
ಬೆಂಗಳೂರು (ಆ. 29): ಶೀತಲ್ ಶೆಟ್ಟಿ ಅಭಿನಯದ ‘ಪತಿಬೇಕು ಡಾಟ್ ಕಾಮ್’ ಚಿತ್ರದ ನಿರ್ದೇಶಕ ರಾಕೇಶ್ ಅವರಿಗೆ ಭಿನ್ನವಾದೊಂದು ಆಸೆ ಇದೆ. ಚಿತ್ರದ ಆಡಿಯೋವನ್ನು ಭಿನ್ನ ರೀತಿಯಲ್ಲಿ ಸಿಎಂ ಕುಮಾರಸ್ವಾಮಿ ಅವರಿಂದಲೇ ಬಿಡುಗಡೆ ಮಾಡಿಸಬೇಕು ಎಂದು.
ಅದು ಹೇಗಪ್ಪಾ, ಎಲ್ಲಪ್ಪಾ ಎಂದರೆ, ಕುಮಾರಸ್ವಾಮಿ ಅವರ ಜನತಾ ದರ್ಶನದ ವೇಳೆ. ಹೀಗೊಂದು ಆಸೆ ಹೊತ್ತಿರುವ ಚಿತ್ರತಂಡ ಈ ಕುರಿತು ಸಿಎಂಗೆ ಪತ್ರ ಬರೆದಿದೆ. ‘ನೀವು ಸಿನಿಮಾ ಕ್ಷೇತ್ರದವರೇ ಆಗಿರುವುದರಿಂದ ನಿಮ್ಮಿಂದ ನಮ್ಮ ಚಿತ್ರದ ಆಡಿಯೋ ಬಿಡುಗಡೆ ಮಾಡಿಸಬೇಕು ಎಂದುಕೊಂಡಿದ್ದೇವೆ. ಸಾಮಾನ್ಯ ಜನರ ಕತೆ ಹೊತ್ತಿರುವ ನಮ್ಮ ಚಿತ್ರದ ಆಡಿಯೋ ಸಾಮಾನ್ಯ ಜನರ ನಡುವಲ್ಲೇ ಬಿಡುಗಡೆಯಾಬೇಕು ಎಂಬುದು ನಮ್ಮ ಆಶಯ.
ಅದಕ್ಕಾಗಿ ನಿಮ್ಮ ಜನತಾ ದರ್ಶನದ ವೇಳೆ ನಾವೂ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ನಿಮ್ಮಿಂದ ಆಡಿಯೋ ಬಿಡುಗಡೆ ಮಾಡಿಸಬೇಕು ಎಂದು ಬಯಸಿದ್ದೇವೆ. ಇದಕ್ಕೆ ತಾವು ದಯಮಾಡಿ ಒಪ್ಪಿಗೆ ನೀಡಬೇಕು’ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ ನಿರ್ದೇಶಕ ರಾಕೇಶ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.