ಈ ಶಿವರಾತ್ರಿ ಬಳಿಕ ಈ ರಾಶಿಯವರಿಗೆ ಭರ್ಜರಿ ಧನಲಾಭ

By Suvarna NewsFirst Published Mar 12, 2021, 1:50 PM IST
Highlights

ಮಹಾಶಿವರಾತ್ರಿಯ ದಿನ ಗ್ರಹಗಳ ಚಲನೆಯಲ್ಲಿ ಬದಲಾವಣೆಯಾಗುತ್ತದೆ. ಆ ಕಾರಣದಿಂದ ಈ ಕೆಳಗಿನ ರಾಶಿಯವರಿಗೆ ಆಕಸ್ಮಿಕ ಧನಲಾಭ ಪ್ರಾಪ್ತವಾಗಿದೆ.

ನಿನ್ನೆ ಮಹಾಶಿವರಾತ್ರಿಯ ದಿನ ಗ್ರಹಗಳ ಚಲನೆಯಲ್ಲಿ ಬದಲಾವಣೆಯಾಗಿದೆ. ಮಕರ ರಾಶಿಯಿಂದ ಕಂಭ ರಾಶಿಗೆ ಬುಧನ ಪ್ರವೇಶವಾಗಿದೆ. ಈಗ ಸೂರ್ಯ, ಶುಕ್ರನ ಜೊತೆಗೆ ಬುಧನೂ ಕುಂಭ ರಾಶಿ ಪ್ರವೇಶಿಸಿದಂತಾಗಿದೆ. ಇದರಿಂದ ಒಂದಷ್ಟು ರಾಶಿಗಳಿಗೆ ಹಣದ ಹರಿವು ಹರಿದು ಬರಲಿದೆ. ಆ ರಾಶಿಗಳು ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡ್ಕೊಂಡು ಬರೋಣ. 

1. ಮಿಥುನ ರಾಶಿ
ಈವರೆಗೆ ನೀವೆಷ್ಟು ಪ್ರಯತ್ನಪಟ್ಟರೂ ಹಣ ಸೋರಿ ಹೋಗುತ್ತಲೇ ಇತ್ತು. ಸದಾ ಒಂದಲ್ಲ ಒಂದು ಆಮಿಷಗಳು, ಆಸೆಗಳು ನೀವು ಕಷ್ಟದಿಂದ ಉಳಿಸಿಟ್ಟ ಹಣವನ್ನು ಪೋಲಾಗುವ ಹಾಗೆ ಮಾಡುತ್ತಿದ್ದವು. ಇದರಿಂದಾಗಿ ನಿಮ್ಮ ಬದುಕಲ್ಲಿ ಸದಾ ಹಣದ ಸಮಸ್ಯೆ ಆತಂಕ ಸೃಷ್ಟಿಸುತ್ತಿತ್ತು. ಆದರೆ ಈಗ ನಿಮ್ಮ ಟೈಮ್ ಬಂದಿದೆ. ಕೈಯಲ್ಲಿರುವ ಹಣ ಉಳಿಯೋದು ಮಾತ್ರವಲ್ಲ, ನೀವು ಊಹೆಯೂ ಮಾಡದ ಕಡೆಗಳಿಂದ ಹಣದ ಹರಿವು ಬರಬಹುದು. ಹೊಸ ವ್ಯಾಪಾರ, ವ್ಯವಹಾರಕ್ಕಿಳಿದರೆ ತಕ್ಷಣಕ್ಕೇ ಉತ್ತಮ ಫಲವಿದೆ. ಜೊತೆಗೆ ಯಾವುದಾದರೂ ಸಾಗಣೆ, ಪೂರೈಕೆ, ವಸ್ತುಗಳ ಡೆಲಿವರಿಯಂಥಾ ಕೆಲಸಗಳಲ್ಲಿ ಆದಾಯ ಹೆಚ್ಚಲಿದೆ. ಆದರೂ ಈವರೆಗಿನ ಕಷ್ಟದಿಂದ ನೀವು ಹಣ ಶಾಶ್ವತವಲ್ಲ, ಅದಕ್ಕಿಂತ ಸಂಬಂಧ, ಪ್ರೀತಿಗೆ ಬೆಲೆ ಹೆಚ್ಚು ಅನ್ನುವುದನ್ನು ಕಂಡು ಕೊಂಡಿದ್ದೀರಿ. ಹೀಗಾಗಿ ಹಣ ಬಂದರೂ ಹಿರಿಹಿರಿ ಹಿಗ್ಗಲಾರಿರಿ. ಬದಲಿಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನಸ್ಥಿತಿ ಬರಬಹುದು. ಮನಸ್ಸು ಕೊಂಚ ವೈರಾಗ್ಯ, ಆಧ್ಯಾತ್ಮದತ್ತ ವಾಲಬಹುದು. ಉಳಿದಂತೆ ನಿಮ್ಮ ಮನಃಶಾಂತಿ ಹೆಚ್ಚಲಿದೆ. ಗೆಳೆಯರು ಹೆಚ್ಚುವರು. ಸಂಗಾತಿ ಜೊತೆಗೆ ಉತ್ತಮ ಸಂಬಂಧವಿರುತ್ತದೆ. 

ಪರಶಿವನ ಈ ಹೆಸರುಗಳ ಪ್ರಭಾವ ಏನು ನಿಮಗೆ ಗೊತ್ತೇ? ...

2. ವೃಶ್ಚಿಕ ರಾಶಿ
ಈವರೆಗೆ ಒತ್ತಡದಿಂದ, ದೈಹಿಕ ಸಮಸ್ಯೆಗಳಿಂದ ಕೂಡಿದ್ದ ಬದುಕು ಈಗ ಉತ್ತಮವಾಗುತ್ತಾ ಹೋಗಲಿದೆ. ಬದುಕಿನ ಆನಂದ ಹೆಚ್ಚಲಿದೆ. ಹೊಸ ಹೊಸ ಅವಕಾಶಗಳು ನಿಮ್ಮ ಬದುಕನ್ನು ಹಸನಾಗಿಸಲಿವೆ. ಹೊಸ ಹೊಸ ಅವಕಾಶಗಳು ಬರಬಹುದು. ನಿಮ್ಮ ಕಾರ್ಯಚಟುವಟಿಕೆಗಳಲ್ಲೆಲ್ಲ ಉತ್ತಮ ಪ್ರಗತಿ, ಮುನ್ನಡೆ ಇದೆ. ಹೊಸ ಅವಕಾಶಗಳಿಂದ ಆತ್ಮಸ್ಥೈರ್ಯ ಹೆಚ್ಚಲಿದೆ. ಕುಟುಂಬದ ಜೊತೆಗೂ ಸಂತೋಷದ ಕ್ಷಣಗಳನ್ನು ಕಳೆಯಲಿದ್ದೀರಿ. ನಿಮ್ಮ ವೈಯುಕ್ತಿಕ ಬದುಕು ಇನ್ನಷ್ಟು ಸುಂದರವಾಗಲಿದೆ. ನೀವು ಈವರೆಗೆ ಕನಸು ಕಾಣುತ್ತಿದ್ದ ವಿಚಾರಗಳೆಲ್ಲ ನನಸಾಗಲಿವೆ. ಆರ್ಥಿಕವಾಗಿ ಹಿಂದೆಂದಿಗಿಂತ ಸಬಲರಾಗುತ್ತೀರಿ. ಉದ್ಯಮ, ಅಧ್ಯಯನ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿಯಾಗಲಿದೆ. ನೀವು ಈ ಹಿಂದೆ ಪಾಲುದಾರಿಕೆಯಲ್ಲಿ ಬಂಡವಾಳ ಹೂಡಲು, ಕೆಲಸ ಮಾಡಲು ಹಿಂಜರಿಯುತ್ತಿದ್ದಿರಿ. ಆದರೆ ಈಗ ಧೈರ್ಯದಿಂದ ಮುಂದೆ ಹೋಗಬಹುದು. ಪ್ರವಾಸ, ಮನಸ್ಸಿಗೆ ಖುಷಿ ಕೊಡುವ ಚಟುವಟಿಕೆಗಳಲ್ಲಿ ಸಮಯ ಕಳೆಯುವಿರಿ. ದೈವಾನುಗ್ರವಿರುವ ಕಾರಣ ಬೇರೇನಕ್ಕೂ ಚಿಂತಿಸಬೇಕಾಗಿಲ್ಲ. ಇತರರ ಮನಸ್ಸಿಗೂ ಮುದ ನೀಡುವಿರಿ. ಕುಟುಂಬದ ವ್ಯವಹಾರ, ಆಸ್ತಿ ಪಾಲಿನ ವಿಚಾರಗಳಲ್ಲಿ ನಿಮಗೆ ನ್ಯಾಯ ಸಿಗುತ್ತದೆ. ವಹಿವಾಟುಗಳಲ್ಲಿ ಜಯ ಸಿಗುತ್ತದೆ.

ಎಷ್ಟೊಂದು ಸುಲಭವಾಗಿ ಒಲಿಯುವವನು ಈ ಶಿವ! ...

 



3. ಧನು ರಾಶಿ
ಇದು ನಿಮ್ಮ ಅದೃಷ್ಟದ ಕಾಲ. ಈವರೆಗೆ ಕನವರಿಸುತ್ತಿದ್ದ ಸಂಗತಿಗಳಿಗೆಲ್ಲ ರೆಕ್ಕೆಪುಕ್ಕ ಮೂಡಬಹುದು. ನಿಮ್ಮಿಷ್ಟದ ವ್ಯವಹಾರ, ಉದ್ಯೋಗದಲ್ಲಿ ನೀವು ಸ್ವತಂತ್ರವಾಗಿ ತೊಡಗಿಸಿಕೊಳ್ಳಲು ಇದು ಸಕಾಲ. ನಿಮಗೀಗ ಹೆಚ್ಚಚ್ಚು ಜವಾಬ್ದಾರಿ ಬರುತ್ತದೆ. ಆದರೆ ಆ ಜವಾಬ್ದಾರಿ ಹೊರೆಯಾಗುವುದಿಲ್ಲ. ಬದಲಿಗೆ ಹೂವೆತ್ತಿದ ಹಾಗೆ ನೀವು ಕೆಲಸ ಕಾರ್ಯಗಳನ್ನು ಮಾಡುತ್ತಾ ಜವಾಬ್ದಾರಿಯನ್ನು ನಿಭಾಯಿಸುತ್ತೀರಿ. ನಿಮಗೆ ಪ್ರೇಮದ ವಿಚಾರದಲ್ಲಿ ಸದ್ಯಕ್ಕೆ ಶುಭವಾರ್ತೆ ಸಿಗಲಿದೆ. ನೀವು ನಾಯಕರಾಗಿ ಮಿಂಚುವಿರಿ. ನಿಮ್ಮ ಲೀಡರ್‌ಶಿಪ್‌ಗೆ ಎಲ್ಲರ ಬೆಂಬಲ, ಸಹಕಾರ ಸಿಗಲಿದೆ. ಆಗಾಗ ಕೈ ಕೊಡುತ್ತಿದ್ದ ಆರೋಗ್ಯ ಈಗ ಸ್ಥಿರವಾಗಿರುತ್ತದೆ. ಉತ್ತಮ ಆರೋಗ್ಯದಿಂದ ಮಾನಸಿಕವಾಗಿಯೂ ನೀವು ಸಬಲರಾಗುತ್ತಾ ಹೋಗುವಿರಿ. ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳೆಲ್ಲ ಪರಿಹಾರವಾಗುತ್ತವೆ. ವ್ಯಾಪಾರ ಕ್ಷೇತ್ರಕ್ಕಿಳಿದರೆ ಅಲ್ಲೂ ಉತ್ತಮ ಪ್ರಗತಿ ಇದೆ. ಸಂಗಾತಿಯೊಂದಿಗೆ ನಿಮ್ಮ ಬಾಂಧವ್ಯ ಹೆಚ್ಚುವುದು. ಮನೆಗೆ ಮಹಾಲಕ್ಷ್ಮಿ ಬರುವ ಸೂಚನೆಗಳು ಕಾಣಬಹುದು. ನಿಮ್ಮ ಈ ಅದೃಷ್ಟದಿಂದ ಕೈ ಹಾಕಿದ ಕ್ಷೇತ್ರಗಳಲ್ಲೆಲ್ಲ ಉತ್ತಮ ಫಲ ದೊರೆಯುವುದು. ಆದರೂ ಎಚ್ಚರಿಕೆ ತಪ್ಪಿ ನಡೆಯದಿರಿ. ಗುರು ಹಿರಿಯರಿಗೆ ಗೌರವ ತೋರಿಸುವುದನ್ನು ಮರೆಯದಿರಿ. ಜೊತೆಗೆ ಕಷ್ಟಕಾಲದಲ್ಲಿರುವವರಿಗೆ ಸಾಧ್ಯವಾದಷ್ಟೂ ಸಹಾಯ ಮಾಡಿ. ಟೈಮ್ ಚೆನ್ನಾಗಿರುವಾಗ ಮಾಡುವ ಇಂಥಾ ಒಳ್ಳೆಯ ಕೆಲಸಗಳು ಮುಂದೆ ನಾವು ಕಷ್ಟಕ್ಕೆ ಬಿದ್ದಾಗ ನಮ್ಮನ್ನು ಕೈ ಹಿಡಿದು ಮೇಲಕ್ಕೆತ್ತುತ್ತವೆ. 

ಮನೆಯಲ್ಲಿ ನೆಗಟಿವ್ ಎನರ್ಜಿ ನಿವಾರಿಸಲು ಉಪ್ಪಿನ ವಾಸ್ತು ಪರಿಹಾರ ...

 

click me!