ಸುಳ್ಳನ್ನು ಮಜವಾಗಿ ತೋರಿಸಿದ 'ಆದಿಲಕ್ಷ್ಮಿ'!

Published : Jul 19, 2019, 10:18 AM IST
ಸುಳ್ಳನ್ನು ಮಜವಾಗಿ ತೋರಿಸಿದ 'ಆದಿಲಕ್ಷ್ಮಿ'!

ಸಾರಾಂಶ

ನಾಯಕನ ಹೆಸರು ಆದಿ, ನಾಯಕಿ ಲಕ್ಷ್ಮಿ. ಇವರಿಬ್ಬರ ಪುರಾಣ ‘ಆದಿ ಲಕ್ಷ್ಮಿ ಪುರಾಣ’. ಇವತ್ತು ತೆರೆಗೆ ಬರುತ್ತಿರುವ ಚಿತ್ರದ ಬಗ್ಗೆ ಇಡೀ ತಂಡಕ್ಕೆ ತುಂಬಾ ನಿರೀಕ್ಷೆ ಇದೆ. ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಚಿತ್ರತಂಡದಲ್ಲಿ ಹೆಚ್ಚಾಗಿ ಮಹಿಳೆಯರನ್ನೇ ಒಟ್ಟಾಗಿಸಿ ಸಿನಿಮಾ ಮಾಡಿ ಮುಗಿಸಿದ್ದಾರೆ. ನಾಯಕ ನಿರೂಪ್‌ ಭಂಡಾರಿ, ನಾಯಕಿ ರಾಧಿಕಾ ಯಶ್‌ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರತಂಡ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿತ್ತು.

ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಅವರಿಗೆ ಮೊದಲು ಚಿತ್ರದ ಸ್ಕಿ್ರಪ್ಟ್‌ ತೋರಿಸಿದ್ದೇ ನಟ ಯಶ್‌. ಪುಟ್ಟದಾಗಿ ಕತೆ ಹೇಳಿ, ಚೆನ್ನಾಗಿದೆ ಎಂದಕೂಡಲೇ ರಾಕ್‌ಲೈನ್‌ ಚಿತ್ರ ಮಾಡಿಯೇಬಿಡುವ ತೀರ್ಮಾನಕ್ಕೆ ಬಂದಿದ್ದಾರೆ. ಇದಕ್ಕೆ ಅವರು ಸಾರಥಿಯಾಗಿ ಆಯ್ಕೆ ಮಾಡಿಕೊಂಡದ್ದು ತಮಿಳು ಮೂಲದ ಪ್ರಿಯಾ ಅವರನ್ನು. ನಾಯಕನ ಪಾತ್ರಕ್ಕೆ ನಿರೂಪ್‌ ಸೂಟ್‌ ಆಗುತ್ತಾರೆ ಎಂದುಕೊಂಡು ಅವರನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಅವರ ಅಣ್ಣ ಅನೂಪ್‌ ಭಂಡಾರಿ ಚಿತ್ರಕ್ಕೆ ಸಂಗೀತ ಮತ್ತು ಸಾಹಿತ್ಯ ನೀಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಪೋಷಕ ಪಾತ್ರದಲ್ಲಿ ತಾರಾ, ಸುಚೇಂದ್ರ ಪ್ರಸಾದ್‌ ಫಿಕ್ಸ್‌. ಪ್ರೀತಾ ಅವದ್ದು ಕ್ಯಾಮರಾ ಕಣ್ಣು. ನಾಯಕಿ ರಾಧಿಕಾ ಯಶ್‌ ‘ಲೈಟ್‌ ಸಬ್ಜೆಕ್ಟ್, ಫ್ಯಾಮಿಲಿ ಕುಳಿತು ನೋಡುವ ಚಿತ್ರ ಇದು. ಸುಳ್ಳನ್ನು ಎಷ್ಟುಮಜವಾಗಿ ತೋರಿಸಬಹುದೋ ಅಷ್ಟುಮಜವಾಗಿ ತೋರಿಸಿದ್ದಾರೆ. ಈ ರೀತಿಯ ಚಿತ್ರ ಇದೇ ನನಗೆ ಮೊದಲು. ಯಶ್‌ ಅವರೇ ಇದರ ಟ್ರೈಲರ್‌ ಬಿಡುಗಡೆ ಮಾಡಿದ್ದರು’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು.

ರಾಧಿಕಾ ತುಂಬಾ ಟ್ಯಾಲೆಂಟೆಡ್‌ ನಟಿ: ಯಶ್‌

ಹಿಂದೆ ‘ರಂಗಿತರಂಗ’ ಚಿತ್ರದಲ್ಲಿ ನಿರೂಪ್‌ ನಟನೆ ನೋಡಿ ಮೆಚ್ಚಿದ್ದು ರಾಕ್‌ಲೈನ್‌ ಈ ಚಿತ್ರಕ್ಕೆ ಅವರನ್ನೇ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣ. ಇನ್ನು ತಾರಾ ಅನುರಾಧ ಮತ್ತು ಸುಚೇಂದ್ರ ಪ್ರಸಾದ್‌ ಜೋಡಿ ಚಿತ್ರದ ಮತ್ತೊಂದು ಹೈಲೈಟ್‌. ‘ಅಂಬರೀಷ್‌ ನಂತರ ಒಳ್ಳೆಯ ಮನಸ್ಸಿರುವ ಅಣ್ಣ ಎಂದರೆ ಅದು ರಾಕ್‌ಲೈನ್‌. ಅವರ ಸಿನಿಮಾ ಗೆಲ್ಲಬೇಕು. ಇಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಚಿತ್ರವನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಎಲ್ಲರೂ ತಮಗೆ ಕೊಟ್ಟಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿದ್ದೇವೆ’ ಎಂದು ಹೇಳಿಕೊಂಡರು ತಾರಾ ಅನುರಾಧ.

ಕಡೆಯಲ್ಲಿ ಮಾತನಾಡಿದ ರಾಕಿಂಗ್‌ ಸ್ಟಾರ್‌ ಯಶ್‌, ‘ಮೊದಲು ಕತೆ ಕೇಳಿ ಖುಷಿಯಾಗಿತ್ತು. ಇದರ ಬಗ್ಗೆ ರಾಕ್‌ಲೈನ್‌ ಅವರಿಗೆ ಹೇಳಿದೆ. ಅವರು ಒಪ್ಪಿ ಸಿನಿಮಾ ಮಾಡಿದ್ದಾರೆ. ಅವರೇ ನಾಯಕಿಯಾಗಿ ರಾಧಿಕಾ ಮಾಡಿದರೆ ಹೇಗೆ? ಎಂದು ಕೇಳಿದರು, ಕಡೆಗೆ ರಾಧಿಕಾ ಕೂಡ ಒಪ್ಪಿಕೊಂಡಳು. ಅವಳು ನನಗಿಂತಲೂ ಒಳ್ಳೆಯ ನಟಿ. ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿದ್ದಾಳೆ. ಇಲ್ಲಿಯೂ ಒಳ್ಳೆಯ ನಟನೆ ಮಾಡಿದ್ದಾಳೆ. ಭಂಡಾರಿ ಸಹೋದರರ ಮೊದಲ ಪ್ರಯತ್ನ ‘ರಂಗಿತರಂಗ’ ನೋಡಿಯೇ ಖುಷಿಯಾಗಿತ್ತು. ಇಲ್ಲಿಯೂ ಅವರು ಚೆನ್ನಾಗಿ ಮಾಡಿದ್ದಾರೆ. ಸುಚೇಂದ್ರ ಪ್ರಸಾದ್‌ ಮತ್ತು ತಾರಾ ಇಲ್ಲಿ ಮತ್ತೊಬ್ಬ ನಾಯಕ ನಾಯಕಿಯರು’ ಎಂದು ಹೇಳಿಕೊಂಡರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?