ನನಸಾಯಿತು ನವರಸನಾಯಕನ ಬಹುದಿನದ ಕನಸು!

Published : Dec 17, 2018, 03:13 PM IST
ನನಸಾಯಿತು ನವರಸನಾಯಕನ ಬಹುದಿನದ ಕನಸು!

ಸಾರಾಂಶ

  ಈಗಾಗಲೇ ಮೊಮ್ಮಗನಿಗೆ ತಾತನಾದ ನವರಸ ನಾಯಕ ಜಗ್ಗೇಶ್‌ಗೆ ಮನೆಗೊಂದು ಮಹಾಲಕ್ಷ್ಮಿ ಬರಬೇಕೆಂಬ ಆಸೆಯಿತ್ತು. ಅದೀಗ ನೆರವೇರಿದೆ. ಯಾರಿಗೆ ಮಗುವಾಯಿತು?

 

ಜೀವನದ ಬಂಡಿಯಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ನನಸು ಮಾಡಿಕೊಂಡ, ನವರಸ ನಾಯಕ ಜಗ್ಗೇಶ್‌ ಅವರ ಒಂದು ಆಸೆ ಮಾತ್ರ ಈಡೇರಲೇ ಇಲ್ಲ. ಅವರು ವಿಪರೀತ ನಂಬಿರುವ ಮಂತ್ರಾಲಯದ ರಾಯರು ಇದೀಗ ಆ ಆಸೆಯನ್ನೂ ಪೂರೈಸಿದ್ದು 'ಎದ್ದೇಳು ಮಂಜುನಾಥ' ಚಿತ್ರದ ಹೀರೋ ಫುಲ್ ಖುಷಿಯಾಗಿದ್ದಾರೆ.

ಬಹಳ ದಿನಗಳಿಂದಲೂ ಮನೆಗೊಂದು ಮಹಾಲಕ್ಷ್ಮಿ ಬೇಕೆಂಬ ಕನಸಿತ್ತು ಜಗ್ಗೇಶ್‌ಗೆ. ಹೆಣ್ಣು ಮಕ್ಕಳು ಹಾಗೂ ಅವರ ಸಾಧನೆ ಕಂಡರೆ ನನಗೂ ಹೆಣ್ಣು ಮಗು ಇರಬೇಕಿತ್ತು ಎಂದೆನಿಸುತ್ತಿತ್ತು. ಆದರದು ಆಗಲ್ಲಿಲ್ಲ. ಆದರೆ ಮನೆಗೊಂದು ಮೊಮ್ಮಗಳಾದರೂ ಬರಲಿ ಎಂಬ ಆಸೆ ಇದೆ ಎಂದು ಹೇಳಿಕೊಂಡಿದ್ದರು. ಆದಕ್ಕೂ ಈಗ ರಾಯರು 'ತಥಾಸ್ತು' ಅಂದಿದ್ದಾರೆ.

 

ತಮ್ಮನಾದ ರಾಮಚಂದ್ರ ಅವರ ಮಗನಿಗೆ ಹೆಣ್ಣು ಮಗು ಹುಟ್ಟಿದ್ದು, ಅದರೊಂದಿಗಿನ ಫೋಟೋವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಜಗ್ಗೇಶ್ ಹಿರಿಯ ಪುತ್ರ ಗುರುರಾಜ್‌ಗೆ ಗಂಡು ಮಗುವಿದ್ದು, ಮೊಮ್ಮಗನೊಂದಿಗೆ ಕಳೆದ ಅದ್ಭುತ ಕ್ಷಣಗಳ ವೀಡಿಯೋವನ್ನು ಈ ಹಿಂದೆ ಅಪ್‌ಲೋಡ್ ಮಾಡಿದ್ದರು. ಇದೀಗ ಹೆಣ್ಣು ಮಗು ಕುಟುಂಬಕ್ಕೆ ಬಂದಿರುವ ಸಂತೋಷವನ್ನು ಜಗ್ಗೇಶ್ ಅಭಿಮಾನಿಗಳೊಂದಿಗೆ ಹಂಚಿ ಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ಯದ ಗಡಿ ಆನೇಕಲ್‌ನಲ್ಲಿ ದರ್ಶನ್ 'ಡೆವಿಲ್‌'ಗೆ ಹೀಗೆಲ್ಲಾ ಆಗ್ತಿದ್ಯಾ?
ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು