ಕರ್ಣ ಸೀರಿಯಲ್‌ ಬಿಟ್ಟ ನಮ್ರತಾ ಗೌಡ ಕಿರಣ್‌ ಜೊತೆ ಕಾಣಿಸಿಕೊಂಡ್ರು.. ಅಚ್ಚರಿಯ ಈ ಬೆಳವಣಿಗೆ ರಹಸ್ಯವೇನು?

Published : Aug 11, 2026, 02:28 PM IST
Namratha Gowda

ಸಾರಾಂಶ

'ಬಿಗ್ ಬಾಸ್' ಮನೆಯಲ್ಲಿ ತನ್ನ ಚಾರ್ಮ್ ಮೂಲಕ ಗಮನ ಸೆಳೆದಿದ್ದ ಮತ್ತು 'ಕರ್ಣ' ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಮ್ರತಾ ಗೌಡ, ಈಗ ಹೊಸ ಅಚ್ಚರಿಯ ಸುದ್ದಿ ನೀಡಿದ್ದಾರೆ. ಏನಿದು ಅಮೃತಾ ಗೌಡ ಸುದ್ದಿ? ಯಾರದು ಕಿರಣ್ ..?

Namrata Gowda-Karna Serial-Mahaan Movie" 'ಮಹಾನ್' ಸದ್ದು!ಕಿರಣ್ ರಾಜ್ ಜೊತೆ ಮಿಂಚಿದ್ದ ನಮ್ರತಾ ಗೌಡ ಹೊಸ ಸುದ್ದಿ!

ಕನ್ನಡ ಚಿತ್ರರಂಗದಲ್ಲಿ ಸದ್ಯ ಟೈಟಲ್‌ನಿಂದಲೇ ಅತೀ ಹೆಚ್ಚು ಕುತೂಹಲ ಕೆರಳಿಸಿರುವ ಸಿನಿಮಾ ಎಂದರೆ ಅದು 'ಮಹಾನ್'. ಹೆಸರೇ ಹೇಳುವಂತೆ ಈ ಚಿತ್ರದಲ್ಲಿ ಕನ್ನಡದ 'ಮಹಾನ್' ಕಲಾವಿದರ ದಂಡೇ ಇದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಗತ್ತು ಮತ್ತು ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅವರ ಅಭಿನಯದ ತಾಕತ್ತು ಈ ಚಿತ್ರದ ಅತಿದೊಡ್ಡ ಪ್ಲಸ್ ಪಾಯಿಂಟ್. ಈಗ ಈ ಚಿತ್ರತಂಡದಿಂದ ಮತ್ತೊಂದು ಬಿಸಿ ಬಿಸಿ ಸುದ್ದಿ ಹೊರಬಿದ್ದಿದ್ದು, ಚಿತ್ರದ ಪ್ರಮುಖ ಪಾತ್ರಧಾರಿಗಳಾದ ನಮ್ರತಾ ಗೌಡ ಮತ್ತು ಕಿರಣ್ ಶ್ರೀನಿವಾಸ್ ಅವರ 'ಫಸ್ಟ್ ಲುಕ್' ಅನಾವರಣಗೊಂಡಿದೆ!

ರೈತರ ದನಿಯಾಗಲಿದ್ದಾರೆ ಬಿಗ್ ಬಾಸ್ ಸುಂದರಿ ನಮ್ರತಾ!

'ಬಿಗ್ ಬಾಸ್' ಮನೆಯಲ್ಲಿ ತನ್ನ ಚಾರ್ಮ್ ಮೂಲಕ ಗಮನ ಸೆಳೆದಿದ್ದ ಮತ್ತು 'ಕರ್ಣ' ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಮ್ರತಾ ಗೌಡ, ಈಗ 'ಮಹಾನ್' ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಅವರು ಕೇವಲ ಗ್ಲಾಮರ್ ಗೊಂಬೆಯಾಗಿರದೆ, ಒಬ್ಬ ಜವಾಬ್ದಾರಿಯುತ ವಿದ್ಯಾವಂತ ಹೆಣ್ಣುಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಗರದಲ್ಲಿ ಓದಿ, ಹಳ್ಳಿಗೆ ಮರಳಿ ಸಂಕಷ್ಟದಲ್ಲಿರುವ ರೈತರ ಧ್ವನಿಯಾಗಿ ಹೋರಾಡುವ ಪವರ್‌ಫುಲ್ ಪಾತ್ರ ಇವರದ್ದು. "ಪಿ.ಸಿ.ಶೇಖರ್ ಅವರಂತಹ ಅದ್ಭುತ ನಿರ್ದೇಶಕರ ಜೊತೆ ಕೆಲಸ ಮಾಡುವುದು ನನ್ನ ಕನಸಾಗಿತ್ತು, ಈ ಚಿತ್ರದ ಮೂಲಕ ಅದು ನನಸಾಗಿದೆ. ಶಿವಣ್ಣ ಮತ್ತು ವಿಜಯ್ ರಾಘವೇಂದ್ರ ಅವರಂತಹ ಘಟಾನುಘಟಿಗಳ ಜೊತೆ ಪರದೆ ಹಂಚಿಕೊಳ್ಳುತ್ತಿರುವುದು ನನ್ನ ಸೌಭಾಗ್ಯ" ಎನ್ನುತ್ತಾರೆ ನಮ್ರತಾ.

ಹಳ್ಳಿ Vs ವಿದೇಶ: ಕಿರಣ್ ಶ್ರೀನಿವಾಸ್ ಪಾತ್ರದ ಗುಟ್ಟು!

'ಹಾಗೆ ಸುಮ್ಮನೆ' ಚಿತ್ರದ ಮೂಲಕ ಹುಡುಗಿಯರ ಮನಗೆದ್ದಿದ್ದ ಕಿರಣ್ ಶ್ರೀನಿವಾಸ್, ಬಹಳ ದಿನಗಳ ನಂತರ ಒಂದು ಗಟ್ಟಿಯಾದ ಪಾತ್ರದೊಂದಿಗೆ ಮರಳಿದ್ದಾರೆ. ಇವರ ಫಸ್ಟ್ ಲುಕ್ ಕೂಡ ಸಖತ್ ಪ್ರಾಮಿಸಿಂಗ್ ಆಗಿದೆ. ವಿದೇಶಕ್ಕೆ ಹೋಗಿ ಹಣ ಗಳಿಸಬೇಕೆಂಬ ಹಂಬಲ ಹೊತ್ತ ಹಳ್ಳಿಯ ಹುಡುಗ, ಅಂತಿಮವಾಗಿ ತನ್ನ ಮಣ್ಣಿನಲ್ಲೇ ಏನು ಸಾಧಿಸುತ್ತಾನೆ ಎಂಬುದು ಇವರ ಪಾತ್ರದ ಸಾರಾಂಶ. ಸಮಾಜಕ್ಕೆ ಒಂದು ಮೌಲಿಕ ಸಂದೇಶ ನೀಡುವ ಈ ಚಿತ್ರದಲ್ಲಿ ನಟಿಸಿರುವುದು ಕಿರಣ್ ಅವರಿಗೆ ತುಂಬಾನೇ ಖುಷಿ ನೀಡಿದೆಯಂತೆ.

ನಿರ್ದೇಶಕ ಪಿ.ಸಿ.ಶೇಖರ್ ಅವರ ಸೃಜನಶೀಲ ಮ್ಯಾಜಿಕ್!

ಸ್ಟೈಲಿಶ್ ಮೇಕಿಂಗ್‌ಗೆ ಹೆಸರಾದ ನಿರ್ದೇಶಕ ಪಿ.ಸಿ.ಶೇಖರ್, ಈ ಬಾರಿ ಮಣ್ಣಿನ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ. ರೈತರ ಬದುಕು ಮತ್ತು ಸಮಾಜಕ್ಕೆ ಬೇಕಾದ ಉತ್ತಮ ಸಂದೇಶವನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ಹೇಳಲು ಹೊರಟಿದ್ದಾರೆ. ಅವರಿಗೆ ಸಾಥ್ ನೀಡುತ್ತಿರುವುದು ಪ್ರಕಾಶ್ ಬುದೂರು ಅವರ 'ಆಕಾಶ ಪಿಕ್ಚರ್ಸ್'. "ನಮ್ರತಾ ಮತ್ತು ಕಿರಣ್ ಈ ಚಿತ್ರಕ್ಕೆ ಹೊಸ ಕಳೆ ತಂದಿದ್ದಾರೆ. ನಾವು ಈವರೆಗೂ ನೋಡಿರದ ವಿಭಿನ್ನ ಆಯಾಮದಲ್ಲಿ ಇವರಿಬ್ಬರೂ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ" ಎನ್ನುತ್ತಾರೆ ನಿರ್ದೇಶಕರು.

ರಾಧಿಕಾ ನಾರಾಯಣ್, ಮಿತ್ರ ಸೇರಿದಂತೆ ಹಿರಿಯ ಕಲಾವಿದರ ತಾರಾಬಳಗವಿರುವ 'ಮಹಾನ್', ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಮೂಡಿಸುವುದು ಗ್ಯಾರಂಟಿ. ರೈತರ ಪರವಾಗಿ ಶಿವಣ್ಣ ಮತ್ತು ತಂಡದ ಈ ಹೋರಾಟ ಬೆಳ್ಳಿತೆರೆಯಲ್ಲಿ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಒಟ್ಟಿನಲ್ಲಿ, ಆಗಸ್ಟ್ ತಿಂಗಳ ಈ ಸಿನಿಮಾ ಸುದ್ದಿಗಳು ಗಾಂಧಿನಗರದ ಕಾವು ಹೆಚ್ಚಿಸಿರುವುದಂತೂ ಸುಳ್ಳಲ್ಲ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಲ್ಲಾ ದಾಖಲೆ ಉಡೀಸ್‌ ಮಾಡಿದ ಯಶ್ 'ಟಾಕ್ಸಿಕ್'.. ಅಮೆರಿಕಾದಲ್ಲಿ ಆಗಿರೋ ಶಾಕಿಂಗ್ ಬೆಳವಣಿಗೆ ಏನ್ ಗೊತ್ತಾ?!
Netflixನ ಈ 5 ಹಾರರ್ ಫಿಲಂ ರಾತ್ರಿ ಒಬ್ಬರೇ ನೋಡ್ಬೇಡಿ… ಒಂದೊಂದು ದೃಶ್ಯವೂ ನಡುಕ ಹುಟ್ಟಿಸುತ್ತೆ