ಮುಗಿಯದ ವಿಷ್ಣು ಸ್ಮಾರಕ ವಿವಾದ

Published : Nov 20, 2016, 03:19 PM ISTUpdated : Apr 11, 2018, 01:12 PM IST
ಮುಗಿಯದ ವಿಷ್ಣು ಸ್ಮಾರಕ ವಿವಾದ

ಸಾರಾಂಶ

ಸರ್ಕಾರ ಗುರುತು ಮಾಡಿರುವ ಜಾಗ ಕೂಡ ವಿವಾದ ಸೃಷ್ಟಿಸಿದೆ. ಸರ್ಕಾರ ಗುರುತು ಮಾಡಿದ ಜಾಗ ಗೋಮಾಳ. ಮೂರು ತಲೆಮಾರಿನಿಂದ ಕಷಿ ಮಾಡಿಕೊಂಡು ಬಂದಿರುವ ಹಾಲಾಳು ಗ್ರಾಮದ ನಾರಾಯಣ ಕುಟುಂಬ ವಿಷ್ಣು ಸ್ಮಾರಕಕ್ಕೆ ಜಮೀನು ನೀಡುವುದಿಲ್ಲ ಅಂತ ಪಟ್ಟು ಹಿಡ್ದಿದೆ

ಡಾ.ವಿಷ್ಣುವರ್ಧನ್​ ಸ್ಮಾರಕ ವಿವಾದ ಬೆಂಗಳೂರಿನಿಂದ ಮೈಸೂರಿಗೆ ಶಿಫ್ಟ್​ ಆಗಿದೆ. ವಿಷ್ಣು ಸಮಾಧಿಗೆ ಜಾಗ ನೀಡುವ ಸಂಬಂಧ ಬೆಂಗಳೂರಿನ ಅಭಿಮಾನ್​ ಸ್ಟುಡಿಯೋದಲ್ಲಿ ವಿವಾದ ಉಂಟಾದ ಮೇಲೆ ಮೈಸೂರಲ್ಲಿ ಸ್ಮಾರಕ ನಿರ್ಮಾಣಕ್ಕೆ ತೀರ್ಮಾನ ಮಾಡಲಾಯಿತು. ಇದಕ್ಕಾಗಿ ರಾಜ್ಯ ಸರ್ಕಾರ ಹಾಲಾಳು ಗ್ರಾಮದ ಸರ್ವೆ ನಂಬರ್​ 8 ರಲ್ಲಿ 5 ಎಕರೆ ಜಾಗವನ್ನ ಗುರುತಿಸಿದೆ. ಆದ್ರೆ, ಸರ್ಕಾರ ಗುರುತು ಮಾಡಿರುವ ಜಾಗ ಕೂಡ ವಿವಾದ ಸೃಷ್ಟಿಸಿದೆ. ಸರ್ಕಾರ ಗುರುತು ಮಾಡಿದ ಜಾಗ ಗೋಮಾಳ. ಮೂರು ತಲೆಮಾರಿನಿಂದ ಕಷಿ ಮಾಡಿಕೊಂಡು ಬಂದಿರುವ ಹಾಲಾಳು ಗ್ರಾಮದ ನಾರಾಯಣ ಕುಟುಂಬ ವಿಷ್ಣು ಸ್ಮಾರಕಕ್ಕೆ ಜಮೀನು ನೀಡುವುದಿಲ್ಲ ಅಂತ ಪಟ್ಟು ಹಿಡ್ದಿದೆ.. 40 ಸದಸ್ಯರ ಕುಟುಂಬದ ಜೀವನ ನಿರ್ವಹಣೆ ಸರ್ಕಾರ ಗುರುತು ಮಾಡಿರುವ ಭೂಮಿಯಿಂದಲೇ ನಡೀತಿದೆ. ಹಾಗಾಗಿ ಭೂಮಿಯನ್ನು ವಿಷ್ಣು ಸ್ಮಾರಕಕ್ಕೆ ನೀಡುವುದಾದರೆ ನಮ್ಮ ಸಮಾಧಿಯನ್ನೂ ಇಲ್ಲಿಯೇ ಮಾಡಲಿ ಅಂತ ತಮ್ಮ ಅಸಹಾಯಕತೆ ಹೊರ ಹಾಕಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Kannada Serials: ಸೀರಿಯಲ್​ ನಾಯಕಿಯರು ಭಾರಿ ಸಂಕಷ್ಟದಲ್ಲಿ! ದೀಪಾ, ನಿಧಿ ಆಯ್ತು ಈಗ ಭಾರ್ಗವಿಯೂ ಜೈಲಿಗೆ- ಏನಾಗ್ತಿದೆ ಇಲ್ಲಿ? ​
Amruthadhaare Serial: ಬಲು ಕಿಲಾಡಿ ಈ ಅಜ್ಜಿ! ಕೊನೆ ಆಸೆ ಈಡೇರಿಸಿಕೊಳ್ತೇನಂತ ಸತ್ತೇ ಹೋಗೋದಾ? ಮಾಡಿದ್ದೇನು ನೋಡಿ!