ರಸ್ತೆ ಆಪಘಾತದಲ್ಲಿ ಬಾಲ ನಟ ಸಾವು!

Published : Jul 19, 2019, 02:10 PM ISTUpdated : Jul 19, 2019, 02:22 PM IST
ರಸ್ತೆ ಆಪಘಾತದಲ್ಲಿ ಬಾಲ ನಟ ಸಾವು!

ಸಾರಾಂಶ

ಹಿಂದಿ ಚಿತ್ರ ಹಾಗೂ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ 14 ವರ್ಷದ ಬಾಲ್ಯ ನಟ ಶಿವಲೇಖ್ ಸಿಂಗ್ ರಸ್ತೆ ಆಪಘಾವೊಂದರಲ್ಲಿ ನಿಧನರಾಗಿದ್ದಾರೆ.

ರಾಯಪುರ (ಜೂ.19):  ಅಯ್ಯೋ ವಿಧಿಯೇ, ಈ ಸಾವು ನ್ಯಾಯವೇ?

ಹಿಂದಿ ಧಾರಾವಾಹಿಗಳಲ್ಲಿ ತನ್ನ ಮುಗ್ಧ ನಟನೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದ 14 ವರ್ಷದ ಬಾಲ್ಯ ನಟ ಶಿವಲೇಖ್ ಸಿಂಗ್ ಅಪಘಾತವೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.

 

'ಬಾಲ್‌ವೀರ್' ಖ್ಯಾತಿಯ ಶಿವಲೇಖ್, ಮಾಧ್ಯಮವೊಂದಕ್ಕೆ ಸಂದರ್ಶನ ನೀಡಲು ಪೋಷಕರೊಂದಿಗೆ ಬಿಲಾಸ್‌ಪುರದಿಂದ ರಾಯ್ಪುರಕ್ಕೆ ತೆರಳುತ್ತಿದ್ದರು. ರಾಯಪುರಕ್ಕೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿದ ಲಾರಿಯೊಂದು ಇವರು ಪ್ರಯಾಣಿಸುತ್ತಿದ್ದ ಕಾರಿ ಡಿಕ್ಕಿ ಹೊಡೆದು, ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಶಿವಲೇಖ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿ ಲೇಖ್ನಾ, ತಂದೆ ಶೀವೇಂದ್ರ ಸಿಂಗ್ ಹಾಗೂ ಮತ್ತೊಬ್ಬರು ನವೀನ್ ಸಿಂಗ್‌ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.

ಛತ್ತೀಸ್‌ಘಡ ಮೂಲದ ಶೀವೇಂದ್ರ ಸಿಂಗ್ ಶೂಟಿಂಗ್‌ಗಾಗಿಯೇ ಮುಂಬೈನಲ್ಲಿ ವಾಸವಿದ್ದರು. ಬಾಲ್ ವೀರ್, ಸಸುರಾಲ್ ಸಿಮರ್ ಕಾ ಹಾಗೂ ಸಂಕಟಮೋಚಕ ಹನುಮಾನ್ ಧಾರಾವಾಹಿಗಳಲ್ಲದೇ, ಹಲವು ರಿಯಾಲಿಟಿ ಶೋಗಳಲ್ಲಿಯೂ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಮಕ್ಕಳಿಗೆ ಅಚ್ಚುಮೆಚ್ಚಿನ ನಟನಾಗಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?