ಜೇಬಲ್ಲಿ ದುಡ್ಡಿಲ್ಲ ಅನ್ನೋ ದಾರಿದ್ರ್ಯ ಬರಲು ಕಾರಣ ಹೇಳಿದ್ದಾನೆ ಚಾಣಕ್ಯ!

By Suvarna NewsFirst Published Jul 24, 2023, 1:23 PM IST
Highlights

ಮುಳ್ಳನ್ನು ಮುಳ್ಳಿಂದಲೇ ತೆಗೆಯುವ, ಜೀವನ ಪಾಠಗಳನ್ನು ಹೇಳುವ ಚಾಣಾಕ್ಯ ಮನೆಯಲ್ಲಿ ದಾರಿದ್ರ್ಯ ಬಡತನ, ತರುವ ಬಗ್ಗೆ ಹೇಳಿದ್ದಾರೆ. ನಮ್ಮ ಕೆಲವು ಅಭ್ಯಾಸಗಳೆ ನಾವು ಬಡತನಕ್ಕೆ ಜಾರಲು ಕಾರಣವಂತೆ.

ಕೌಟಿಲ್ಯ ಎಂದೇ ಹೆಸರಾದ ಚಾಣಕ್ಯ ಜೀವನ ಪಾಠಗಳನ್ನು ನಿಷ್ಠುರವಾಗಿ ಸೊಗಸಾಗಿ ಹೇಳುತ್ತಾರೆ. ಅಂದು ಅವರು ಹೇಳಿದ ಪಾಠ ಇಂದಿಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿಯೇ ಅವರ ಮಾತನ್ನು ಜನ ಇವತ್ತಿಗೂ ಭಯ ಭಕ್ತಿಯಿಂದ ಸ್ವೀಕರಿಸುತ್ತಾರೆ. ಅವುಗಳ ಪಾಲನೆಯಿಂದ ತಮ್ಮ ಬದುಕಿನಲ್ಲಿ ಆದ ಅನೇಕ ಬದಲಾವಣೆಗಳನ್ನು ಸ್ವತಃ ಅನುಭವಿಸಿದವರೂ ಇದ್ದಾರೆ. ಚಾಣಕ್ಯ ದಾರಿದ್ರ್ಯದ ಬಗ್ಗೆ ಪರಿಣಾಮಕಾರಿ ಮಾತನ್ನು ಹೇಳಿದ್ದಾರೆ. ಯಾಕೋ ಕೈಯಲ್ಲಿ ಹಣ ಉಳೀತಿಲ್ಲ, ನಾವು ಬಡವರಾಗ್ತಾ ಹೋಗ್ತಾ ಇದ್ದೀವಿ. ನಮ್ಮ ಆರ್ಥಿಕ ಸ್ಥಿತಿ ಕುಸಿಯುತ್ತ ಇದೆ ಅಂತ ಅಂದುಕೊಂಡವರು ಚಾಣಕ್ಯನ ಮಾತುಗಳಲ್ಲಿ ಅದಕ್ಕೆ ಪರಿಹಾರ ಸಿಗಬಹುದಾ ಅಂತ ನೋಡಬಹುದು.

ಆಚಾರ್ಯ ಚಾಣಕ್ಯ ನೀತಿಶಾಸ್ತ್ರದಲ್ಲಿ ವ್ಯಕ್ತಿಯ ಕೆಲವು ಅಭ್ಯಾಸಗಳ ಬಗ್ಗೆ ಮಾತನಾಡುತ್ತಾರೆ. ಅಂತಹ ಅಭ್ಯಾಸಗಳು ಕ್ರಮೇಣ ಅವನ ಜೀವನದ ದಿಕ್ಕನ್ನು ಬದಲಿಸಬಹುದು. ಅಲ್ಲದೆ ಬದುಕನ್ನು ಬಡವಾಗಿಸಬಹುದು. ಅದಕ್ಕಾಗಿಯೇ ಈ ಕೆಲವು ಕೆಟ್ಟ ಅಭ್ಯಾಸಗಳನ್ನು ಬಿಡಬೇಕು ಎಂದು ಕೌಟಿಲ್ಯ ಒತ್ತಿ ಹೇಳಿದ್ದರು.

Latest Videos

ಗುಟ್ಟನ್ನು ಕಾಯ್ದಿಡದೇ ಇರುವ ಗುಣ
ಎಷ್ಟೋ ಜನರಿಗೆ ಗುಟ್ಟಿನ ಸಂಗತಿಗಳನ್ನು ಗುಟ್ಟಾಗಿ ಇಡಲು ತಿಳಿಯದು. ಎಲ್ಲವನ್ನೂ ಅಗತ್ಯ ಇದ್ದೋ ಇಲ್ಲದಿದ್ದರೂ ಹೇಳುತ್ತಾ ಹೋಗೋದು ಸ್ವಭಾವ. ಇಂಥಾ ಅತಿಯಾದ ವರ್ತನೆ ನಿಮ್ಮನ್ನು ಬಡತನಕ್ಕೆ ತಳ್ಳಬಹುದು ಅಂತಾನೆ ಚಾಣಾಕ್ಯ. ನೀವು ಯಾವ ಹುದ್ದೆಯಲ್ಲೇ ಇರಿ, ಪ್ರಾಮಾಣಿಕತೆಯಿಂದ ಕೆಲಸ ಮಾಡಿ. ಅದೇ ರೀತಿ ರಹಸ್ಯಗಳನ್ನು ರಹಸ್ಯಗಳಾಗಿ ಕಾಯ್ದುಕೊಳ್ಳುವ ಗುಣವೂ ನಿಮ್ಮಲ್ಲಿರಲಿ. ಆಗ ಅಭಿವೃದ್ಧಿ ಸಾಧ್ಯ ಅನ್ನುವುದು ಆಚಾರ್ಯ ಚಾಣಕ್ಯರ ಮಾತು.

ಕಪ್ಪು ಇರುವೆಗೆ ಆಹಾರ, ಕಂಬಳಿ ದಾನ; ಇದು ಶನಿದೇವನ ಕೃಪೆಯ ಗುಟ್ಟು ..!

ಗಲೀಜಾಗಿರುವುದು
ತಾವಿರುವ ಜಾಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೇ ಇರುವುದು, ಸ್ವಚ್ಛವಾದ ಬಟ್ಟೆಗಳನ್ನು ಧರಿಸದೇ ಇರುವುದು, ಸುತ್ತಲಿನ ಪರಿಸರವನ್ನು ಕೆಡಿಸಿಕೊಂಡು ಗಲೀಜಾಗಿ ಬದುಕುವ ಜನರು ಯಾವಾಗಲೂ ಬಡತನದ ಜೀವನವನ್ನು ನಡೆಸುತ್ತಾರೆ. ಅದಕ್ಕಾಗಿ ಯಾವಾಗಲೂ ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಚಾಣಕ್ಯ ಹೇಳುತ್ತಾರೆ.

ಮುಂಗೋಪ, ಕಟು ಮಾತು
ಬಾಯಿಗೆ ಬಂದಹಾಗೆ ಮಾತಾಡೋದು ನಿಮ್ಮನ್ನು ಬಡತನಕ್ಕೆ (poverty) ನೂಕಬಹುದು. ಒರಟು ಮಾತನ್ನು ಆಡುವವರನ್ನು ಲಕ್ಷ್ಮೀ ದೇವಿಯೂ ಕ್ಷಮಿಸುವುದಿಲ್ಲ. ಅವರ ಬಗ್ಗೆ ದೇವರು(god) ಕೂಡ ಅಸಮಾಧಾನಗೊಳ್ಳುತ್ತಾರೆ. ಪರಿಸ್ಥಿತಿ ಎಂಥದ್ದೇ ಆಗಿರಲಿ ಕಟುವಾಗಿ ಮಾತನಾಡುವ ಮುನ್ನ ಯೋಚಿಸಬೇಕು. ಯಾವಾಗಲೂ ಎಲ್ಲರೊಂದಿಗೂ ಸಿಹಿಯಾಗಿ, ಮೃದುವಾಗಿ ಮಾತನಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಕಟು ಮಾತುಗಳು ವ್ಯಕ್ತಿಯ ಸಂಬಂಧವನ್ನು ಕೆಡಿಸುವುದು ಮಾತ್ರವಲ್ಲ, ಬಡತನಕ್ಕೂ ಕಾರಣವಾಗಬಹುದು ಎನ್ನುತ್ತಾರೆ ಚಾಣಕ್ಯ.

ಹಗಲು ನಿದ್ರಿಸುವ ಸೋಮಾರಿತನ
ಚಾಣಕ್ಯನ ಪ್ರಕಾರ, ಸೂರ್ಯಾಸ್ತದ ನಂತರ ಸಂಜೆ ಮಲಗುವವರು ಯಾವಾಗಲೂ ಬಡವರಾಗಿರುತ್ತಾರೆ. ಈ ಸಮಯದಲ್ಲಿ ಮಲಗುವವರನ್ನು ತಾಯಿ ಲಕ್ಷ್ಮೀದೇವಿ ಎಂದಿಗೂ ಆಶೀರ್ವದಿಸುವುದಿಲ್ಲ. ಆ ಕಾರಣಕ್ಕೆ ಕಾಯಿಲೆ(disease) ಇರುವವರೂ ಕೂಡ ಆ ಸಮಯದಲ್ಲಿ ಎದ್ದು ಕೂರಬೇಕು ಎಂದು ಹಿರಿಯರು ಹೇಳುತ್ತಾರೆ. ಆಕಸ್ಮಿಕವಾಗಿಯೂ ಆ ವೇಳೆ ಮಲಗುವ(sleep habits) ಅಭ್ಯಾಸವನ್ನು ಬಿಡಬೇಕು ಎನ್ನುತ್ತಾರೆ ಚಾಣಕ್ಯ. ಸೋಮಾರಿತನವು ಕೆಟ್ಟ ಅಭ್ಯಾಸವಾಗಿದೆ ಎಂದು ಚಾಣಕ್ಯ ನೀತಿ ಹೇಳುತ್ತದೆ, ಇದು ವ್ಯಕ್ತಿಯೊಬ್ಬನಿಗೆ ಕೆಲಸದಲ್ಲಿ ಯಶಸ್ವಿ ಕಾಣಲು ಬಿಡುವುದಿಲ್ಲ. ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಮೊದಲು ಸೋಮಾರಿತನವನ್ನು ಬಿಡಿ ಎಂದು ಚಾಣಕ್ಯ ಸಲಹೆ ನೀಡುತ್ತಾರೆ. ಚಾಣಾಕ್ಯ ಹೇಳುವ ಈ ನೀತಿಪಾಠಗಳು ಬದುಕಿನಲ್ಲಿ ಶಿಸ್ತನ್ನು ತರುತ್ತವೆ. ಬದುಕಿನ ಶಿಸ್ತೇ ನಮ್ಮನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ.

Numerology Today: ಮುಂಜಾನೆಯ ಕಲರವದಲ್ಲಿ ನಿಮ್ಮ ಲಕ್ಕಿ ನಂಬರ್ ನೆನಪು ಮಾಡ್ಕೊಳ್ಳಿ; ಇಂದಿನ ಭವಿಷ್ಯ ನೋಡಿ..!

click me!