ಬಾಟಲ್ ಕ್ಯಾಪ್ ಚಾಲೆಂಜ್‌ ಮಾಡುವವರಿಗೆ ಸಲ್ಲು ಭಾಯ್ ಸಂದೇಶ

Published : Jul 15, 2019, 02:08 PM IST
ಬಾಟಲ್ ಕ್ಯಾಪ್ ಚಾಲೆಂಜ್‌ ಮಾಡುವವರಿಗೆ ಸಲ್ಲು ಭಾಯ್ ಸಂದೇಶ

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಬಾಟಲ್ ಕ್ಯಾಪ್ ಚಾಲೆಂಜ್‌ | ವಿಶಿಷ್ಟ ರೀತಿಯಲ್ಲಿ ಕ್ಯಾಪ್ ಓಪನ್ ಮಾಡಿದ ಸಲ್ಲು ಭಾಯ್ | 

ಸೋಷಿಯಲ್ ಮೀಡಿಯಾದಲ್ಲಿ ಬಾಟಲ್ ಕ್ಯಾಪ್ ಚಾಲೆಂಜ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಎಲ್ಲಾ ಸೆಲಬ್ರಿಟಿಗಳು ಈ ಚಾಲೆಂಜನ್ನು ಮಾಡುತ್ತಿದ್ದಾರೆ. 

ಬಾಟಲ್ ಕ್ಯಾಪ್ ಚಾಲೆಂಜ್‌ ಸ್ವೀಕರಿಸಿ ಅಚ್ಚರಿ ಮೂಡಿಸಿದ ಜೂನಿಯರ್ ದರ್ಶನ್!

ಸಲ್ಲು ಭಾಯ್ ಸ್ವಲ್ಪ ಡಿಫರೆಂಟ್. ಏನೇ ಮಾಡಿದ್ರೂ ಅದನ್ನು ಡಿಫರೆಂಟಾಗಿ ಮಾಡಿ ಗಮನ ಸೆಳೆಯುತ್ತಾರೆ. ಬಾಟಲ್ ಕ್ಯಾಪ್ ಚಾಲೆಂಜನ್ನು ಎಲ್ಲರೂ ಬಾಟಲಿ ಮುಚ್ಚಳವನ್ನು ಕಾಲಿನಿಂದ ಉದ್ದು ಬಿಳಿಸಿದರೆ ಭಜರಂಗಿ ಬಾಯ್ ಜಾನ್ ಮಾತ್ರ ಬಾಯಿಯಿಂದ ಊದಿ ಮುಚ್ಚಳವನ್ನು ಬೀಳಿಸಿ ನಂತರ ಪಾನಿ ಬಚಾವ್ ಎಂಬ ಸಂದೇಶವನ್ನು ನೀಡಿದ್ದಾರೆ. ನಂತರ ಬಾಟಲಿಯಲ್ಲಿರುವ ನೀರನ್ನು ಸಂಪೂರ್ಣವಾಗಿ ಕುಡಿದು ನೀರನ್ನು ಉಳಿಸಿ ಎಂದು ಸಂದೇಶ ಕೊಟ್ಟಿದ್ದಾರೆ. 

#BottleCapChallenge;ಕೇಂದ್ರ ಕ್ರೀಡಾ ಮಂತ್ರಿ ಪ್ರಯತ್ನಕ್ಕೆ ಮೆಚ್ಚುಗೆ!

 

ಬಾಲಿವುಡ್ ನಲ್ಲಿ ಮೊದಲು ಅಕ್ಷಯ್ ಕುಮಾರ್ ಈ ಚಾಲೆಂಜನ್ನು ಸ್ವೀಕರಿಸಿದರು. ಸ್ಯಾಂಡಲ್ ವುಡ್ ನಲ್ಲಿ ಗಣೇಶ್, ರಚಿತಾ ರಾಮ್, ಜೂನಿಯರ್ ಚಾಲೆಂಜಿಂಗ್ ಸ್ಟಾರ್ ಸೇರಿದಂತೆ ಸಾಕಷ್ಟು ಮಂದಿ ಮಾಡಿದ್ದಾರೆ.

ಏನಿದು #BottleCapChallenge ಚಾಲೆಂಜ್? 

ವಾಟರ್ ಬಾಟಲ್ ಮುಚ್ಚಳವನ್ನು ಸ್ವಲ್ಪ ಓಪನ್ ಮಾಡಿ ಇಟ್ಟಿರಬೇಕು. ಸ್ಪರ್ಧಿಗಳು ಆ ಮುಚ್ಚಳವನ್ನು ಕಾಲು ಬೆರಳಿನಿಂದ ಒದ್ದು ಬೀಳಿಸಬೇಕು. ಆದರೆ ಬಾಟಲ್ ಬೀಳಬಾರದು. ಬರೀ ಮುಚ್ಚಳ ಮಾತ್ರ ಬೀಳಬೇಕು. 

ಈ ವಾಟರ್ ಬಾಟಲ್ ಚಾಲೆಂಜನ್ನು ನಟ ಅಕ್ಷಯ್ ಕುಮಾರ್ ಸ್ವೀಕರಿಸಿದ್ದಾರೆ.ಅದೇ ರೀತಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ಈ ಚಾಲೆಂಜನ್ನು ಸ್ವೀಕರಿಸಿದ್ದಾರೆ. ಅರ್ಜುನ್ ಸರ್ಜಾ ಕೂಡಾ ಈ ಚಾಲೆಂಜನ್ನು ಸ್ವೀಕರಿಸಿ ಮುಚ್ಚಳವನ್ನು ಬೀಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರವಿಚಂದ್ರನ್​ ರೀತಿ ಉಪ್ಪಿನಕಾಯಿ ಬಾಟ್ಲಿ ತೋರಿಸಿದ್ರೆ ಸೆರಗು ಸರ್ಸೋ ಸಮಸ್ಯೆನೇ ಆಗ್ತಿರಲಿಲ್ಲ- ಜಯಮಾಲಾ
Rajamouli ಮಗ ಕಾರ್ತಿಕೇಯ ಡೈರೆಕ್ಟರ್ ಆಗ್ತಾರಾ? ಸ್ಟಾರ್ ನಟನಿಗೆ ಆ್ಯಕ್ಷನ್ ಕಟ್ ಹೇಳ್ತಾರಾ?