ಸ್ವಾತಂತ್ರ್ಯದಿನಕ್ಕೆ ಸಾಹಸ, ಕನ್ನಡದ 62 ದಿಗ್ಗಜ ಗಾಯಕರು ಒಂದೇ ವೇದಿಕೆಯಲ್ಲಿ!

Published : Aug 14, 2020, 04:15 PM ISTUpdated : Aug 14, 2020, 07:53 PM IST
ಸ್ವಾತಂತ್ರ್ಯದಿನಕ್ಕೆ ಸಾಹಸ, ಕನ್ನಡದ  62 ದಿಗ್ಗಜ ಗಾಯಕರು ಒಂದೇ ವೇದಿಕೆಯಲ್ಲಿ!

ಸಾರಾಂಶ

ಸ್ವಾತಂತ್ರ್ಯ ದಿನದ ಕೊಡುಗೆ/ ಕನ್ನಡದ 62 ದಿಗ್ಗಜ ಗಾಯಕರು ಒಂದೇ ಕಡೆ/ ಯುಟ್ಯೂಬ್  ನಲ್ಲಿ ಸಧಬಿರುಚಿಯ ದೇಶಭಕ್ತಿ ಗೀತೆ/ ಕೇಳಿ ಆನಂದಿಸಿ#

ಬೆಂಗಳೂರು(ಆ. 14)  ಸ್ವಾತಂತ್ರ್ಯದಿನದ ಸಂಭ್ರಮ ಎಲ್ಲಡೆ ಮನೆ ಮಾಡಿದೆ. ರೋಹಿಣಿ ಟ್ರಸ್ಟ್ ಸಾರಥ್ಯದಲ್ಲಿ ಕನ್ನಡ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕನ್ನಡದ 62 ಪ್ರಖ್ಯಾತ ಗಾಯಕ ಗಾಯಕಿಯರು 'ಓ ತಾಯಿ ಭಾರತಿ'  ಎಂಬ ಗೀತೆಯನ್ನು ಹಾಡಿದ್ದು ಯೂ ಟ್ಯೂಬ್ ನಲ್ಲಿ ಜನಮೆಚ್ಚುಗೆಗೆ ಪಾತ್ರವಾಗಿದೆ.

ಇಂದು ವಿಶ್ವನಾಥ್ ಸಂಗೀತ ನಿರ್ದೇಶನ ಮಾಡಿದ್ದರೆ ಪದ್ಮಶ್ರೀ ಡಾ.ದೊಡ್ಡರಂಗೇಗೌಡರು ಸಾಹಿತ್ಯ  ಗೀತೆಗಿದೆ. ಓ ತಾಯಿ ಭಾರತಿ ಎಂಬ ದೇಶ ಭಕ್ತಿ ಗೀತೆ ಹೃಷಿ ಆಡಿಯೋ ವಿಡಿಯೋ  ಯು ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

ರಾಜು ಅನಂತಸ್ವಾಮಿ ಅವರಿಗೆ ಸಂಗೀತ ನಮನ ಸಲ್ಲಿಸಿದ್ದು ಹೀಗೆ?

ಸ್ವಾತಂತ್ರ್ಯದಿನಕ್ಕೆ ಏನಾದರೂ ಮಾಡಬೇಕು ಎನ್ನುವ ತುಡಿತ ಮೊದಲಿನಿಂದ ಇತ್ತು.  ಕೊರೋನಾ ಸಂದರ್ಭ ಸ್ಟುಡಿಯೋಕ್ಕೆ ಹೋಗಿ ಏನು ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಎಲ್ಲ ಗಾಯಕರನ್ನು ಕೇಳಿಕೊಂಡೆ. ಗೀತೆ ಕಂಪೋಸ್ ಮಾಡಿ ಯಾವ ಯಾವ ಗಾಯಕರಿಗೆ ಯಾವ ಯಾವ ಲೈನ್ ಕಳುಹಿಸಬೇಕು ಎಂದು  ತೀರ್ಮಾನಿಸಿ ಅದರಂತೆ ಹಾಡಿಸಿಕೊಂಡು ಗೀತೆ ಹೊರತಂದಿದ್ದೇವೆ ಎಂದು ಇಂದು ವಿಶ್ವನಾಥ್ ಹೇಳುತ್ತಾರೆ. 

ಕನ್ನಡದ ಸುಗಮ ಸಂಗೀತ, ಸಿನಿಮಾ ಕ್ಷೇತ್ರದ ಎಲ್ಲ ಗಾಯಕಿಯರನ್ನು ಒಂದು ಮಾಡಿ ಹಾಡಿಸಿ ಇಂದು ವಿಶ್ವನಾಥ್ ಹೊಸ  ಸಾಧನೆ ಮಾಡಿದ್ದಾರೆ.  ಹಾಗಾದರೆ ಗೀತೆ ಎಷ್ಟು ಇಂಪಾಗಿದೆ.. ನೀವು ಒಮ್ಮೆ ಕೇಳಿ ಆನಂದಿಸಿ...

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12 Video: ಸ್ನಾನ ಮಾಡದೇ ತೆಪ್ಪಗೆ ಕುಳಿತ ಸೂರಜ್; ಫ್ಲೈಯಿಂಗ್ ಕಿಸ್ ಕೊಟ್ಟು ಸಂತಸಪಟ್ಟ ರಕ್ಷಿತಾ ಶೆಟ್ಟಿ!
ಶಾರ್ಟ್ಸ್ ಧರಿಸಿ ಪೋಸ್ ಕೊಟ್ಟ ನಿವೇದಿತಾ ಗೌಡ… ವಯಸ್ಸು ಕಮ್ಮಿ ಆಗ್ತಿದೆ ಎಂದ ಜನ