
ಬೆಳಗಾವಿ(ಜು.12): ದಂಡುಪಾಳ್ಯ 2 ಚಲನಚಿತ್ರ ಬಿಡುಗಡೆ ಮಾಡಬೇಡಿ ಅಂತಾ ದಂಡುಪಾಳ್ಯ ಹಂತಕರು ಪ್ರತಿಭಟನೆಗೆ ಮುಂದಾಗಿದ್ದಾರೆ. ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ದಂಡು ಪಾಳ್ಯ ಗ್ಯಾಂಗ್, ತಿಂಡಿ-ಊಟ ಬಿಟ್ಟು ಚಲನಚಿತ್ರ ಬಿಡುಗಡೆಗೊಳಿಸದಂತೆ ಪ್ರತಿಭಟನೆಗೆ ಮುಂದಾಗಿದೆ.
ನಾವು ಎಷ್ಟೇ ಪತ್ರ ಬರೆದರೂ ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ನಮ್ಮೊಂದಿಗೆ ಬಂದು ಮಾತನಾಡಿಲ್ಲ. ಚಿತ್ರ ತಂಡದ ಯಾವೊಬ್ಬ ಸದಸ್ಯನೂ ನಮ್ಮನ್ನ ಭೇಟಿ ಮಾಡಿಲ್ಲ. ಹೀಗಾಗಿ ನಾವು ಚಿತ್ರ ಬಿಡುಗಡೆಯನ್ನು ಖಂಡಿಸುತ್ತೇವೆ. ದಂಡುಪಾಳ್ಯ 2 ಬಿಡುಗಡೆಯಾಗಬಾರದು, ಚಿತ್ರತಂಡ ನಮ್ಮನ್ನ ಭೇಟಿಯಾಗಬೇಕು, ಅಲ್ಲಿವರೆಗೂ ನಾವು ಏನನ್ನೂ ಸೇವಿಸುವುದಿಲ್ಲ ಅಂತಾ ಪಟ್ಟು ಹಿಡಿದಿದ್ದಾರೆ. ಜೈಲು ಅಧಿಕಾರಿಗಳು ದಂಡುಪಾಳ್ಯ ಗ್ಯಾಂಗ್ ಮನವೊಲಿಸಲು ಯತ್ನಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.