ಆರತಿ ಬೆಳಗಿ ಸೋನು ಸೂದ್‌ಗೆ ಇಡ್ಲಿ ಮಾರಾಟಗಾರರ ಧನ್ಯವಾದ

Published : Jun 07, 2020, 06:04 PM ISTUpdated : Jun 07, 2020, 06:15 PM IST
ಆರತಿ ಬೆಳಗಿ ಸೋನು ಸೂದ್‌ಗೆ ಇಡ್ಲಿ ಮಾರಾಟಗಾರರ ಧನ್ಯವಾದ

ಸಾರಾಂಶ

ಕಾರ್ಮಿಕರ ಪಾಲಿನ ಆಪತ್ಭಾಂದವ| ಮುಂದುವರೆದಿದೆ ಬಾಲಿವುಡ್‌ ನಟ ಸೋನು ಸೂದ್ ಸೇವೆ| ತಮಿಳುನಾಡಿನ ಇನ್ನೂರಕ್ಕೂ ಅಧಿಕ ಇಡ್ಲಿ ಮಾರಾಟಗಾರರನ್ನು ಸುರಕ್ಷಿತವಾಗಿ ತವರಿಗೆ ತಲುಪಿಸಿದ ಸೋನು

ಮುಂಬೈ(ಜೂ.07): ಕೊರೋನಾ ಮಹಾಮಾರಿಯಿಂದ ದೇಶದಲ್ಲಿ ಅನೇಕರ ಜೀವನ ಶೈಲಿ ಬದಲಾಗಿದೆ. ಈ ಹಿಂದೆ ಯಾವತ್ತೂ ಹೊರಗೆ ಓಡಾಡುತ್ತಿದ್ದವರು ಇಂದು ಅಗತ್ಯವಿದ್ದಾಗಲಷ್ಟೇ ಹೊರ ಹೋಗುತ್ತಿದ್ದಾರೆ. ಈ ಬದಲಾದ ಜೀವನಶೈಲಿಗೆ ಪ್ರಮುಖ ಕಾರಣ ಲಾಕ್‌ಡೌನ್. ಆದರೆ ಈ ಲಾಕ್‌ಡೌನ್‌ನಿಂದ ಅತಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವುದು ಕಾರ್ಮಿಕ ವರ್ಗ. ಅತ್ತ ಕೆಲಸ ಇಲ್ಲದೇ, ಇತ್ತ ಹಣವಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಿರುವಾಗ ಮಹಾರಾಷ್ಟ್ರದಲ್ಲಿ ಸಿಲುಕಿದ ಕಾರ್ಮಿಕರ ಪಾಲಿಗೆ ಆಪತ್ಭಾಂದವನಾಗಿ ನೆರವಿಗೆ ಬಂದಿದ್ದು ಸೋನು ಸೂದ್. ಕಾರ್ಮಿಕರಿಗಾಗಿ ಬಸ್, ವಿಮಾನ, ರೈಲು ಹೀಗೆ ತಮ್ಮಿಂದ ಹೇಗೆ ಸಾಧ್ಯವೋ ಹಾಗೆ ಕಾರ್ಮಿಕರನ್ನು ಕಳುಹಿಸಿಕೊಟ್ಟಿದ್ದಾರೆ.

ಕಾರ್ಮಿಕರ ಪಾಲಿನ ದೇವದೂತನಂತೆ ಅವರ ಸೇವೆ ಮಾಡುತ್ತಿರುವ ಸೋನು ಸೂದ್ ಸದ್ಯ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ತಮಿಳುನಾಡಿನ ಸುಮಾರು 700 ಇಡ್ಲಿ ಮಾರಾಟಗಾರರನ್ನು ಅವರ ತವರೂರಿಗೆ ಕಳುಹಿಸಿಕೊಟ್ಟಿದ್ದಾರೆ. ಅವರ ಈ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಅದಕ್ಕೂ ವಿಶೇಷವೆಂದರೆ ನಿಸ್ವಾರ್ಥವಾಗಿ ಈ ಕಾರ್ಮಿಕರ ಸೇವೆ ಮಾಡುತ್ತಿರುವ ಸೋನು ಸೂದ್‌ಗೆ ಇಡ್ಲಿ ಮಾರಾಟಗಾರರು ಆರತಿ ಬೆಳಗಿ ಧನ್ಯವಾದ ತಿಳಿಸಿದ್ದಾರೆ.

ಸದ್ಯ ಈ ಆರತಿ ಬೆಳಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಮಹಾಮಾರಷ್ಟ್ರದಲ್ಲಿ ಸಿಲುಕಿದ್ದ ಕರ್ನಾಟಕದ ಕಾರ್ಮಿಕರನ್ನು ಹತ್ತು ಬಸ್‌ಗಳಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಸೋನು ಸೂದ್ ಕಳುಹಿಸಿಕೊಡುವ ಮೂಲಕ ಎಲ್ಲರ ಹೃದಯ ಗೆದ್ದಿದ್ದರು. ತೆರೆ ಮೇಲೆ ವಿನ್ ಪಾತ್ರ ಮಾಡುವ ಸೋನು ನಿಜ ಜೀವನದ ಹೀರೋ ಎಂಬ ಬಿರುದು ಪಡೆದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!