
ರಾಜೇಶ್ ಶೆಟ್ಟಿ
ಇದೊಂದು ರಿವೇಂಜ್ ಡ್ರಾಮಾ ಕೆಟಗರಿಗೆ ಸೇರಿದ ಸಿನಿಮಾ. ಒಂದೂರಲ್ಲೊಂದು ಕುಟುಂಬ ಇರುತ್ತದೆ. ಗಂಡ ಮತ್ತು ಹೆಂಡತಿ. ಗಂಡನಿಗೆ ಹಳ್ಳಿ ವ್ಯಾಮೋಹ. ಹೆಂಡತಿಯ ಆಸೆ ಏನು ಅಂತ ಸುಲಭಕ್ಕೆ ಗೊತ್ತಾಗುವುದಿಲ್ಲ. ಗೊತ್ತಾಗುವ ಹೊತ್ತಿಗಾಗಲೇ ಬೇಲಿ ಹಾರಿಯಾಗಿರುತ್ತದೆ. ಪತಿ, ಪತ್ನಿ ಔರ್ ವೊ ಥರದ ಸಿನಿಮಾಗಳು ಚಿತ್ರರಂಗಕ್ಕೆ ಹೊಸತಲ್ಲ. ಮೋಸ ಹೇಗೆ ಆಗುತ್ತದೆ ಮತ್ತು ಹೇಗೆ ದ್ವೇಷ ತೀರಿಸಿಕೊಳ್ಳಬಹುದು ಅನ್ನುವುದಷ್ಟೇ ಹೊಸತು. ಅದನ್ನು ಚಿತ್ರಕತೆಯಲ್ಲಿ ಸಶಕ್ತವಾಗಿ ತರುವುದು ಸವಾಲು. ಆ ಸವಾಲನ್ನು ಗೆಲ್ಲಲು ನಿರ್ದೇಶಕರು ಭಾರಿ ಶ್ರಮ ಪಟ್ಟಿದ್ದಾರೆ.
ಚಿತ್ರ: ಖನನ
ನಿರ್ದೇಶನ: ರಾಧಾ
ತಾರಾಗಣ: ಆರ್ಯವರ್ಧನ್, ಕರಿಷ್ಮಾ ಬರುಹಾ, ಯುವಕಿಶೋರ್, ಅವಿನಾಶ್
ನಿರ್ಮಾಣ: ಶ್ರೀನಿವಾಸ ರಾವ್
ಒಬ್ಬ ವ್ಯಕ್ತಿಯನ್ನು ಒಂದಿಡೀ ದಿನ ಉಸಿರಾಡದಂತೆ ಮಾಡಿ ಸತ್ತ ಎಂದು ಘೋಷಿಸಿ ಮರುದಿನ ಅವನನ್ನು ವಾಪಸ್ ಈ ಲೋಕಕ್ಕೆ ಕರೆತರುತ್ತಾರೆ. ಅವರು ಆತನನ್ನು ವಾಪಸ್ ಕರೆತರುವುದಕ್ಕೆ ಮಾಡಿದ ತಂತ್ರವೂ ಅಮೋಘವಾದದ್ದು. ಹೂತು ಹಾಕಿದ ಅವನ ಗೋರಿಯನ್ನು ನಾಯಿಯೇ ಅಗೆದು ಅವನು ಆಚೆ ಬರುವಂತೆ ಮಾಡಿದ್ದನ್ನು ನೋಡುವಾಗ ಬೆರಗಾಗದೆ ವಿಧಿಯಿಲ್ಲ.
ಚಿತ್ರ ವಿಮರ್ಶೆ: ಜಕ್ಕಣಚಾರಿ ಅವನ ತಮ್ಮ ಶುಕ್ಲಾಚಾರಿ
ಥ್ರಿಲ್ಲರ್ ಸಿನಿಮಾದಲ್ಲಿ ಸಸ್ಪೆನ್ಸ್ ಇರುತ್ತದೆ. ಇಲ್ಲೂ ಹಲವಾರು ಸಸ್ಪೆನ್ಸ್ ಉಂಟು. ನೀವು ಹುಡುಕಬೇಕು. ಬೋನಸ್ಸು ಎಂಬಂತೆ ಕಾಮಿಡಿ ಸೀನುಗಳೂ ಇವೆ. ಓಂಪ್ರಕಾಶ್ ರಾವ್, ಬ್ಯಾಂಕ್ ಜನಾರ್ದನ್ ಮುಂತಾದ ಘಟಾನುಘಟಿಗಳೇ ಇದ್ದಾರೆ. ಕಾಮಿಡಿ ಮಾತ್ರ ನೀವೇ ಕಂಡುಹಿಡಿಯಬೇಕು. ಅಷ್ಟೆಲ್ಲಾ ಇದ್ದೂ ನೋಡಿಸಿಕೊಂಡು ಹೋಗುವ ಗುಣವೂ ಈ ಸಿನಿಮಾಗಿದೆ. ಮುಂದೆ ಏನೇನು ನಡೆಯಬಹುದು ಅನ್ನುವ ಅಂದಾಜು ಮೊದಲೇ ಸಿಗುತ್ತದೆ.
ಕನ್ನಡದ ನಟ ಆರ್ಯವರ್ಧನ್ ಹೀರೋ ಆಗಲು ರೆಡಿಯಾಗಿಯೇ ಬಂದಿದ್ದಾರೆ. ಅವರಿಗೆ ಶ್ರದ್ಧೆ ಮತ್ತು ತಾಕತ್ತು ಎರಡೂ ಇದೆ. ಉಳಿದಿದ್ದು ದೈವೇಚ್ಛೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.