ಮಂಡ್ಯದ ಸ್ವಾಭಿಮಾನಿ ಜನತೆಗೆ ರಾಕ್ ಲೈನ್ ವೆಂಕಟೇಶ್ ಗಿಫ್ಟ್!

By Web DeskFirst Published Jun 14, 2019, 11:36 AM IST
Highlights

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯ ಸಾಧಿಸಿದ್ದ ರೆಬೆಲ್ ಹೆಣ್ಣು ಸುಮಲತಾಗೆ ಬೆನ್ನೆಲುಬಾಗಿ ನಿಂತ ನಿರ್ದೇಶಕ ರಾಕ್ ಲೈನ್‌ ವೆಂಕಟೇಶ್ ಮಂಡ್ಯದ ಜನರಿಗೆ ಟೈಟಲ್ ಕಾರ್ಡ್ ಅರ್ಪಣೆ ಮಾಡುವುದಾಗಿ ನಿರ್ಧಾರ ಮಾಡಿದ್ದಾರೆ.

ಬಹು ದೊಡ್ಡ ಜಯ ಸಾಧಿಸಿರುವ ಸುಮಲತಾ ತನ್ನ ಗೆಲುವನ್ನು ಮಂಡ್ಯ ಜನರ ಗೆಲುವು, ಅಂಬರೀಶ್‌ ಅವರ ಗೆಲುವು ಎಂದು ಹೇಳುತ್ತಾರೆ. ಇದಕ್ಕೆಲ್ಲಾ ಕಾರಣವಾಗಿ ಸುಮಲತಾಗೆ ಬೆನ್ನೆಲುಬಾಗಿ ನಿಂತವರೇ ಜೋಡೆತ್ತು ದರ್ಶನ್- ಯಶ್ ಹಾಗೂ ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್‌, ದೊಡ್ಡಣ್ಣ.

ಸುಮಲತಾರನ್ನು ಮದುವೆ ಆಗ್ತೀನಿ ಎಂದ ನಟನಿಗೆ ರೇಗಿಸಿದ ಅಂಬಿ ?

ಈ ನಡುವೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸುಮಲತಾ ಸಾಧಕರ ಖುರ್ಚಿಯಲ್ಲಿದ್ದಾಗ ಅತಿಥಿಯಾಗಿ ರಾಕ್‌ ಲೈನ್ ಆಗಮಿಸಿದ್ದರು. ಈ ವೇಳೆ ತಮ್ಮ ಮಂಡ್ಯ ಅಭಿಮಾನಿಗಳಿಗೆ ತಮ್ಮ ಪ್ರತಿ ಸಿನಿಮಾದಲ್ಲಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಮಂಡ್ಯದ ಹೆಣ್ಣು ಸುಮಲತಾಗೆ ಇತ್ತು ಇವರ ಮೇಲೆ ಕ್ರಶ್!

 

'ರಾಕ್‌ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿ ಬರುವ ಪ್ರತಿಯೊಂದು ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಮಂಡ್ಯ ಜಿಲ್ಲೆಯ ಸ್ವಾಭಿಮಾನಿ ಜನರ ಅಶೀರ್ವಾದದೊಂದಿಗೆ ಎಂದು ಹೇಳುವ ಮೂಲಕವೇ ಸಿನಿಮಾ ಆರಂಭವಾಗುತ್ತದೆ ಎಂದು' ಹೇಳಿದ್ದಾರೆ.

click me!