ಜಲ್ಲಿಕಟ್ಟುಗೆ ರಜನಿಕಾಂತ್ ಬೆಂಬಲ

Published : Jan 14, 2017, 12:41 PM ISTUpdated : Apr 11, 2018, 01:10 PM IST
ಜಲ್ಲಿಕಟ್ಟುಗೆ ರಜನಿಕಾಂತ್ ಬೆಂಬಲ

ಸಾರಾಂಶ

ರಜಿನಿಗಿಂತಲೂ ಮುನ್ನ ಕಮಲ್ ಹಾಸನ್ ಕೂಡ ಜಲ್ಲಿಕಟ್ಟುವಿಗೆ ಬೆಂಬಲ ಸೂಚಿಸಿದ್ದನ್ನು ಸ್ಮರಿಸಬಹುದು.

ಚೆನ್ನೈ(ಜ.14): ಸಂಕ್ರಾಂತಿ ಹಬ್ಬದಂದು ತಮಿಳುನಾಡಿನಲ್ಲಿ ಏರ್ಪಡಿಸಲಾಗುವ ಜನಪ್ರಿಯ ಜಲ್ಲಿಕಟ್ಟು ಸ್ಪರ್ಧೆಗೆ ಸೂಪರ್ ಸ್ಟಾರ್ ರಜನಿಕಾಂತ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹೋರಿಯನ್ನು ಬಳಸಲಾಗುವ ಜಲ್ಲಿಕಟ್ಟು ಸ್ಪರ್ಧೆ ತಮಿಳುನಾಡಿನ ಸಂಸ್ಕೃತಿ ಎಂದು ಅವರು ಪ್ರತಿಪಾದಿಸಿದ್ದಾರೆ.

ವಿಕಾತನ್ ಸಿನಿಮಾ ಪ್ರಶಸ್ತಿಗಳ ಸಮಾರಂಭದಲ್ಲಿ ಮಾತನಾಡಿದ ಅವರು, ‘‘ಕಾನೂನು ನಿಯಮಗಳು ಏನೇ ಹೇಳಿದರೂ, ಸಾಂಪ್ರದಾಯಿಕ ಮತ್ತು ತಮಿಳುನಾಡಿನ ಸಂಸ್ಕೃತಿಯಾಗಿರುವ ಜಲ್ಲಿಕಟ್ಟು ಸ್ಪರ್ಧೆಯನ್ನು ಏರ್ಪಡಿಸಲೇಬೇಕು,’’ ಎಂದು ಹೇಳಿದ್ದಾರೆ.

ರಜಿನಿಗಿಂತಲೂ ಮುನ್ನ ಕಮಲ್ ಹಾಸನ್ ಕೂಡ ಜಲ್ಲಿಕಟ್ಟುವಿಗೆ ಬೆಂಬಲ ಸೂಚಿಸಿದ್ದನ್ನು ಸ್ಮರಿಸಬಹುದು.

‘ಕಬಾಲಿ’ ಚಿತ್ರದಲ್ಲಿನ ಡಾನ್ ಪಾತ್ರಕ್ಕಾಗಿ ರಜನಿಕಾಂತ್ ಉತ್ತಮ ನಟ ಎಂಬ ಪ್ರಶಸ್ತಿಗೆ ಭಾಜನರಾದರು. ಕಳೆದ ವರ್ಷವಷ್ಟೇ ಜಲ್ಲಿಕಟ್ಟು ಆಚರಣೆ ಮೇಲೆ ಸುಪ್ರೀಂ ನಿಷೇಧ ಹೇರಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

15 ವರ್ಷಗಳಿಂದ ನಾಗಾರ್ಜುನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ಯಾವುದು? ಯಾಕೆ ಕಡಿಮೆಯಾಗಿಲ್ಲ?
ಆತ ನನ್ನ ಕ್ಲಾಸ್‌ಮೇಟ್.. ಗೆಳೆಯ ಶ್ರೀನಿವಾಸನ್ ನಿಧನ ಆಘಾತ ತಂದಿದೆ: ಭಾವುಕರಾದ ರಜನಿಕಾಂತ್