ಇಷ್ಟೆಲ್ಲಾ ಸರ್ಕಸ್ ಆದ್ಮೇಲೆ ರಾಧಿಕಾ ಕೈ ಸೇರಿತು ‘ಆದಿಲಕ್ಷ್ಮೀ ಪುರಾಣ’

Published : Jul 15, 2019, 11:09 AM IST
ಇಷ್ಟೆಲ್ಲಾ ಸರ್ಕಸ್ ಆದ್ಮೇಲೆ ರಾಧಿಕಾ ಕೈ ಸೇರಿತು ‘ಆದಿಲಕ್ಷ್ಮೀ ಪುರಾಣ’

ಸಾರಾಂಶ

ತೆರೆಗೆ ಬರಲು ಸಿದ್ಧವಾಗಿದೆ ರಾಧಿಕಾ ಪಂಡಿತ್ ‘ಆದಿಲಕ್ಷ್ಮೀ ಪುರಾಣ’ | ಇತ್ತೀಚಿಗೆ ಟ್ರೇಲರ್ ರಿಲೀಸ್ |  ಪ್ರೆಸ್‌ಮೀಟ್‌ನಲ್ಲಿ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ರು ಯಶ್ 

ಸ್ಯಾಂಡಲ್ ವುಡ್ ರಾಕಿಂಗ್ ಕಪಲ್ ಯಶ್- ರಾಧಿಕಾ ಪಂಡಿತ್ ಇಬ್ಬರೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ಕೆಜಿಎಫ್-2 ನಲ್ಲಿ ಬ್ಯುಸಿಯಾಗಿದ್ರೆ, ರಾಧಿಕಾ ಪಂಡಿತ್ ಆದಿಲಕ್ಷ್ಮೀ ಪುರಾಣದಲ್ಲಿ ಬ್ಯುಸಿಯಾಗಿದ್ದಾರೆ. ರಾಧಿಕಾ ಅವರ ಆದಿಲಕ್ಷ್ಮೀ ಪುರಾಣ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಯಶ್ ಆಗಮಿಸಿದ್ದರು. 

ರಾಧಿಕಾ ತುಂಬಾ ಟ್ಯಾಲೆಂಟೆಡ್‌ ನಟಿ: ಯಶ್‌

ಈ ವೇಳೆ ಯಶ್ ಪತ್ನಿಯ ನಟನೆ ಬಗ್ಗೆ ಹೊಗಳುತ್ತಾ, ಸಿನಿಮಾ ಬಗ್ಗೆ ಇಂಟರೆಸ್ಟಿಂಗ್ ವಿಚಾರವೊಂದನ್ನು ಹೇಳಿದ್ದಾರೆ.  ‘ ಸುಹಾಸಿನಿ ಮೇಡಂ ನನಗೆ ಕಾಲ್ ಮಾಡಿ ಸ್ಕ್ರಿಪ್ಟ್ ಬಗ್ಗೆ ಮಾತನಾಡಿದರು. ಕಥೆ ಕೇಳಿ ನಾನು ಇಂಪ್ರೆಸ್ ಆದೆ. ಕೂಡಲೇ ರಾಕ್ ಲೈನ್ ವೆಂಕಟೇಶ್ ಗೆ ತಿಳಿಸಿದೆ. ಅವರಿಗೂ ಸ್ಕ್ರಿಪ್ಟ್ ಇಷ್ಟವಾಯ್ತು. ನಿರ್ಮಾಣ ಮಾಡಲು ಒಪ್ಪಿಕೊಂಡರು. ಹಾಗೇ ರಾಧಿಕಾ ಕೂಡಾ ಒಪ್ಪಿಕೊಂಡರು. ಅಲ್ಲಿಂದ ಆದಿಲಕ್ಷ್ಮೀ ಪುರಾಣ ಶುರುವಾಯ್ತು’ ಎಂದಿದ್ದಾರೆ. 

ರಾಧಿಕಾಗಾಗಿ ಯಶ್ ಮಾಡಿದ್ರು ಶಪಥ

ಯಶ್-ಸುಹಾಸಿನಿ ಮಾಸ್ಟರ್ ಪೀಸ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಪಘಾತದಲ್ಲಿ ತಂದೆ ಆಸ್ಪತ್ರೆ ದಾಖಲಾದ ಬೆನ್ನಲ್ಲೇ ರಾಜ್ಯ ಪ್ರಶಸ್ತಿ ವಿಜೇತ ಯುವ ನಟ ಶವವಾಗಿ ಪತ್ತೆ
ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ