
ಶ್ರೀಕೃಷ್ಣನನ್ನು ನೆನಪಿಸುವವಂತೆ ತುಂಬಾ ಭಿನ್ನವಾಗಿ ಕಿಚ್ಚ ಕ್ರಿಯೇಷನ್ ಯೂಟ್ಯೂಬ್ ಅನ್ನು ಶುರು ಮಾಡಿದ್ದಾರೆ. ಹೀಗಾಗಿ ಇನ್ನು ಮುಂದೆ ನಟ ಸುದೀಪ್ ಹಾಗೂ ಕಿಚ್ಚ ಕ್ರಿಯೇಷನ್ಗೆ ಸಂಬಂಧಿಸಿದ ಸಿನಿಮಾ ವಿಚಾರಗಳು ಇಲ್ಲಿ ದೊರೆಯಲಿವೆಯಂತೆ.
ಅಜಾನುಬಾಹು ಆರಡಿಯ ಅಸ್ತ್ರ , ಸಿಂಹಕಂಠ ಬಿಲ್ಲನೋಟ, ಅಕಾಶ ಮುಟ್ಟಿದರೂ ಭೂಸ್ಪರ್ಶ ಬಿಡದೇ ಆಡುವನಿವನಾಟ, ಸದ್ದಿಲ್ಲದೆ ಕತ್ತಲ ಬೆಳಗುವದೀಪದಂಚಿನ ಕಪ್ಪು ಇವನ ಮೌನ, ಕಪ್ಪಾದರೂ ಜಗಕೇ ಬೆಳಕನೀವ ಪರಮ ಸುದೀಪನು, ಕೃಷ್ಣ... ಇಂಥ ಸಾಲುಗಳೊಂದಿಗೆ ಶ್ರೀಕೃಷ್ಣನ ಶಂಖದ ಹಿನ್ನೆಲೆ ಧ್ವನಿಯಾಗಿ ಆ ಧ್ವನಿಯ ಮುನ್ನಲೆಯಲ್ಲಿ ಕಿಚ್ಚ ಕ್ರಿಯೇಷನ್ ಹುಟ್ಟಿಕೊಳ್ಳುತ್ತದೆ. ಹೀಗೆ ವಿಶೇಷವಾಗಿ ರೂಪಿಸಿರುವ ಜತೆಗೆ ‘ಕಿಚ್ಚ ಅಂದ್ರೆ ಕೃಷ್ಣ ಅಲ್ವೇ’ ಎನ್ನುವ ತಮ್ಮ ಮಾತಿನೊಂದಿಗೆ ಯೂಟ್ಯೂಬ್ ಚಾನಲ್ ಅನ್ನು ಸುದೀಪ್ ಅವರಿಗೆ ಅರ್ಪಿಸಿದ್ದಾರೆ ಪ್ರಿಯಾ ಸುದೀಪ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.