
ಬೆಂಗಳೂರು (ಅ. 26): ಸದಾ ಏನಾದರೊಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುವ ಬಿಗ್ ಬಾಸ್ ವಿನ್ನರ್ ಪ್ರಥಮ್ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ.
ಸಿನಿಮಾರಂಗಕ್ಕೆ ಗುಡ್ ಬೈ ಹೇಳಿ ಬೆಂಗಳೂರು ಬಿಟ್ಟು ಊರಿಗೆ ಹೋಗ್ತಾರಂತೆ ಒಳ್ಳೇ ಹುಡುಗ ಪ್ರಥಮ್! ಪ್ರಥಮ್ ದಿಡೀರ್ ನಿರ್ಧಾರ ಚಿತ್ರರಂಗಕ್ಕೆ ಶಾಕ್ ನೀಡಿದೆ. ನಟ ಭಯಂಕರ ಸಿನಿಮಾನೆ ಇವರ ಕೊನೆಯ ಚಿತ್ರ. ಊರಿಗೆ ಹೋಗಿ ವ್ಯವಸಾಯ ಮಾಡ್ತೀನಿ ಅಂದಿದ್ದಾರೆ ಪ್ರಥಮ್.
ಬಿಗ್ ಬಾಸ್ ರಿಯಾಲಿಟಿ ಶೋ ಗೆದ್ದ ನಂತರ ಸಾಲು ಸಾಲು ಸಿನಿಮಾಗಳ ಆಫರ್ ಬಂದಿತ್ತು ಪ್ರಥಮ್ಗೆ. ಪ್ರಥಮ್ ಅಭಿನಯದ ಎಂಎಲ್ಎ ರಿಲೀಸ್ಗೆ ರೆಡಿಯಾಗಿದೆ. ಬೆಂಗಳೂರು ಸ್ಪೀಡ್ಗೆ ಹೊಂದಿಕೊಳ್ಳೋಕೆ ಆಗುತ್ತಿಲ್ಲವೆಂದು ಹೇಳಿದ್ದಾರೆ. ನಗರ ಜೀವನಕ್ಕೆ ಬೇಸತ್ತು ಒಳ್ಳೇ ಹುಡುಗ ಪ್ರಥಮ್ ಬೆಂಗಳೂರಿಗೆ ಗುಡ್ ಬೈ ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.