ಹಲ್ಲುನೋವು.

ಮಂತ್ರ: 

ದೈತ್ಯಮಂತ್ರೀ ಗುರುಸ್ತೇಷಾಂ ಪ್ರಾಣದಶ್ಚ ಮಹಾಮತಿಃ |

ಪ್ರಭುಸ್ತಾರಾಗ್ರಹಾಣಾಂ ಚ ಪೀಡಾಂ ಹರತು ಮೇ ಭೃಗುಃ || 

 

ಶನಿ

ಉದರ ಕೈಕಾಲು, ಪಾದ, ನರಗಳಿಂದ ತೊಂದರೆ, ಅಸ್ತಮ, ಪಾರ್ಶ್ವವಾಯು, ಮೂರ್ಛೆರೋಗ, ಕೆಮ್ಮು.

ಮಂತ್ರ: 

ಸೂರ್ಯಪುತ್ರೋ ದೀರ್ಘ ದೇಹೋ ವಿಶಾಲಾಕ್ಷಃ ಶಿವಪ್ರಿಯಃ |

ಮಂದಚಾರಃ (ದೀರ್ಘಚಾರಃ) ಪ್ರಸನ್ನಾತ್ಮಾ ಪೀಡಾಂ ಹರತು ಮೇ ಶನಿಃ || 

ಗೋವಿನಲ್ಲೇಕೆ ಮೂವತ್ತಮೂರು ಕೋಟಿ ದೇವತೆಗಳು? ...

ರಾಹು

ತೊನ್ನು, ಚರ್ಮದ ಕಾಯಿಲೆ, ಕ್ಯಾನ್ಸರ್, ಕುಷ್ಠ, ಸಿಡುಬು, ಜ್ವರ, ಕೈಕಾಲು ನೋವು.

ಮಂತ್ರ:

ಮಹಾಶಿರಾ (ಮಹಾಶೀರ್ಷೋ) ಮಹಾವಕ್ತ್ರೋ ದೀರ್ಘದಂಷ್ಟ್ರೋ ಮಹಾಬಲಃ |

ಅತನುಶ್ಚೋರ್ಧ್ವ-ಕೇಶಶ್ಚ ಪೀಡಾಂ ಹರತು ಮೇ ತಮಃ ||


ಕೇತು

ಮಾನಸಿಕ ತೊಂದರೆ, ಉದರ ತೊಂದರೆ, ವೃಣ, ಸುಟ್ಟಗಾಯಗಳಿಂದ ತೊಂದರೆ, ಉರಿಮೂತ್ರ, ವಾತ, ತೊಂದರೆ, ಬೆನ್ನಿಗೆ ಸಂಬಂಧಿಸಿದ ತೊಂದರೆ.

ಮಂತ್ರ: ಅನೇಕರೂಪವರ್ಣೈಶ್ಚ ಶತಶೋಥ ಸಹಸ್ರಶಃ |

ಉತ್ಪಾತರೂಪೋ ಜಗತಃ ಪೀಡಾಂ ಹರತು ಮೇ ಶಿಖೀ

ನಿಮ್ಮ ರಾಶಿಗೆ ಗುರು ಬಲ ಇದೆಯಾ? ಇಲ್ಲದಿದ್ದರೆ ಗುರು ಬಲ ಸಂಪಾದನೆ ಹೇಗೆ? ...

 

 

PREV
click me!

Recommended Stories

ಶ್ರೀಕೃಷ್ಣ ಜನ್ಮಾಷ್ಟಮಿಗೆ ನಿಮ್ಮ ಪ್ಲೇಲಿಸ್ಟ್‌ನಲ್ಲಿ ಇರಬೇಕಾದ ಕನ್ನಡದ ಟಾಪ್‌ Jukebox ಇದು
Krishna Janmashtami 2026 : ಶತಮಾನಗಳ ನಂತ್ರ ಐದು ಗ್ರಹಗಳ ಸಂಯೋಗ, 4 ರಾಶಿಗಳಿಗೆ ಸುವರ್ಣಯುಗ ಪ್ರಾರಂಭ