
ವಿಷ್ಣುವರ್ಧನ್ ಅಭಿನಯದ ಈ ಚಿತ್ರವನ್ನು ಅವರ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟೆಂಬರ್ 20ರಂದು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಬಿಸಿ ಪಾಟೀಲ್ ನಿರ್ಧರಿಸಿದ್ದಾರೆ.
‘ನಾನು ಪೊಲೀಸ್ ಅಧಿಕಾರಿ ಆಗಿದ್ದಾಗ ನಿರ್ಮಿಸಿದ ಸಿನಿಮಾ ಇದು. ಪೊಲೀಸರಿಗೆ ಗೌರವ ತರುವಂಥ ಒಂದು ಕತೆ ಬೇಕು ಅಂದಾಗ ಸುನಿಲ್ ಕುಮಾರ್ ದೇಸಾಯಿ ಈ ಸಿನಿಮಾದ ಕತೆ ಹೇಳಿದರು. ನನಗೆ ಇಷ್ಟವಾಯಿತು. ವಿಷ್ಣುವರ್ಧನ್, ಅನಂತನಾಗ್ ಮುಖ್ಯಪಾತ್ರಗಳಲ್ಲಿ ನಟಿಸಿದರೆ, ನಾನು ಖಳನಾಯಕನಾಗಿ ನಟಿಸಿದೆ.
ರಾಜಕಾರಣದಲ್ಲೊಬ್ಬ ಕ್ರೇಜಿ ರಾಜಕಾರಣಿ; ‘ನಿಷ್ಕರ್ಷ’ ರೀ ರಿಲೀಸ್ ಗೆ ಬಿಗ್ ಪ್ಲ್ಯಾನ್!
ಬ್ಯಾಂಕ್ ದರೋಡೆಯ ಕತೆಯನ್ನು ಹೊಂದಿದ್ದ ಈ ಚಿತ್ರದಲ್ಲಿ ಹಾಡು ಇರಲಿಲ್ಲ, ನಾಯಕಿಯೂ ಇಲ್ಲ. ಹೀಗಾಗಿ ಇದನ್ನು ಯಾರೂ ನೋಡುವುದಿಲ್ಲ ಎಂಬ ಟೀಕೆ ಬಂತು. ಆದರೆ ಈ ಸಿನಿಮಾ ತ್ರಿವೇಣಿ ಮತ್ತು ಸಂತೋಷ್ ಚಿತ್ರಮಂದಿಗಳಲ್ಲಿ 106 ದಿನ ಓಡಿ ದಾಖಲೆ ಮಾಡಿತು. ಇದಕ್ಕೆ ಮೂರು ರಾಜ್ಯಪ್ರಶಸ್ತಿಗಳೂ ಬಂದವು. ಉದಯ ಫಿಲ್ಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಏಳು ಪ್ರಶಸ್ತಿ ಬಂತು. ಜನ ಇದನ್ನು ಕೊಂಡಾಡಿದರು.
ಈ ಸಿನಿಮಾ 25 ವರ್ಷಗಳ ನಂತರ ಬರಬೇಕಿತ್ತು ಅಂತ ಆಗ ಕೆಲವರು ಗೇಲಿ ಮಾಡಿದ್ದರು. ಇದೀಗ 25 ವರ್ಷಗಳ ನಂತರವೂ ತನ್ನ ರೋಚಕತೆ ಕಳೆದುಕೊಳ್ಳದ ಈ ಸಿನಿಮಾ ಈಗ ಮತ್ತೊಮ್ಮೆ ತೆರೆ ಕಾಣುತ್ತಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಂಡು, ಡಿಟಿಎಸ್ ಸೌಂಡ್ನೊಂದಿಗೆ ಹಿಂದಿ ಮತ್ತು ಕನ್ನಡದಲ್ಲಿ ಇದನ್ನು ತೆರೆಗೆ ತರುತ್ತಿದ್ದೇನೆ. ನೂರಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತೇನೆ. ಇದು ವಿಷ್ಣು ಹುಟ್ಟುಹಬ್ಬಕ್ಕೆ ನನ್ನ ಕೊಡುಗೆ’ ಎಂದು ಬಿಸಿ ಪಾಟೀಲ್ ತಮ್ಮ ಮನಸ್ಸಿನ ಮಾತು ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.