
ಮುಂಬೈ(ಫೆ.25): ನಿನ್ನೆ ಮಧ್ಯರಾತ್ರಿ ದುಬೈನಲ್ಲಿ ನಿಧನರಾದ ಬಾಲಿವುಡ್ ಹೆಸರಾಂತ ನಟಿ ಶ್ರೀದೇವಿ ಅವರ ಅಂತ್ಯಸಂಸ್ಕಾರ ನಾಳೆ ಮುಂಬೈ'ನಲ್ಲಿ ನೆರವೇರಲಿದೆ.
13 ಆಸನವುಳ್ಳ ಖಾಸಗಿ ಜಟ್'ಅನ್ನು ಉದ್ಯಮಿ ಅನಿಲ್ ಅಂಬಾನಿ ದುಬೈಗೆ ಕಳುಹಿಸಲಿದ್ದು ನಾಳೆ ಮೃತದೇಹ ಮುಂಬೈಗೆ ತರಲಾಗುತ್ತದೆ.
ದುಬೈನಲ್ಲಿ ಶವಸಂಸ್ಕಾರ ಪೂರ್ಣಗೊಂಡಿದ್ದು ಕುಟುಂಬದವರು ವರದಿಗಾಗಿ ಕಾಯುತ್ತಿದ್ದಾರೆ. ನಾಳೆ ಮಧ್ಯಾಹ್ನ ಸಾರ್ವಜನಿಕರ ಅಂತಿಮ ದರ್ಶನದ ನಂತರ ಅಂತ್ಯಸಂಸ್ಕಾರ ನೆರವೇರಲಿದೆ.ಖಾಸಗಿ ಕಾರ್ಯಕ್ರಮದ ಪ್ರಯುಕ್ತ ದುಬೈಗೆ ತೆರಳಿದ್ದಾಗ ಹೃದಯಾಘಾತದಿಂದ ಶ್ರೀದೇವಿ(54) ಮೃತಪಟ್ಟಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.