ಕನ್ನಡ ಚಿತ್ರಗಳ ಕಡೆಗಣನೆ :ಬುಕ್'ಮೈ ಶೋ ವಿರುದ್ಧ ನಿರ್ಮಾಪಕ ಮಂಜು ಆಕ್ರೋಶ

Published : Oct 23, 2017, 08:37 PM ISTUpdated : Apr 11, 2018, 12:51 PM IST
ಕನ್ನಡ ಚಿತ್ರಗಳ ಕಡೆಗಣನೆ :ಬುಕ್'ಮೈ ಶೋ ವಿರುದ್ಧ  ನಿರ್ಮಾಪಕ ಮಂಜು ಆಕ್ರೋಶ

ಸಾರಾಂಶ

ನಮ್ಮ ಸಿನಿಮಾಗಳನ್ನು ತುಳಿಯುವ ಕೆಲಸ ಬುಕ್'ಮೈ ಶೋ'ನಿಂದ ಆಗುತ್ತಿದೆ. ಕನ್ನಡ ಸಿನಿಮಾಗಳು ಚೆನ್ನಾಗಿದ್ದರೂ ಪರ್ಸೆಟೆಂಜ್ ಕೊಡುವುದಿಲ್ಲ.

ಬೆಂಗಳೂರು(ಅ.23): ಪರಭಾಷೆಯವರಿಂದ ಹಣವನ್ನು ಪಡೆದು ಕನ್ನಡ ಸಿನಿಮಾಗಳನ್ನು ಮೂಲೆಗುಂಪು ಮಾಡುತ್ತಿರುವ ಬುಕ್'ಮೈ ಶೋ ವಿರುದ್ಧ ನಿರ್ಮಾಪಕ ಕೆ.ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನ್ಯ ಭಾಷೆಯ ವಿತರಕರಿಂದ ಹಣವನ್ನು ಪಡೆದು ಅವರ ಸಿನಿಮಾಗಳಿಗೆ ಹೆಚ್ಚು ಪರ್ಸೆಂಟೇಜ್ ಕೊಡುತ್ತಿದ್ದು, ನಮ್ಮ ಸಿನಿಮಾಗಳನ್ನು ತುಳಿಯುವ ಕೆಲಸ ಬುಕ್'ಮೈ ಶೋ'ನಿಂದ ಆಗುತ್ತಿದೆ. ಕನ್ನಡ ಸಿನಿಮಾಗಳು ಚೆನ್ನಾಗಿದ್ದರೂ ಪರ್ಸೆಟೆಂಜ್ ಕೊಡುವುದಿಲ್ಲ.

ಈ ರೀತಿ ಆದರೆ ನಿರ್ಮಾಪಕರ ಗತಿಯೇನು?  ಒಳ್ಳೆ ಸಿನಿಮಾಗಳು ಇದ್ದರೂ ಸಹ ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲೆ ಬೆಂಬಲ ಇಲ್ಲ. ಈ ತಾರತಮ್ಯ ಧೋರಣೆಯ ವಿರುದ್ಧ ವಾಣಿಜ್ಯ ಮಂಡಳಿಯಲ್ಲಿ ದೂರು ಕೊಡುವುದಾಗಿ ತಿಳಿಸಿದ್ದಾರೆ. ಕೆ. ಮಂಜು ನಿರ್ಮಾಣದ ಕನ್ನಡ ಚಿತ್ರ 'ಸತ್ಯಹರಿಶ್ಚಂದ್ರ' ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು,  ಆನ್'ಲೈನ್ ಬುಕ್ಕಿಂಗ್ ಸಂಸ್ಥೆ ಈ ಚಿತ್ರವನ್ನು ಕಡೆಗಣಿಸಿರುವುದರಿಂದ ಮಂಜು ಕೋಪಗೊಂಡಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮ್ಮನ ಸೀರೆಯಲ್ಲಿ ಮದನ ಮನಮೋಹಿನಿಯಾಗಿ ಕಂಡ ಆರಾಧನಾ ರಾಮ್
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?