
ಕೌನ್ ಬನೇಗಾ ಕರೋಡ್ ಪತಿಯಲ್ಲಿ ಕೇಳಿದ ರಾಮಾಯಣದ ಪ್ರಶ್ನೆಯೊಂದಕ್ಕೆ ಸೋನಾಕ್ಷಿ ಸಿನ್ಹಾ ತಡಬಡಾಯಿಸಿ ಟ್ರೋಲ್ ಗೆ ಒಳಗಾಗಿದ್ದರು. ಇದಕ್ಕೆ ಸೋನಾಕ್ಷಿ ಖಡಕ್ ಉತ್ತರ ನೀಡಿದ್ದಾರೆ.
ಉತ್ತರ ಗೊತ್ತಿದ್ರೂ ಏಳು ಕೋಟಿ ಜಸ್ಟ್ ಮಿಸ್!
ಡಿಯರ್ ಟ್ರೋಲ್ಸ್, ನನಗೆ ಪೈಥಾಗೋರಸ್ ಪ್ರಮೇಯ ಮರೆತು ಹೋಗಿದೆ. ಮರ್ಚೆಂಟ್ ಆಫ್ ವೇನಿಸ್, ಪೀರಿಯಾಡಿಕ್ ಟೇಬಲ್, ಮೊಘಲ್ ಸಾಮ್ರಾಜ್ಯದ ಬಗ್ಗೆ ಎಲ್ಲಾ ಮರೆತು ಹೋಗಿದೆ. ನಿಮಗೆ ಮಾಡಲು ಕೆಲಸ ಇಲ್ಲದಿದ್ದರೆ, ಸಮಯ ಇದ್ದರೆ ಇದನ್ನೂ ಮೆಮೆ ಮಾಡಿ. I love Memes ಎಂದು ಉತ್ತರ ಕೊಟ್ಟಿದ್ದಾರೆ.
ಕೌನ್ ಬನೇಗಾ ಕರೋಡ್ ಪತಿ ಹಾಟ್ ಸೀಟ್ ನಲ್ಲಿ ಕುಳಿತ ರಾಜಸ್ಥಾನ ಮೂಲದ ಸ್ಪರ್ಧಿಗೆ ಸಪೋರ್ಟ್ ಮಾಡಲು ದಬಾಂಗ್ ಗರ್ಲ್ ಸೋನಾಕ್ಷಿ ಸಿನ್ಹಾ ಭಾಗಿಯಾಗಿದ್ದರು. ಹಿಂದೂಗಳ ಮಹಾಕಾವ್ಯ ರಾಮಾಯಣಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡಲು ತಡಬಡಾಯಿಸಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಕಟು ವಿಮರ್ಶೆಗೆ ಒಳಗಾಗಿದ್ದರು.
ಕೋಟ್ಯಧಿಪತಿಯಲ್ಲಿ ರಾಮಾಯಣದ ಬಗ್ಗೆ ಉತ್ತರ ಗೊತ್ತಿಲ್ಲದೇ ಒದ್ದಾಡಿದ ಸೋನಾಕ್ಷಿ
ರಾಮಾಯಣದ ಪ್ರಕಾರ ಹನುಮಂತ ಯಾರಿಗಾಗಿ ಸಂಜೀವಿನಿ ಪರ್ವತದಿಂದ ಗಿಡಮೂಲಿಕೆ ತರಲು ಹೋಗಿದ್ದನು?
A. ಸುಗ್ರೀವ
B. ಲಕ್ಷ್ಮಣ
c. ಸೀತಾ
D. ರಾಮ
ಎಂದು ಕೇಳಲಾಗಿತ್ತು. ಸೋನಾಕ್ಷಿ ಗೊಂದಲಕ್ಕೀಡಾದರು. ಲೈಫ್ ಲೈನ್ ಬಳಸಿಕೊಂಡರು. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದಾರೆ. ನೆಟ್ಟಿಗರು #YoSonakshiSoDumb' ಎಂದು ಹ್ಯಾಶ್ ಟ್ಯಾಗ್ ಹುಟ್ಟುಹಾಕಿ ಕಾಲೆಳೆಯುತ್ತಿದ್ದಾರೆ. ಟ್ವಿಟರ್ ನಲ್ಲಿ #YoSonakshiSoDumb ಟ್ರೆಂಡಿಗ್ ನಲ್ಲಿದೆ. ನೆಟ್ಟಿಗರು ಬಿಡಿ ಇಂತದ್ದೊಂದು ಸುಲಭವಾದ ಪ್ರಶ್ನೆಗೆ ಲೈಫ್ ಲೈನ್ ಬಳಸಿದ್ದಕ್ಕೆ ಸ್ವತಃ ಅಮಿತಾಬ್ ಕೂಡಾ ತಮಾಷೆ ಮಾಡಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.