ಸಿನಿಮಾ ಪಾತ್ರಗಳಿಂದ ಹೊರಬರದ ನಟರು: ಮನೋವೈದ್ಯರ ಮೊರೆ ಹೋದ ರಣವೀರ್ ಸಿಂಗ್, ದೀಪಿಕಾ

Published : Oct 12, 2017, 11:13 AM ISTUpdated : Apr 11, 2018, 01:00 PM IST
ಸಿನಿಮಾ ಪಾತ್ರಗಳಿಂದ ಹೊರಬರದ ನಟರು: ಮನೋವೈದ್ಯರ ಮೊರೆ ಹೋದ ರಣವೀರ್ ಸಿಂಗ್, ದೀಪಿಕಾ

ಸಾರಾಂಶ

ರಣವೀರ್ ಸಿಂಗ್'ಗೆ ಅಲ್ಲಾವುದ್ದೀನ್ ಖಿಲ್ಜಿ ಕಾಟ. ಖಿಲ್ಜಿ ಥರವೇ ಆಡ್ತಾರೆ ರಣವೀರ್ ಸಿಂಗ್. ಪರಕಾಯ ಪ್ರವೇಶದ ಪರಿಣಾಮ ಘೋರ.ಪದ್ಮಾವತಿ ಪಾತ್ರದಾರಿ ದೀಪಿಕಾ ಪರಿಸ್ಥಿತಿನೂ ಇದಕ್ಕೆ ಹೊರತಾಗಿಲ್ಲ. ಇಬ್ಬರೂ ಮನೋ ವೈದ್ಯರ ಮೊರೆ ಹೋಗಿದ್ದಾರೆ. ಪದ್ಮಾವತಿ ಚಿತ್ರವೇ ಇದಕ್ಕೆಲ್ಲ ಕಾರಣ.

ಬಾಲಿವುಡ್​'ನ ಪದ್ಮಾವತಿ ಚಿತ್ರ ದೊಡ್ಡ ಭರವಸೆ ಮೂಡಿಸಿದೆ. ಅದಕ್ಕೆ ಕಲಾವಿದರ ಡೆಡಿಕೇಷನೇ ಕಾರಣ. ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ಅಲ್ಲಾವುದ್ದೀನ್ ಖಿಲ್ಜಿ ಆಗಿದ್ದಾರೆ ನಟ ರಣವೀರ್ ಸಿಂಗ್. ಅದಕ್ಕೆ ಖಿಲ್ಜಿ ಪಾತ್ರ ಜನರನ್ನ ಸೆಳೆಯುತ್ತಿದೆ. ಒಂದು ವರ್ಷಗಳ ಕಾಲ ಈ ಪಾತ್ರದಲ್ಲಿಯೇ ಇದ್ದ ರಣವೀರ್ ಪರಸ್ಥಿತಿ ವಿಚಿತ್ರವಾಗಿಯೇ ಇದೆ. ಈಗ ಖಿಲ್ಜಿ ಥರನೇ ರಣವೀರ್ ವರ್ತನೆ ಇದೆಯಂತೆ

ಖಿಲ್ಜಿ ಪಾತ್ರದಿಂದ ರಣವೀರ್ ಹೊರ ಬಂದೇ ಇಲ್ಲ. ಸ್ನೇಹಿತರು ಈತನ ವರ್ತನೆ ಕಂಡು ಮನೋವೈದ್ಯರನ್ನು ಸಂಪರ್ಕಿಸು ಅಂತ ಸಲಹೆನೂ ಕೊಟ್ಟಿದ್ದಾರಂತೆ . ರಣವೀರ್ ಆ ಕೆಲಸವನ್ನೂ ಮಾಡಿ ಆಗಿದೆ. ರಣವೀರ್'ಗೆ ಬಂದ ಸ್ಥಿತಿ ದೀಪಿಕಾಗೂ ಬಂದೊದಗಿದೆ.  

ಪದ್ಮಾವತಿಯಾಗಿ ಒಂದು ವರ್ಷ ಇದ್ದ ದೀಪಿಕಾ ಇನ್ನೂ ಅದೇ ಮೂಡ್​​ 'ನಲ್ಲಿಯೇ ಇದ್ದಾರಂತೆ. ಯಾಕಂದ್ರೆ ಚಿತ್ರದ ಕೊನೆಯ ದೃಶ್ಯ ಈ ಬೆಡಗಿಯನ್ನ ಡಿಸ್ಟರ್ಬ್ ಮಾಡಿದೆ. ಆದ್ದರಿಂದ ದೀಪಿಕಾ ಕೂಡ ಮನೋವೈದ್ಯರನ್ನ ಸಂಪರ್ಕಿಸಿ ಆಗಿದೆ. ಪರಕಾಯ ಪ್ರವೇಶದ ಪರಿಣಾಮ ಎಷ್ಟಿರುತ್ತೆ ಅಲ್ಲವೇ..?ಅದಕ್ಕೇ ಅಲ್ಲವೇ ಇವರನ್ನ ಗ್ರೇಟ್ ಕಲಾವಿದರು ಅನ್ನೋದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial: ಮೋಸಗಾತಿಯ ಬಲೆಗೆ ಬಿದ್ದ ನಿಧಿ Red Light ಏರಿಯಾದಲ್ಲಿ ಸಿಕ್ಕಾಕ್ಕೊಂಡ್ಲು! ಮುಂದೇನು?
ಗಂಡ-ಹೆಂಡ್ತಿ ಮಲಗಿದ್ರೂ ಬೆಡ್​ರೂಂ ಯಾವಾಗ್ಲೂ ಯಾಕೆ ಓಪನ್​ ಇರ್ಬೇಕು ಗೊತ್ತಾ? ಸೀರಿಯಲ್​ ಪ್ರೇಮಿಗಳು ಉತ್ತರಿಸ್ತಾರೆ ಕೇಳಿ!