
ಆದರೆ, ಕೌಟುಂಬಿಕ ಕಲಹಗಳಲ್ಲೇ ಮುಳುಗಿರುವ ವಿಜಯ್ ಅವರ ‘ಕುಸ್ತಿ’ ಕೈಗೂಡುವ ಲಕ್ಷಣಗಳು ಕಾಣುತ್ತಿಲ್ಲ ಎಂಬುದು ಸದ್ಯದ ಸುದ್ದಿ.
ತಮ್ಮ ಪುತ್ರ ಸಾಮ್ರಾಟ್ ವಿಜಯ್ನನ್ನು ಪರಿಚಯಿಸುತ್ತಿರುವ, ತಾನೂ ಕೂಡ ದೊಡ್ಡ ಮಟ್ಟದಲ್ಲಿ ಎಂಟ್ರಿ ಕೊಡುತ್ತಿರುವ ‘ಕುಸ್ತಿ’ಗೆ ಸ್ವತಃ ವಿಜಯ್ ಅವರೇ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ‘ಕುಸ್ತಿ’ ಹೆಸರಿನ ಸಿನಿಮಾ ಸದ್ಯಕ್ಕೆ ಸೆಟ್ಟೇರಲ್ಲ. ಹಾಗಾಗಿ ಈ ಚಿತ್ರಕ್ಕಾಗಿ ಅನೇಕ ತಿಂಗಳುಗಳ ಕಾಲ ದುಡಿದ ನಿರ್ದೇಶಕ ರಾಘು ಶಿವಮೊಗ್ಗ ಅವರ ಶ್ರಮ ವ್ಯರ್ಥವಾಗಿದೆ ಎನ್ನುವುದು ಬಲ್ಲ ಮೂಲಗಳ ಸುದ್ದಿ.
ತಮ್ಮದೇ ನಿರ್ಮಾಣದ ಚಿತ್ರವನ್ನು ಸ್ಟಾಪ್ ಮಾಡಿರುವ ವಿಜಯ್, ಮುಂದೆ ಯಾರ ನಿರ್ಮಾಣದ ಚಿತ್ರಕ್ಕೆ ನಾಯಕನಾಗುತ್ತಿದ್ದಾರೆ ಎಂಬುದು ಸದ್ಯ ಗಾಂಧಿನಗರದಲ್ಲಿ ಓಡಾಡುತ್ತಿರುವ ಸುದ್ದಿಗಳು. ಈಗ ಬಂದಿರುವ ಮಾಹಿತಿಯಂತೆ ‘ಕುಸ್ತಿ’ ಚಿತ್ರವನ್ನು ನಿಲ್ಲಿಸಿರುವ ವಿಜಯ್, ಭೂಗತ ಲೋಕದ ಕತೆಯೊಂದನ್ನು ಸಿನಿಮಾ ಮಾಡುವ ತಯಾರಿಯಲ್ಲಿದ್ದಾರಂತ. ಈಗಾಗಲೇ ಅಂಥದ್ದೊಂದು ಕತೆಯ ಹುಡುಕಾಟಕ್ಕಿಳಿದಿರುವ ವಿಜಯ್, ಕತೆಯ ಸಾಲು ಸಿಕ್ಕಿದೆಯಂತೆ. ‘ಕುಸ್ತಿ’ ನಿಲ್ಲಿಸಿರುವ ಕಾರಣ, ರಾಘು ಶಿವಮೊಗ್ಗ ಅವರಿಂದಲೇ ಈ ಹೊಸ ಸಿನಿಮಾ ಮಾಡಿಸುವ ಯೋಚನೆ ವಿಜಯ್ ಅವರದ್ದು. ಅಲ್ಲಿಗೆ ‘ಕುಸ್ತಿ’ ಕೈ ಬಿಟ್ಟರೂ ‘ಚೂರಿಕಟ್ಟೆ’ ನಿರ್ದೇಶಕನನ್ನು ಭೂಗತಲೋಕ ಕತೆ ಕೈ ಹಿಡಿಯಬಹುದೇ ಎನ್ನುವ ಲೆಕ್ಕಾಚಾರಗಳು ಶುರುವಾಗಿವೆ.
ಮತ್ತೊಂದು ಮಾಹಿತಿಯ ಪ್ರಕಾರ ಕುಸ್ತಿ ಕೈ ಬಿಟ್ಟ ಮೇಲೆ ರಾಘು ಶಿವಮೊಗ್ಗ ಬೇರೊಂದು ಕತೆ ಮಾಡಿಕೊಂಡು, ಮತ್ತೊಬ್ಬ ಹೀರೋಗಾಗಿ ಕಾಯುತ್ತಿದ್ದಾರಂತೆ. ಇತ್ತ ನಟ ವಿಜಯ್ ಒಂದು ಕೋಟಿ ಬಜೆಟ್ ಒಳಗೆ ಒಂದು ರೆಗ್ಯುಲರ್ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದು, ಇದಕ್ಕೆ ನಿರ್ದೇಶಕ ಯಾರೆಂದು ಪಕ್ಕಾ ಆಗಿಲ್ಲವಂತೆ.
ಕುಸ್ತಿ ಯಾಕೆ ನಿಲ್ಲಿಸಿದ್ದು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.