ಗಣೇಶ ಚತುರ್ಥಿ 2022: ರಾಶಿ ಪ್ರಕಾರ, ಗಣಪತಿ ಬಪ್ಪನಿಗೆ ಈ ವಸ್ತುಗಳನ್ನು ಅರ್ಪಿಸಿ

By Suvarna NewsFirst Published Aug 30, 2022, 7:06 PM IST
Highlights

ಈ ಬಾರಿಯ ಗಣೇಶ ಚತುರ್ಥಿ ಹಬ್ಬವು ಬುಧವಾರ, ಆಗಸ್ಟ್ 31ರಂದು ಸಂಭ್ರಮದಿಂದ ಜರುಗುತ್ತಿದೆ. ಈ ದಿನ ನಿಮ್ಮ ರಾಶಿಗನುಸಾರ ಗಣೇಶನಿಗೆ ನೈವೇದ್ಯ ಅರ್ಪಿಸುವುದರಿಂದ ನಿಮ್ಮೆಲ್ಲ ಆಸೆಗಳು ಈಡೇರುತ್ತವೆ. 

10 ದಿನಗಳ ದೊಡ್ಡ ಹಬ್ಬ ಗಣೇಶ ಚತುರ್ಥಿಯ ಸಂಭ್ರಮ ಆರಂಭವಾಗಿದೆ. ದೇಶಾದ್ಯಂತ ವಿಜೃಂಭಣೆಯಿಂದ ಸಕಲ ಸಡಗರದಿಂದ ನಡೆವ ಈ ಹಬ್ಬದ ಸಂದರ್ಭದಲ್ಲಿ, ಮನೆಮನೆಗೂ ಬರುವ ವಿನಾಯಕನಿಗೆ ನೂರಾರು ಬಗೆಯ ತಿಂಡಿ ತೀರ್ಥಗಳನ್ನು ನೀಡಿ ಉಪಚರಿಸಲಾಗುತ್ತದೆ.

ಮೊದಲೇ ಗಣೇಶ ತಿಂಡಿಪೋತ. ಅವನಿಗೆ ಕೋಡುಬಳೆ, ಚಕ್ಕುಲಿ, ಮೋದಕ, ಹೋಳಿಗೆ, ಕಡಲೆ, ಲಡ್ಡು, ಕರಿಗಡುಬು, ಹೋಳಿಗೆ ಎಲ್ಲವೂ ಇಷ್ಟ. ನೀವು ಈ ಬಾರಿ ನಿಮ್ಮ ರಾಶಿ ಪ್ರಕಾರ ಯಾವ ತಿಂಡಿ ಕೊಟ್ಟರೆ ಗಣೇಶನನ್ನು ಬೇಗ ಒಲಿಸಿಕೊಳ್ಳಬಹುದು, ಯಾವ ತಿಂಡಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತದೆ ನೋಡೋಣ. 

ಮೇಷ(Aries)
ಮೇಷ ರಾಶಿಯವರು ಗಣೇಶನಿಗೆ ಬೂಂದಿ ಲಡ್ಡುಗಳನ್ನು ಅರ್ಪಿಸಬೇಕು. ಇದು ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುತ್ತದೆ. 
ವೃಷಭ(taurus)
ಗಣೇಶ ಮೋದಕ ಪ್ರಿಯ. ವೃಷಭ ರಾಶಿಯ ಜನರು ಗಣೇಶನಿಗೆ ಮೋದಕವನ್ನು ಅರ್ಪಿಸಬೇಕು.ಇದರೊಂದಿಗೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. 
ಮಿಥುನ(Gemini)
ಮಿಥುನ ರಾಶಿಯವರು ಗಣೇಶನಿಗೆ 21 ದೂರ್ವೆವನ್ನು ಅರ್ಪಿಸಬೇಕು. ಇದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ.

ಗಣೇಶ ಚತುರ್ಥಿ 2022: ಗಣಪತಿ ಶ್ಲೋಕಗಳು ಮತ್ತು ಅವುಗಳ ಅರ್ಥ

ಕರ್ಕಾಟಕ(Cancer)
ಈ ರಾಶಿಯವರು ಗಣೇಶನಿಗೆ ಬರ್ಫಿಯನ್ನು ಅರ್ಪಿಸಬೇಕು. ಇದರೊಂದಿಗೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. 
ಸಿಂಹ(Leo)
ಸಿಂಹ ರಾಶಿಯವರು ಗಣೇಶನಿಗೆ ಬೆಲ್ಲವನ್ನು ಅರ್ಪಿಸಬೇಕು. ಇದರಿಂದ ಗಣೇಶನಿಗೆ ತುಂಬಾ ಸಂತೋಷವಾಗುತ್ತದೆ. 
ಕನ್ಯಾ(Virgo)
ಕನ್ಯಾ ರಾಶಿಯವರು ಗಣೇಶನಿಗೆ ಮೂಂಗ್ ದಾಲ್ ಹಲ್ವಾವನ್ನು ಅರ್ಪಿಸಬೇಕು. ಶೀಘ್ರದಲ್ಲೇ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. 
ತುಲಾ(Libra) 
ತುಲಾ ರಾಶಿಯವರು ಗಣೇಶನಿಗೆ ಬೂಂದಿ ಲಡ್ಡುಗಳನ್ನು ಅರ್ಪಿಸಬೇಕು. ಇದರಿಂದಾಗಿ ಶ್ರೀ ಗಣೇಶನು ಬಹುಬೇಗನೆ ಪ್ರಸನ್ನನಾಗುತ್ತಾನೆ. 
ವೃಶ್ಚಿಕ(Scorpio) 
ವೃಶ್ಚಿಕ ರಾಶಿಯವರು ಗಣೇಶನಿಗೆ ಬೂಂದಿ ಮತ್ತು ಲಡ್ಡುಗಳನ್ನು ಅರ್ಪಿಸಬೇಕು. ಇದರೊಂದಿಗೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. 
ಧನು(Sagittarius) 
ಧನು ರಾಶಿಯವರು 10 ದಿನಗಳ ಕಾಲ ಗಣೇಶನಿಗೆ ಬಾಳೆಹಣ್ಣನ್ನು ನೈವೇದ್ಯವಾಗಿ ಅರ್ಪಿಸಬೇಕು. ಇದು ನಿಮ್ಮ ಎಲ್ಲಾ ಆಸೆಗಳನ್ನು ಸಹ ಪೂರೈಸುತ್ತದೆ. 
ಮಕರ(Capricorn) 
ಮಕರ ರಾಶಿಯ ಜನರು ಗಣೇಶನಿಗೆ ಮೋತಿಚೂರ್ ಲಡ್ಡುಗಳನ್ನು ಅರ್ಪಿಸಬೇಕು. ನಿಮ್ಮ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳಿ ಮತ್ತು ಶ್ರೀ ಗಣೇಶನನ್ನು ಪ್ರಾರ್ಥಿಸಿ. ಇದರಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ಶೀಘ್ರದಲ್ಲೇ ಈಡೇರುತ್ತವೆ.

ಗಣೇಶ ಚತುರ್ಥಿ 2022: ಈ ದಿನ ಇಂಥ ತಪ್ಪೆಲ್ಲ ಮಾಡಿ ಗಣಪತಿಗೆ ಕೋಪ ತರಿಸ್ಬೇಡಿ!

ಕುಂಭ(Aquarius) 
ಕುಂಭ ರಾಶಿಯ ಜನರು ಗಣೇಶನಿಗೆ ಬೂಂದಿ ಲಡ್ಡುಗಳನ್ನು ಅರ್ಪಿಸಬೇಕು. ಇದರಿಂದ ನಿಮ್ಮ ಜೀವನದಲ್ಲಿ ಏನೇ ಅಡೆತಡೆಗಳು ಬರುತ್ತಿದ್ದರೂ ವಿಘ್ನಹರ್ತವು ಈ ತೊಂದರೆಗಳನ್ನು ಶೀಘ್ರದಲ್ಲಿಯೇ ನಿವಾರಿಸುತ್ತಾನೆ. 
ಮೀನ(Pisces)
ಮೀನ ರಾಶಿಯವರು ಗಣೇಶನಿಗೆ ಲಡ್ಡುಗಳು, ಬೂಂದಿ ಲಡ್ಡುಗಳು ಅಥವಾ ಯಾವುದೇ ರೀತಿಯ ಲಡ್ಡುಗಳನ್ನು ನೀಡಬಹುದು.
 
ಶ್ರೀ ಗಣೇಶನ ನೈವೇದ್ಯದಲ್ಲಿ ತುಳಸಿ ಎಲೆಗಳನ್ನು ಬಳಸಬಾರದು ಎಂಬುದನ್ನು ಎಲ್ಲಾ ರಾಶಿಚಕ್ರ ಚಿಹ್ನೆಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ಗಣೇಶನಿಗೆ ಕುಂಕುಮ ಮತ್ತು ಅಕ್ಷತೆ ಹಾಕಬೇಕು. ಆದರೆ ಗಣೇಶನ ಪೂಜೆಯಲ್ಲಿ ಬಳಸುವ ಅಕ್ಷತೆ ಒಡೆದಿರಬಾರದು ಎಂಬುದನ್ನು ನೆನಪಿನಲ್ಲಿಡಿ. 

ಜೀವನದಲ್ಲಿ ಏನಾದರೂ ದೊಡ್ಡ ಸಮಸ್ಯೆ ಎದುರಾದರೆ ಗಣೇಶ ಚತುರ್ಥಿಯಿಂದ ಅನಂತ ಚತುರ್ಥಿಯವರೆಗೆ ಗಣೇಶನ ಮುಂದೆ ಚತುರ್ಮುಖ ದೀಪ ಹಚ್ಚಿ 21 ದೂರ್ವೆಯನ್ನು ಅರ್ಪಿಸಬೇಕು. ಈ ಪರಿಹಾರವನ್ನು ಇಡೀ 10 ದಿನಗಳವರೆಗೆ ಮಾಡಬೇಕು. ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!