ರಾಕಿಭಾಯ್ ಬರ್ತಡೇಗೆ ಕೆಜಿಎಫ್ 2 ಡೈರೆಕ್ಟರ್ ಕೊಟ್ರು ಶಾಕಿಂಗ್ ನ್ಯೂಸ್!

Suvarna News   | Asianet News
Published : Jan 06, 2020, 03:32 PM ISTUpdated : Jan 06, 2020, 03:33 PM IST
ರಾಕಿಭಾಯ್ ಬರ್ತಡೇಗೆ ಕೆಜಿಎಫ್ 2 ಡೈರೆಕ್ಟರ್ ಕೊಟ್ರು ಶಾಕಿಂಗ್ ನ್ಯೂಸ್!

ಸಾರಾಂಶ

ಜನವರಿ 08 ರಂದು ಯಶ್ ಬರ್ತಡೇ ಸೆಲಬ್ರೇಟ್ ಮಾಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬರ್ತಡೇ ಸಂಭ್ರಮದ ನಡುವೆಯೇ ಕೆಜಿಎಫ್ 2 ಡೈರೆಕ್ಟರ್ ಪ್ರಶಾಂತ್ ನೀಲ್ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. 

ರಾಕಿಭಾಯ್ ಯಶ್ ಕೆಜಿಎಫ್ 2 ಭಾರೀ ನಿರೀಕ್ಷೆ ಮೂಡಿಸಿದೆ. ರಾಕಿಭಾಯ್ ಬರ್ತಡೇಗೆ ಅಂದರೆ ಜನವರಿ 8 ಕ್ಕೆ ಕೆಜಿಎಫ್ ಟೀಸರ್ ರಿಲೀಸ್ ಆಗುತ್ತೆ ಎಂದು ಚಿತ್ರತಂಡ ಹೇಳಿತ್ತು. ಯಶ್ ಬರ್ತಡೇ ಸಂಭ್ರಮವನ್ನು ಹಾಗೂ ಟೀಸರ್ ರಿಲೀಸನ್ನು ಸೆಲಬ್ರೇಟ್ ಮಾಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ನಿರ್ದೆಶಕ ಪ್ರಶಾಂತ್ ನೀಲ್ ಅಭಿಮಾನಿಗಳು ಶಾಕಿಂಗ್ ನ್ಯೂಸ್ ನೀಡಿದ್ದಾರೆ . 

ರಾಕಿಭಾಯ್ ಬರ್ತಡೇದಿನ ಟೀಸರ್ ಬಿಡುಗಡೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 'ಕೆಜಿಎಫ್ 2 ಟೀಸರನ್ನು ನಾವು ಜನವರಿ 08 ರಂದು ರಿಲೀಸ್ ಮಾಡುತ್ತಿಲ್ಲ. ಜನವರಿ 06 ರ ವರೆಗೆ ಶೂಟಿಂಗ್ ನಡೆಯುತ್ತಿದ್ದು 7 ರಂದು ವಾಪಸ್ಸಾಗುತ್ತಿದ್ದೇವೆ. ನೀವೆಲ್ಲಾ ಕೆಜಿಎಫ್ 2 ಬಗ್ಗೆ ಅಪಾರವಾದ ಪ್ರೀತಿ, ವಿಶ್ವಾಸ, ನಿರೀಕ್ಷೆ ಇಟ್ಟೀದ್ದೀರಿ. ಅದನ್ನು ಸುಳ್ಳು ಮಾಡಲು ನಮಗಿಷ್ಟವಿಲ್ಲ. ದಿ ಬೆಸ್ಟನ್ನು ನಿಮಗೆ ಕೊಡಲು ಬಯಸುತ್ತೇವೆ. ಹಾಗಾಗಿ ಟೀಸರ್ ಬರುವುದು ಸ್ವಲ್ಪ ತಡವಾಗುತ್ತದೆ. ಜನವರಿ 08 ಯಶ್ ಬರ್ತಡೇ ದಿನ ಕೆಜಿಎಫ್ 2 ಪೋಸ್ಟರನ್ನು ರಿಲೀಸ್ ಮಾಡಲಿದ್ದೇವೆ. ಅದು ನಿಮಗಿಷ್ಟವಾಗುತ್ತದೆ' ಎಂಬ ನಂಬಿಕೆ ನಮಗಿದೆ. ನಿಮ್ಮೆಲ್ಲರಿಗೂ ಧನ್ಯವಾದಗಳು ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.  

ಸಲಾಂ ರಾಕಿಭಾಯ್..! ವಿಶ್ವ ದಾಖಲೆ ಮಾಡಲಿದೆ ಯಶ್ ಬರ್ತ್ ಡೇ ಕೇಕ್!

ಈ ಬಾರಿ ರಾಕಿಂಗ್ ಸ್ಟಾರ್ ಯಶ್ ಜನ್ಮ ದಿನ ವಿಶೇಷತೆಯಲ್ಲಿ ವಿಶೇಷವಾಗಿಯೇ ಇರಲಿದೆ. ಬೆಂಗಳೂರಿನ ಯಶ್ ಅಪ್ಪಟ ಅಭಿಮಾನಿ ವೇಣು ಗೌಡ, ತಮ್ಮ ನೆಚ್ಚಿನ ನಾಯಕನಿಗೆ ಕೇಕ್ ಮಾಡಿಸಲಿದ್ದಾರೆ. 5 ಸಾವಿರ ಕೆ.ಜಿ.ತೂಕದ ಕೇಕ್ ಅದು. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗಾಗಿ 4500 ಕೆಜಿ ತೂಕದ ಕೇಕ್ ತಯಾರ್ ಆಗಿತ್ತು.ಆದರೆ,ರಾಕಿ ಭಾಯ್ ಜನ್ಮ ದಿನ ಕೇಕ್ 5 ಸಾವಿರ ಕೆ.ಜಿ ಇದೆ. 

ಇದು ವಿಶ್ವ ದಾಖಲೆನೇ ಸರಿ. ಇಲ್ಲಿವರೆಗೂ ಯಾರೂ ತಮ್ಮ ನೆಚ್ಚಿನ ನಾಯಕನಿಗಾಗಿ 5000 ಕೆ.ಜಿ.ತೂಕದ ಕೇಕ್ ಮಾಡಿಸಿಯೇ ಇಲ್ಲ.ಅಷ್ಟು ವಿಶೇಷವಾದ ಈ ಕೇಕ್ ತಯಾರಿಯನ್ನ ನಾಗರಭಾವಿಯ ಶ್ರೀ ರಾಮ್ ಭವನ್ ಸ್ಟೀಟ್ಸ್ ನವ್ರು ಎರಡು ದಿನದ ಮುಂಚೆಯೇ ನಂದಿ ಲಿಂಕ್ ಗ್ರೌಂಡ್ ಅಲ್ಲಿ ಆರಂಭಿಸಲಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನನ್ನ ಸಂತೋಷ ಅಮೂಲ್ಯ, ಕರ್ಮದಲ್ಲಿ ನನಗೆ ನಂಬಿಕೆ ಇದೆ..' ದಿಲೀಪ್‌ ಖುಲಾಸೆ ಬೆನ್ನಲ್ಲೇ ವೈರಲ್‌ ಆದ ಜಾಕಿ ಭಾವನಾ ಮಾತು!
ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!