
ಎಂದಿನಂತೆ ನಟ ದರ್ಶನ್ ಅವರೇ ಈ ಚಿತ್ರದ ಮುಹೂರ್ತಕ್ಕೂ ಬಂದ ಚಾಲನೆ ಕೊಟ್ಟಿದ್ದಾರೆ. ಈಗ ಚಿತ್ರಕ್ಕೆ ನಾಯಕಿ ಆಯ್ಕೆ ಆಗಿದ್ದಾರೆ. ಧರ್ಮ ಕೀರ್ತಿರಾಜ್ ಜತೆ ಹೆಜ್ಜೆ ಹಾಕಲು ರೆಡಿಯಾಗಿರುವ ನಾಯಕಿ ಹೆಸರು ಅನುಷಾ ರೈ.
ಅನುಷಾ ಈ ಹಿಂದೆ ‘ಮಹಾನುಭಾವರು’, ‘ಗೋಸಿಗ್ಯಾಂಗ್’, ‘ಬಿಎಂಡಬ್ಲ್ಯೂ’, ‘ಕರ್ಷಣಂ’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದವರು. ಹಾಗೆ ಕಿರುತೆರೆಯಲ್ಲೂ ಮುಖ ತೋರಿಸಿದ ಪ್ರತಿಭೆ. ‘ರಾಜಕುಮಾರಿ’, ‘ನಾಗಕನ್ನಿಕೆ’, ‘ಅಣ್ಣಯ್ಯ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈಗ ‘ಖಡಕ್’ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಮತ್ತೊಂದು ಮಾಸ್ ಕರ್ಮಷಿಯಲ್ ಚಿತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ. ರಾಜರತ್ನ ಎಂಬುವವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಈ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವುದು ಬಾಲಿವುಡ್ನ ಕಬೀರ್ ದುಹಾನ್ ಸಿಂಗ್. ವಲ್ಲಿ ಹಾಗೂ ಸಿದ್ದರಾಮಯ್ಯ ಸಿಂಗಾಪುರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.