ಪುನೀತ್ ರಾಜ್‌ಕುಮಾರ್ ಬಿಚ್ಚುಮಾತು

Published : Dec 19, 2017, 10:23 PM ISTUpdated : Apr 11, 2018, 01:11 PM IST
ಪುನೀತ್ ರಾಜ್‌ಕುಮಾರ್ ಬಿಚ್ಚುಮಾತು

ಸಾರಾಂಶ

‘ನನಗೆ ಸೋಲು-ಗೆಲುವು ಹೊಸತಲ್ಲ. ನಟ ಎನಿಸಿಕೊಂಡವನಿಗೆ ಇವೆಲ್ಲ ಸಹಜ. ಆದರಾಚೆ ಜನರಿಗೆ ಒಳ್ಳೆಯ ಸಿನಿಮಾ ಕೊಡಬೇಕು ಅನ್ನೋದಷ್ಟೇ ನನ್ನ ತಲೆಯಲ್ಲಿರುತ್ತೆ. ಈಗಲೂ ಅಷ್ಟೆ, ‘ರಾಜಕುಮಾರ’ ಚಿತ್ರದ ಸಕ್ಸಸ್ ನನ್ನ ನಟನೆಯ ಜವಾಬ್ದಾರಿಯನ್ನು ಹೆಚ್ಚಿಸಿದೆ ಹೊರತು ಆ ಭಾರವನ್ನು ಮುಂದಿನ ಚಿತ್ರಕ್ಕೂ ಹೊತ್ತುಕೊಂಡು ಬರುವಂತೆ ಮಾಡಿಲ್ಲ.

ಯಾವುದೇ ಚಿತ್ರದ ಸಕ್ಸಸ್‌ನ ಭಾರವನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದವನಲ್ಲ ನಾನು...! - ಇದು ಪುನೀತ್ ರಾಜ್‌ಕುಮಾರ್ ಬಿಚ್ಚುಮಾತು.

‘ರಾಜಕುಮಾರ’ ಚಿತ್ರದ ಬಹುದೊಡ್ಡ ಸಕ್ಸಸ್‌ನ ಬೆನ್ನಲೇ ಈಗವರು ‘ಅಂಜನಿಪುತ್ರ’ದೊಂದಿಗೆ ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಡಿ. 21 ರಂದು ಎಂ.ಎನ್. ಕುಮಾರ್ ನಿರ್ಮಾಣದ, ಹರ್ಷ ನಿರ್ದೇಶನದ ಈ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ‘ರಾಜಕುಮಾರ’ ಈ ವರ್ಷದ ಬ್ಲಾಕ್‌ಬಸ್ಟರ್. ಹಾಗೆಯೇ ಗಾಂಧಿನಗರದ ಬಾಕ್ಸಾಫೀಸ್ ಚಿಂದಿ ಉಡಾಯಿಸಿದ ಹೆಗ್ಗಳಿಕೆ ಇದರದ್ದು. ತುಂಬಾ ದಿನಗಳಿಂದ ದೊಡ್ಡದೊಂದು ಸಕ್ಸಸ್ ಕಾಣದೇ ಇದ್ದ ಪುನೀತ್ ರಾಜ್ ಕುಮಾರ್ ಅವರಿಗೂ ಬಹು ದೊಡ್ಡ ಸಕ್ಸಸ್ ತಂದು ಕೊಟ್ಟ ಚಿತ್ರ.

ಆ ಚಿತ್ರದ ನಂತರವೀಗ ‘ಅಂಜನಿಪುತ್ರ’ದೊಂದಿಗೆ ತೆರೆ ಮೇಲೆ ಬರುತ್ತಿದ್ದಾರೆಂದರೆ ಆ ಚಿತ್ರಕ್ಕಿಂತ ಇದು ಹೇಗೆ ಭಿನ್ನ? ಈ ಚಿತ್ರದಲ್ಲಿನ ಅವರ ಪಾತ್ರ ಎಂಥದ್ದು? ಪ್ರೇಕ್ಷಕರನ್ನು ಇದು ಹೇಗೆ ರಂಜಿಸುತ್ತೆ? ಆ ಸಕ್ಸಸ್‌ನ ಜವಾಬ್ದಾರಿ ಹೇಗಿದೆ ಅಂತ ಕೇಳಿದ ಪ್ರಶ್ನೆಗೆ ತಮ್ಮದೇ ಉತ್ತರ ‘ಸಕ್ಸಸ್ ಭಾರವನ್ನು ನಾನು ಎಂದಿಗೂ ಮತ್ತೊಂದು ಚಿತ್ರಕ್ಕೆ ಹೊತ್ತುಕೊಂಡು ಬಂದವನಲ್ಲ’ ಎಂದಿದ್ದು.

‘ನನಗೆ ಸೋಲು-ಗೆಲುವು ಹೊಸತಲ್ಲ. ನಟ ಎನಿಸಿಕೊಂಡವನಿಗೆ ಇವೆಲ್ಲ ಸಹಜ. ಆದರಾಚೆ ಜನರಿಗೆ ಒಳ್ಳೆಯ ಸಿನಿಮಾ ಕೊಡಬೇಕು ಅನ್ನೋದಷ್ಟೇ ನನ್ನ ತಲೆಯಲ್ಲಿರುತ್ತೆ. ಈಗಲೂ ಅಷ್ಟೆ, ‘ರಾಜಕುಮಾರ’ ಚಿತ್ರದ ಸಕ್ಸಸ್ ನನ್ನ ನಟನೆಯ ಜವಾಬ್ದಾರಿಯನ್ನು ಹೆಚ್ಚಿಸಿದೆ ಹೊರತು ಆ ಭಾರವನ್ನು ಮುಂದಿನ ಚಿತ್ರಕ್ಕೂ ಹೊತ್ತುಕೊಂಡು ಬರುವಂತೆ ಮಾಡಿಲ್ಲ. ಪ್ರೇಕ್ಷಕರ ನಿರೀಕ್ಷೆ ಹಾಗಿರಬಹುದು. ಆದರೆ ನಾನು ಸೋಲು-ಗೆಲುವನ್ನು ನೋಡುವುದಕ್ಕಿಂತ ಒಳ್ಳೆಯ ಸಿನಿಮಾ ಕೊಡುತ್ತಾ ಬರಬೇಕು ಅನ್ನೋದನ್ನು ಬಿಟ್ಟರೆ, ಅಂಥದ್ದೇ ಸಿನಿಮಾ ಮಾಡಬೇಕು, ಅಷ್ಟೇ ಸಕ್ಸಸ್ ಕಾಣಬೇಕು ಎನ್ನುವ ಉಮೇದು ಇಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಅನ್ನೋದು ಜವಾಬ್ದಾರಿ. ಅದರ ಸೋಲು-ಗೆಲುವು ಜನರ ಕೈಯಲ್ಲಿರುತ್ತೆ. ಆ ನಿಟ್ಟಿನಲ್ಲಿ ಎಂದಿಗೂ ಒಂದು ಸಿನಿಮಾದ ಸಕ್ಸಸ್‌ನ ಭಾರವನ್ನು ಮತ್ತೊಂದು ಸಿನಿಮಾಕ್ಕೆ ಹೊತ್ತು ಕೊಂಡು ಬಂದನಲ್ಲ’ ಎನ್ನುತ್ತಾರೆ ಪುನೀತ್ ರಾಜ್‌ಕುಮಾರ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!