ಮುಖವಾಡ ಹಾಕಿದವರನ್ನು ದೂರ ಇಡಬೇಕಂತೆ ರಕ್ಷಿತ್ ಶೆಟ್ಟಿ!

By Web DeskFirst Published Oct 6, 2018, 3:41 PM IST
Highlights

ನಟ ಜಗ್ಗೇಶ್, ರಕ್ಷಿತ್ ಶೆಟ್ಟಿಗೆ ಸಲಹೆ ನೀಡಿದ್ದಾರೆ | ಮುಂಬರುವ ಚಿತ್ರಗಳ ಯಶಸ್ಸಿಗಾಗಿ ಹಾರೈಸಿದ್ದಾರೆ | ಮುಖವಾಡ ಹಾಕಿದವರನ್ನು ದೂರ ಇಡುವಂತೆ ಸಲಹೆ ನೀಡಿದ್ದಾರೆ 

ಬೆಂಗಳೂರು (ಅ. 06): ನಟ ರಕ್ಷಿತ್ ಶೆಟ್ಟಿಯನ್ನು ನವರಸ ನಾಯಕ ಜಗ್ಗೇಶ್ ಹೊಗಳಿದ್ದಾರೆ. ನಾನು ಕಂಡ ಅದ್ಭುತ ಕಲಾ ತಪಸ್ವಿ ಎಂದು ಹೇಳಿದ್ದಾರೆ. 

 

ನಾನುಕಂಡ ಅದ್ಭುತ ಸಜ್ಜನಿಕೆಯ ಕಲಾಬಂಧು.ಸದಾ ಸಿನಿಮಾಗಾಗಿ ತುಡಿಯುವ ಕಲಾತಪಸ್ವಿ.ಇವನಿಗೆ ದೇವರ ದಯೆಯಿಂದ ಇನ್ನು ಎತ್ತರದ ದಿನಗಳು ಕಾದಿದೆ ಎಂದು ನನ್ನಮನ ಹೇಳಿತು.ನಮ್ಮಯಶಸ್ಸು ಕಬಳಿಸಿ ಮೇಲೆರಲು ಅನೇಕರು ಮುಖವಾಡ ಹಾಕಿ ಬರುತ್ತಾರೆ.ಇದು ಪ್ರಾಪಂಚಿಕ ವಾಮಮಾರ್ಗ ತಂತ್ರ!ಇಂಥವರ ನಗುತ್ತ ಪಕ್ಕತಳ್ಳುವ ಕಲೆ ಕರಗತವಾಗಲಿ ಮುಂದೆ!
ಶುಭರಾತ್ರಿ.ಸವಿಗನಸು. pic.twitter.com/Vj6uCC2g4O

— ನವರಸನಾಯಕ ಜಗ್ಗೇಶ್ (@Jaggesh2)

ರಕ್ಷಿತ್ ಶೆಟ್ಟಿಯವರಿಗೆ ಮುಂದೆ ಯಶಸ್ಸಿನ ದಿನಗಳು ಕಾದಿವೆ.  ನಮ್ಮ ಯಶಸ್ಸನ್ನು ಬಳಸಿಕೊಂಡು ಮೇಲೆರಲು ಪ್ರಯತ್ನಿಸುತ್ತಿರುತ್ತಾರೆ. ಇಂಥವರನ್ನು ಪಕ್ಕಕ್ಕೆ ತಳ್ಳುವ ಕಲೆ ಕರಗತವಾಗಲಿ ಎಂದು ಹಾರೈಸಿದ್ದಾರೆ.

ಇದೇ ಸಂದರ್ಭದಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಜಗ್ಗೇಶ್ ಎಮೋಶನಲ್ ಆಗಿ ಉತ್ತರಿಸಿದ್ದಾರೆ. 

ನನ್ನ ಮಗನಷ್ಟೆ ಪ್ರೀತಿಸುವೆ.. https://t.co/SrxfXWhXUJ

— ನವರಸನಾಯಕ ಜಗ್ಗೇಶ್ (@Jaggesh2)    

ರಕ್ಷಿತ್ ಶೆಟ್ಟಿ ಹಾಗೂ ಜಗ್ಗೇಶ್ ವಾಸ್ತು ಪ್ರಕಾರ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. 

click me!