
‘ಕೆಲವು ದಿನಗಳ ಹಿಂದೆ ನಾಗತಿಹಳ್ಳಿ ಸರ್ ಸಿನಿಮಾ ಶೂಟಿಂಗ್ಗೆ ಪಂಜಾಬ್ನ ಅಮೃತ್ಸರ್ಗೆ ಹೋಗಿದ್ದೆವು. ಅಲ್ಲಿನ ಜನ ನನ್ನನ್ನು ನೋಡಿ, ಕುತೂಹಲದಿಂದ ಮುತ್ತಿಕೊಂಡರು. ಅವರೆಲ್ಲ ಯಾಕೆ ಬಂದರು ಅಂತ ಗಾಬರಿಯಾದೆ. ಆಮೇಲೆ ಗೊತ್ತಾಗಿದ್ದು ಅವರು ಕೆಜಿಎಫ್ ಸಿನಿಮಾದ ಟ್ರೇಲರ್ ನೋಡಿದವರು. ಸಿನಿಮಾ ಬರುವ ಮುನ್ನ ಟ್ರೇಲರ್ ನೋಡಿಯೇ ನನ್ನನ್ನು ಗುರುತಿಸಿ ಸೆಲ್ಫಿ ತೆಗೆದುಕೊಂಡಿದ್ದು ರೋಚಕ ಎನಿಸಿತು. ಅದೇ ಅನುಭವ ಹೈದರಾಬಾದ್ನಲ್ಲೂ ಆಯ್ತು.
ತೆಲುಗು ಸಿನಿಮಾ ಶೂಟಿಂಗ್ಗೆ ಹೋದಾಗ ಸಾಕಷ್ಟು ಜನಮಾತನಾಡಿಸಿ ಸೆಲ್ಫಿ ತೆಗೆಸಿಕೊಂಡರು. ಇದೆಲ್ಲ ಸಾಧ್ಯವಾಗಿದ್ದು ಕೆಜಿಎಫ್ ಮೂಲಕ’ ಎನ್ನುತ್ತಾ ಕೆಜಿಎಫ್ ಪಾತ್ರದ ಮೂಲಕ ಆದ ಬೆಳವಣಿಗೆಳನ್ನು ವಿವರಿಸುತ್ತಾರೆ ವಸಿಷ್ಠ ಸಿಂಹ.
ಕರ್ನಾಟಕ ಜನತೆಗೆ ನಟ ವಶಿಷ್ಠ ಸಿಂಹ ಸಂದೇಶ
ಕನ್ನಡದಲ್ಲಿ ‘ಕಾಲಚಕ್ರ’ ವಸಿಷ್ಠ ಹೀರೋ ಆದ ಮೊದಲ ಸಿನಿಮಾ. ಅದು ಚಿತ್ರೀಕರಣ ಮುಗಿಸಿದೆ. ‘ತಲ್ವಾರ್ ಪೇಟೆ’ ಶೀಘ್ರವೇ ಶೂಟಿಂಗ್ ಶುರುವಾಗಲಿದೆ. ಇನ್ನು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಅದ್ಭುತವಾಗಿ ಬಂದಿದೆ ಎನ್ನುವ ಖುಷಿ ಅವರದ್ದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.