ರಿಯಲ್ ಲೈಫ್‌ 'ಸುಬ್ಬಲಕ್ಷ್ಮಿ' ಕೈ ಹಿಡಿದ ಕಿರುತೆರೆ ನಟ!

Published : Aug 12, 2019, 10:56 AM IST
ರಿಯಲ್ ಲೈಫ್‌ 'ಸುಬ್ಬಲಕ್ಷ್ಮಿ'  ಕೈ ಹಿಡಿದ ಕಿರುತೆರೆ ನಟ!

ಸಾರಾಂಶ

ಕಿರುತೆರೆಯ ಖ್ಯಾತ ನಟ ಸುಬ್ಬಲಕ್ಷ್ಮೀ ಗುರುಮೂರ್ತಿ ಅಲಿಯಾಸ್ ಭವಾನಿ ಸಿಂಗ್ ತನ್ನ ಜೀವನದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಇದನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಧಿಕೃತ ಮಾಡಿದ್ದಾರೆ.

'ಚರಣದಾಸಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಭವಾನಿ ಸಿಂಗ್ ಕೆಲ ದಿನಗಳ ಹಿಂದೆ ತನ್ನ ಜೀವದ ಗೆಳೆತಿ ಪಂಕಜಾ ಶಿವಣ್ಣ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಪಂಕಜಾ ಹಾಗೂ ಭವಾನಿ ಸಿಂಗ್ 2 ವರ್ಷಗಳಿಂದ ಸ್ನೇಹಿತರಾಗಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದು ಗುರು ಹಿರಿಯರೊಡನೆ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋ ಹಾಗೂ ವಿಡಿಯೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಗುರುಮೂರ್ತಿ ಅಲಿಯಾಸ್ ಭವಾನಿ ಸಿಂಗ್ 'ಚರಣದಾಸಿ', ‘ಸುಬ್ಬಲಕ್ಷ್ಮಿ ಸಂಸಾರ' ಅಭಿನಯಿಸಿದ್ದು ಸದ್ಯಕ್ಕೆ 'ರಕ್ಷಾ ಬಂಧನ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದಳಪತಿ ವಿಜಯ್-ರಜನಿಕಾಂತ್: ಈ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು? ಎಲ್ಲಾ ಆಸ್ತಿ ರಹಸ್ಯ ಬಯಲು!
ಸ್ಲಿಮ್ & ಫಿಟ್ ಆಗಿರುವ ‘ರಾಧಾ ಕಲ್ಯಾಣ’’ ನಟಿ Radhika Rao ಮುದ್ದಾದ ಫ್ಯಾಮಿಲಿ ಫೋಟೊ