ಶಾಸ್ತ್ರಿ ಮತ್ತೆ ಕರ್ನಾಟಕದಲ್ಲಿ ಹುಟ್ಟದೇ ಇರಲಿ ಎಂದು ನೋವು ತೋಡಿಕೊಂಡ ಸುಮಾ ಶಾಸ್ತ್ರಿ

Published : Mar 22, 2018, 10:57 AM ISTUpdated : Apr 11, 2018, 12:44 PM IST
ಶಾಸ್ತ್ರಿ ಮತ್ತೆ ಕರ್ನಾಟಕದಲ್ಲಿ ಹುಟ್ಟದೇ ಇರಲಿ ಎಂದು ನೋವು ತೋಡಿಕೊಂಡ ಸುಮಾ ಶಾಸ್ತ್ರಿ

ಸಾರಾಂಶ

ಎಲ್ ಎನ್ ಶಾಸ್ತ್ರಿ ಅವರಿಗೆ ಮರುಹುಟ್ಟು  ಅನ್ನೋದಿದ್ದರೆ ಅವರು ಕರ್ನಾಟಕದಲ್ಲಿ  ಹುಟ್ಟದೇ ಇರಲಿ. - ಚಿತ್ರೋದ್ಯಮ ನಿರ್ಲಕ್ಷ್ಯ ಮಾಡಿದ್ದರಿಂದಲೇ ಅವರು ಅಷ್ಟು ಬೇಗ ತೀರಿಕೊಂಡರು.  ಸುಮಾ ಶಾಸ್ತ್ರಿ ತಮ್ಮ ಪತಿಯನ್ನು ಕಳೆದುಕೊಂಡ  ನೋವನ್ನು ಹೊರಹಾಕಿದ್ದು  ಹೀಗೆ. ಅವರ ಸಂಕಟ ಆಕ್ರೋಶವಾಗಿ ಹೊರಹೊಮ್ಮಿತು.

ಬೆಂಗಳೂರು (ಮಾ. 22): ಎಲ್ ಎನ್ ಶಾಸ್ತ್ರಿ ಅವರಿಗೆ ಮರುಹುಟ್ಟು  ಅನ್ನೋದಿದ್ದರೆ ಅವರು ಕರ್ನಾಟಕದಲ್ಲಿ  ಹುಟ್ಟದೇ ಇರಲಿ. - ಚಿತ್ರೋದ್ಯಮ ನಿರ್ಲಕ್ಷ್ಯ ಮಾಡಿದ್ದರಿಂದಲೇ ಅವರು ಅಷ್ಟು ಬೇಗ ತೀರಿಕೊಂಡರು.  ಸುಮಾ ಶಾಸ್ತ್ರಿ ತಮ್ಮ ಪತಿಯನ್ನು ಕಳೆದುಕೊಂಡ  ನೋವನ್ನು ಹೊರಹಾಕಿದ್ದು  ಹೀಗೆ. ಅವರ ಸಂಕಟ ಆಕ್ರೋಶವಾಗಿ ಹೊರಹೊಮ್ಮಿತು.

ಕನ್ನಡ  ಚಿತ್ರರಂಗ ಕನ್ನಡದ ಪ್ರತಿಭೆಗಳಿಗೆ ಅವಕಾಶ  ಕೊಡಲೇ ಇಲ್ಲ. ಚಿತ್ರೋದ್ಯಮದಲ್ಲಿ ಪ್ರತಿಭಾವಂತರಿಗೆ ಬೆಲೆ ಇಲ್ಲ ಅನ್ನುವ ಎದೆಯಾಳದ ಸಿಟ್ಟನ್ನು  ಅವರು ನೇರವಾದ ಮಾತುಗಳಲ್ಲಿ ತೆರೆದಿಟ್ಟರು. ಪ್ರತಿಭಾವಂತರು ಕರ್ನಾಟಕದಲ್ಲಿ ಹುಟ್ಟಲೇ
ಬಾರದು ಎಂದು ಹೇಳಿಯೂ ಬಿಟ್ಟರು.  ‘ಎಲ್‌ಎನ್ ಶಾಸ್ತ್ರಿ ಏನು ಅನ್ನೋದು ಎಲ್ಲರಿಗೂ  ಗೊತ್ತಿದೆ. ಅನೇಕ ಸೂಪರ್‌ಹಿಟ್ ಹಾಡು  ಕೊಟ್ಟಿದ್ದಾರೆ ಅವರು. ಸದಾ ಹೊಸದನ್ನು  ಕೊಡಲಿಕ್ಕೆಂದೇ ತುಡಿಯುತ್ತಿದ್ದರು. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಹಾಡುತ್ತಾ  ಖುಷಿಪಟ್ಟವರು ಅವರು. ಆದರೆ ಕನ್ನಡ ಚಿತ್ರರಂಗ  ಮಾಡಿದ್ದೇನು? ಅದು ತಾರತಮ್ಯ ಮಾಡಿತು.  ಪ್ರತಿಭಾವಂತರನ್ನು ಕಡೆಗಣಿಸಿತು. ಉತ್ತರ  ಭಾರತದ ಗಾಯಕರಿಗೆ ಮಣೆ ಹಾಕಲಾಯಿತು.  ಇಲ್ಲಿಯೇ ಇದ್ದು ಸಾಧಿಸಬೇಕು ಅಂದುಕೊಂಡಿದ್ದ  ಶಾಸ್ತ್ರಿಯವರಿಗೆ ಈ ಬೆಳವಣಿಗೆ ಆಘಾತ ನೀಡಿತು.  ಅವಕಾಶಗಳನ್ನು ಕಾಯುತ್ತಾ ಕೂತವರಿಗೆ ನಿರಾಸೆ   ಕಾದಿತ್ತು. ಅದೇ ಕೊರಗಿನಿಂದಲೇ ಅವರಿಗೆ  ಕ್ಯಾನ್ಸರ್ ಬಂತು. ಅದು ಅವರನ್ನು ನನ್ನಿಂದ ದೂರ
ಮಾಡಿತು.’  ಸುಮಾ ಶಾಸ್ತ್ರಿ ಮಾತುಗಳಲ್ಲಿ ವಿಷಾದ ಮತ್ತು  ನೋವಿತ್ತು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಅಜ್ಜಿ ಸಾವಿನಲ್ಲೂ ಗಟ್ಟಿಯಾಗಿ ನಿಂತಿದ್ದ ಗಿಲ್ಲಿ ನಟನಿಗೆ ಕಣ್ಣೀರು ಹಾಕಿಸಿದ ರಕ್ಷಿತಾ ಶೆಟ್ಟಿ!
ಇಷ್ಟು ದಿನ ಸಂಧ್ಯಾ ಎಲ್ಲಿದ್ಲು, ಭಾರ್ಗವಿ ಬಳಿ ಯಾಕೆ ಬರ್ಲಿಲ್ಲ? ಅರ್ಜುನ್ ಪ್ರಶ್ನೆಗೆ ಸಂಧ್ಯಾ ಹತ್ತಿರ ಉತ್ತರ ಇಲ್ಲ