ಬಾಲಯ್ಯ ಪುತ್ರ ಮೋಕ್ಷಜ್ಞ ಬಿಟ್ಟು ದಾನಯ್ಯ ಪುತ್ರ ಕಲ್ಯಾಣ್ ದಾಸರಿಗೆ ಮಣೆ ಹಾಕಿದ ಪ್ರಶಾಂತ್ ವರ್ಮಾ!

Published : Sep 24, 2025, 05:24 PM IST
SJ Surya Adheera

ಸಾರಾಂಶ

‘ಲಾರ್ಜರ್ ದೆನ್ ಲೈಫ್’ ಚಿತ್ರದ ಮೂಲಕ ತಮಗಾಗಿಯೇ ವಿಶೇಷ ಸ್ಥಾನ ಗಳಿಸಿಕೊಂಡಿರುವ ಕ್ರಿಯೇಟಿವ್ ಜೀನಿಯಸ್ ಪ್ರಶಾಂತ್ ವರ್ಮಾ, ಈ ಸೂಪರ್ ಹೀರೋ ಚಿತ್ರಕ್ಕಾಗಿ ಆರ್.ಕೆ.ಡಿ ಸ್ಟುಡಿಯೋಸ್ ಜೊತೆ ಕೈಜೋಡಿಸಲಿದ್ದಾರೆ. ಟಾಲಿವುಡ್‌ನಲ್ಲಿ ಪ್ರಶಾಂತ್ ವರ್ಮಾ ಅವರು ಈ ಮೊದಲು 'ಹನುಮಾನ್` ಮೂಲಕ ಸಂಚಲನ ಸೃಷ್ಟಿಸಿದ್ದರು.

ಪ್ರಶಾಂತ್ ವರ್ಮಾ ಹೊಸ ಸಿನಿಮಾ ಅಪ್‌ಡೇಟ್

ಪ್ರಶಾಂತ್ ವರ್ಮಾ, ನಂದಮೂರಿ ಬಾಲಕೃಷ್ಣ ಅವರ ಪುತ್ರ ಮೋಕ್ಷಜ್ಞ ತೇಜನನ್ನು ಹೀರೋ ಆಗಿ ಪರಿಚಯಿಸಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಆ ಸಿನಿಮಾ ನಿಂತುಹೋಗಿದೆ. ಸ್ಕ್ರಿಪ್ಟ್ ವಿಚಾರದಲ್ಲಿ ಬಾಲಯ್ಯ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಈ ವಿಚಾರದಲ್ಲಿಯೇ ಕ್ರಿಯೇಟಿವ್ ಭಿನ್ನಾಭಿಪ್ರಾಯಗಳು ಬಂದಿದ್ದು, ಇದರಿಂದ ಮೋಕ್ಷಜ್ಞನನ್ನು ಹೀರೋ ಆಗಿ ಪರಿಚಯಿಸುವ ಜವಾಬ್ದಾರಿಯಿಂದ ಪ್ರಶಾಂತ್ ವರ್ಮಾ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿ ಇದೆ. ಇಷ್ಟು ದಿನ ಇದು ಕೇವಲ ವದಂತಿಯಾಗಿತ್ತು. ಈಗ ಈ ಬಗ್ಗೆ ಮತ್ತಷ್ಟು ಸ್ಪಷ್ಟನೆ ಸಿಕ್ಕಿದೆ.

'OG' ನಿರ್ಮಾಪಕ ದಾನಯ್ಯ ಪುತ್ರ ಕಲ್ಯಾಣ್ ದಾಸರಿ ನಟನೆಯ `ಅಧೀರ` ಸಿನಿಮಾ

ಪ್ರಶಾಂತ್ ವರ್ಮಾ ತಮ್ಮ ಹೊಸ ಚಿತ್ರದ ಅಪ್‌ಡೇಟ್ ನೀಡಿದ್ದಾರೆ. `OG` ಚಿತ್ರದ ನಿರ್ಮಾಪಕ ಡಿವಿವಿ ದಾನಯ್ಯ ಅವರ ಪುತ್ರ ಕಲ್ಯಾಣ್ ದಾಸರಿ ಅವರನ್ನು ನಾಯಕನಾಗಿ ಪರಿಚಯಿಸುತ್ತಿರುವ `ಅಧೀರ` ಚಿತ್ರವನ್ನು ನಿರ್ಮಿಸುತ್ತಿರುವುದು ಗೊತ್ತೇ ಇದೆ. ಆದರೆ, ಇದರ ನಿರ್ದೇಶಕರು ಅವರಲ್ಲ, ಅವರ ಶಿಷ್ಯ ಶರಣ್ ಕೊಪ್ಪಿಶೆಟ್ಟಿ. `ಅಧೀರ` ಚಿತ್ರದಲ್ಲಿ ಎಸ್‌ ಜೆ ಸೂರ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸೋಮವಾರ ಚಿತ್ರದಲ್ಲಿನ ಸೂರ್ಯ ಅವರ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಸೂಪರ್ ಹೀರೋ ಚಿತ್ರದ ಹೊಸ ಲುಕ್ ಸಖತ್ತಾಗಿದೆ.

ಲಾರ್ಜರ್ ದೆನ್ ಲೈಫ್ ಚಿತ್ರವಾಗಿ 'ಅಧೀರ'

ಈ ಚಿತ್ರದ ಬಗ್ಗೆ ಚಿತ್ರತಂಡ ಮಾತನಾಡಿದೆ. `ವಿಶಿಷ್ಟ ಮತ್ತು ಲಾರ್ಜರ್ ದೆನ್ ಲೈಫ್ ಚಿತ್ರಗಳ ಮೂಲಕ ತಮಗಾಗಿಯೇ ವಿಶೇಷ ಸ್ಥಾನ ಗಳಿಸಿಕೊಂಡಿರುವ ಕ್ರಿಯೇಟಿವ್ ಜೀನಿಯಸ್ ಪ್ರಶಾಂತ್ ವರ್ಮಾ, ಈ ಸೂಪರ್ ಹೀರೋ ಚಿತ್ರಕ್ಕಾಗಿ ಆರ್.ಕೆ.ಡಿ ಸ್ಟುಡಿಯೋಸ್ ಜೊತೆ ಕೈಜೋಡಿಸಲಿದ್ದಾರೆ. ಟಾಲಿವುಡ್‌ನ ಮೊದಲ ಜಾಂಬಿ ಜಾನರ್ ಚಿತ್ರದ ಮೂಲಕ ರಂಜಿಸಿದ್ದ ಪ್ರಶಾಂತ್ ವರ್ಮಾ, ನಂತರ ಭಾರತೀಯ ಸೂಪರ್ ಹೀರೋ ಚಿತ್ರ `ಹನುಮಾನ್` ಮೂಲಕ ಸಂಚಲನ ಸೃಷ್ಟಿಸಿದ್ದರು.

ಅದೇ ಕನಸನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಪ್ರಾಜೆಕ್ಟ್ ಆಗಿ `ಅಧೀರ` ಬರುತ್ತಿದೆ. ಈ ಚಿತ್ರದಲ್ಲಿ ಕಲ್ಯಾಣ್ ದಾಸರಿ ಹೀರೋ ಆಗಿ ಭರ್ಜರಿ ಎಂಟ್ರಿ ಕೊಡುತ್ತಿದ್ದು, ಪ್ರಮುಖ ಪಾತ್ರದಲ್ಲಿ ಎಸ್. ಜೆ. ಸೂರ್ಯ ಕಾಣಿಸಿಕೊಳ್ಳಲಿದ್ದಾರೆ. ಈ ಬೃಹತ್ ಪ್ರಾಜೆಕ್ಟ್ ಅನ್ನು ರಿವಾಜ್ ರಮೇಶ್ ದುಗ್ಗಲ್ ನೇತೃತ್ವದ ಆರ್‌ಕೆಡಿ ಸ್ಟುಡಿಯೋಸ್ ಅದ್ದೂರಿಯಾಗಿ ನಿರ್ಮಿಸುತ್ತಿದೆ. ಪ್ರಶಾಂತ್ ವರ್ಮಾರ ಈ ಚಿತ್ರವು ಬಿಗ್ ಬಜೆಟ್ ಹಾಗೂ ಅಪಾರ ನಿರೀಕ್ಷೆಗಳೊಂದಿಗೆ ಬರಲಿದೆ.

ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ `ಅಧೀರ`

ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ (PVCU) ಭಾಗವಾಗಿ ಬರುತ್ತಿರುವ ಈ ಚಿತ್ರ, ಭಾರತೀಯ ಇತಿಹಾಸಗಳಿಂದ ಸ್ಫೂರ್ತಿ ಪಡೆದು, ಅದ್ಭುತ ದೃಶ್ಯಗಳೊಂದಿಗೆ ಮೂಡಿಬರಲಿದೆ. ಪ್ರತಿಯೊಂದು ಕಥೆಯೂ ವಿಭಿನ್ನವಾಗಿದ್ದು, ಒಂದೇ ಯೂನಿವರ್ಸ್‌ನಲ್ಲಿ ಬೆರೆಯುವಂತೆ ಪ್ರಶಾಂತ್ ವರ್ಮಾ ತಮ್ಮ ಸೂಪರ್ ಹೀರೋ ಡ್ರೀಮ್ ಯೂನಿವರ್ಸ್‌ಗೆ ಬಲವಾದ ಅಡಿಪಾಯ ಹಾಕುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ, ನಿರ್ಮಾಪಕರು ಎಸ್. ಜೆ. ಸೂರ್ಯ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಬೆಚ್ಚಿಬೀಳಿಸುವಂತಿದೆ `ಅಧೀರ`ದಲ್ಲಿ ಎಸ್‌ಜೆ ಸೂರ್ಯ ಲುಕ್

ಹಿನ್ನೆಲೆಯಲ್ಲಿ ಜ್ವಾಲಾಮುಖಿ ಸ್ಫೋಟ, ಬೆಂಕಿ, ಲಾವಾ ಮತ್ತು ಬೂದಿ ಆಕಾಶವನ್ನು ಆವರಿಸಿದೆ. ಆ ಗದ್ದಲದ ನಡುವಿನಿಂದ ಎಸ್. ಜೆ. ಸೂರ್ಯ ಗೂಳಿಯಂತಹ ಕೊಂಬುಗಳು, ಬುಡಕಟ್ಟು ಉಡುಗೆಯಲ್ಲಿ, ಕ್ರೂರ ರಾಕ್ಷಸನಂತೆ ಕಾಣಿಸಿಕೊಂಡಿದ್ದಾರೆ. ಅವರ ಮುಂದೆಯೇ ಕಲ್ಯಾಣ್ ದಾಸರಿ ಮೊಣಕಾಲೂರಿ ಕುಳಿತು ಧೈರ್ಯದಿಂದ ಮೇಲಕ್ಕೆ ನೋಡುತ್ತಾ ಸೂಪರ್ ಹೀರೋನಂತೆ ಕಾಣಿಸಿಕೊಂಡಿದ್ದಾರೆ. `ಅಧೀರ` ಪೋಸ್ಟರ್ ಒಂದು ಮಹಾ ಸಂಗ್ರಾಮಕ್ಕೆ ನಾಂದಿ ಹಾಡಿದೆ.

ಇದು `ಆಸೆ vs ಅಂಧಕಾರ`ದ ನಡುವಿನ ಯುದ್ಧ. ಧರ್ಮವನ್ನು ರಕ್ಷಿಸಲು ಕಲ್ಯಾಣ್ ದಾಸರಿ ತಮ್ಮ ಸೂಪರ್ ಪವರ್‌ಗಳನ್ನು ಬಳಸುತ್ತಾರೆ. ಅದ್ಭುತ ಆಕ್ಷನ್, ಸ್ಟಂಟ್ಸ್, ಭಾರಿ ದೃಶ್ಯಗಳು ಮತ್ತು ಹೈ ವೋಲ್ಟೇಜ್ ಡ್ರಾಮಾದೊಂದಿಗೆ ಈ ಸಿನಿಮಾ ಥಿಯೇಟರ್‌ಗಳಲ್ಲಿ ಥಂಡರ್‌ಕ್ಲ್ಯಾಪ್ ಅನುಭವ ನೀಡಲಿದೆ ಎಂದು ಚಿತ್ರತಂಡ ಹೇಳಿದೆ. ಶಿವೇಂದ್ರ ಈ ಚಿತ್ರಕ್ಕೆ ಸಿನಿಮಾಟೋಗ್ರಫಿ ಒದಗಿಸುತ್ತಿದ್ದಾರೆ. ಶ್ರೀ ಚರಣ್ ಪಾಕಳ ಸಂಗೀತ ನೀಡುತ್ತಿದ್ದಾರೆ. ಇದಲ್ಲದೆ, ಪ್ರಶಾಂತ್ ವರ್ಮಾ ಈಗ `ಜೈ ಹನುಮಾನ್` ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹಾಗೆಯೇ ಪ್ರಭಾಸ್ ಜೊತೆ ಸಿನಿಮಾ ಮಾಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!
ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌