ಕಂಗನಾ ರಾಣಾವತ್ ಅಂತರಂಗದ ಮಾತುಗಳು

Published : Dec 19, 2017, 10:13 PM ISTUpdated : Apr 11, 2018, 01:13 PM IST
ಕಂಗನಾ ರಾಣಾವತ್ ಅಂತರಂಗದ ಮಾತುಗಳು

ಸಾರಾಂಶ

ಅವರ ಪಾಲಿಗೆ ಸಿಗುತ್ತಿರುವ ಚಿತ್ರಗಳ ಸಂಖ್ಯೆ ಕಡಿಮೆಯಾಗಿದೆಯೇ? ಮುಂದಿನ ಅವರ ‘ಮಣಿಕರ್ಣಿಕಾ’ ಚಿತ್ರದ ತಯಾರಿ ಹೇಗೆಲ್ಲಾ ನಡೆಯುತ್ತಿದೆ ಎಂದು ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಕಂಗನಾ ರಾಣಾವತ್ ನೇರ, ನಿಷ್ಠೂರವಾದಿ ಎಂದೆಲ್ಲಾ ಹೇಳುವವರಿದ್ದಾರೆ.ಯಾರು ತಲೆ ಕೆಡಿಸಿಕೊಳ್ಳಲಿ ಬಿಡಲಿ ಧೈರ್ಯವಾಗಿ ಅನ್ನಿಸಿದ್ದನ್ನು ಹೇಳಿ ಮುಗಿಸುವ ಗಟ್ಟಿಗಿತ್ತಿ ಕಂಗನಾ ತನ್ನ ಅದೇ ಸ್ವಭಾವದಿಂದ ಸ್ವಲ್ಪ ಪೆಟ್ಟು ತಿಂದಿದ್ದಾರಾ? ಅವರ ಪಾಲಿಗೆ ಸಿಗುತ್ತಿರುವ ಚಿತ್ರಗಳ ಸಂಖ್ಯೆ ಕಡಿಮೆಯಾಗಿದೆಯೇ? ಮುಂದಿನ ಅವರ ‘ಮಣಿಕರ್ಣಿಕಾ’ ಚಿತ್ರದ ತಯಾರಿ ಹೇಗೆಲ್ಲಾ ನಡೆಯುತ್ತಿದೆ ಎಂದು ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಅವರ ಮನದ ಮಾತುಗಳಲ್ಲಿ ಕೆಲವು ಇಂಟರೆಸ್ಟಿಂಗ್ ಮಾತುಗಳು ಇಲ್ಲಿವೆ

* ಕಂಗನಾಗೆ ಸ್ವಂತ ಪ್ರೊಡಕ್ಷನ್ ಹೌಸ್ ಕಟ್ಟಬೇಕು ಎಂದು ದೊಡ್ಡ ಆಸೆ ಇದೆ ಎನ್ನುವುದು ಹಿಂದೆಯೇ ಗೊತ್ತಿತ್ತು. ಕೆಲವಾರು ಕಡೆಗಳಲ್ಲಿ ಅದನ್ನು ಹೇಳಿಕೊಂಡಿದ್ದರೂ ಕೂಡ. ಆದರೆ ಈಗ ಅದಕ್ಕೆ ಸಾಕಾಗುವಷ್ಟು ಆರ್ಥಿಕ ಶಕ್ತಿ ಇಲ್ಲದ ಕಾರಣ ಆ ಯೋಚನೆಯನ್ನು ಮುಂದೆ ತಳ್ಳಿದ್ದಾರೆ.

* ಈ ವರ್ಷ ಅವರ ಚಿತ್ರಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ತನ್ನಿಮಿತ್ತ ಆದಾಯದ ಪ್ರಮಾಣವೂ ತಳ ಕಚ್ಚಿದೆ. ಆದರೆ ಸಂಭಾವನೆ ಪ್ರಮಾಣದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಸದ್ಯಕ್ಕೆ ಸಹಿ ಹಾಕಿರುವ ಚಿತ್ರಗಳು ಮೂರು ಮಾತ್ರ. ಇದನ್ನೆಲ್ಲಾ ಖುದ್ದು ಅವರೇ ಹಂಚಿಕೊಂಡಿರುವುದು ವಿಶೇಷ.

* ‘ಮಣಿಕರ್ಣಿಕಾ’ ಮಹತ್ವದ ಚಿತ್ರದಲ್ಲಿ ನಟಿಸುತ್ತಿರುವ ಕಂಗನಾ ಮುಂದೆ ಯುವಕರಿಗೆ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಚಿತ್ರಗಳನ್ನು ಮಾಡುತ್ತೇನೆ. ಸಂಪೂರ್ಣ ಗಮನವೆಲ್ಲಾ ಯಶಸ್ಸಿನ ಕಡೆಗೆ ಕೇಂದ್ರೀಕರಿಸುತ್ತೇನೆ ಎಂದೆಲ್ಲಾ ಹೇಳಿಕೊಂಡಿರುವುದು ಮುಂದಿನ ದಿನಗಳಲ್ಲಿ ಅವರ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಲು ಕಾರಣವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನಿಮ್ಮಂತಹ ದ್ವೇಷಿಯನ್ನು ನಾನು ನೋಡಿಲ್ಲ': ಧಾರ್ಮಿಕ ಕಾರಣಕ್ಕಾಗಿ ಬಾಲಿವುಡ್‌ನಲ್ಲಿ ಅವಕಾಶಗಳು ಕಡಿಮೆ ಎಂದ ಎಆರ್ ರೆಹಮಾನ್ ವಿರುದ್ಧ ಕಂಗನಾ ಕಿಡಿ!
ಸೈಬರ್ ಕಿಡಿಗೇಡಿಗಳ ವಿರುದ್ಧ ನಟಿ ಅನಸೂಯಾ ಭಾರದ್ವಾಜ್ ಯುದ್ಧ: 42 ಜನರ ವಿರುದ್ಧ ಎಫ್‌ಐಆರ್ ದಾಖಲು!