ಮತ್ತೊಂದು ಹೊಸ ಗೆಟಪ್‌ನಲ್ಲಿ ದರ್ಶನ್ ದರ್ಶನ ಯಾವಾಗ ಗೊತ್ತಾ..?

Published : Sep 19, 2018, 01:23 PM ISTUpdated : Sep 19, 2018, 01:58 PM IST
ಮತ್ತೊಂದು ಹೊಸ ಗೆಟಪ್‌ನಲ್ಲಿ ದರ್ಶನ್ ದರ್ಶನ ಯಾವಾಗ ಗೊತ್ತಾ..?

ಸಾರಾಂಶ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದಲ್ಲ ಒಂದು ಡಿಫ್ರೆಂಟ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಂತೆ ದರ್ಶನ್ ತಮ್ಮ ಮುಂಬರುವ ಚಿತ್ರದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದಲ್ಲ ಒಂದು ಡಿಫ್ರೆಂಟ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಅದರಂತೆ ದರ್ಶನ್ ತಮ್ಮ ಮುಂಬರುವ ಚಿತ್ರದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
 
ಸ್ವಾತಂತ್ರ್ಯ ಹೋರಾಟಗಾರ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ನಾಗಿ ಕಾಣಿಸಿಕೊಂಡ ಮೇಲೆ ಈಗ ಕೋಟೆಯ ನಾಡಿನ ವೀರನಾಗಿ ತೆರೆ ಮೇಲೆ ಘರ್ಜಿಸುವುದಕ್ಕೆ ಹೊರಟಿದ್ದಾರಚಿತ್ರದುರ್ಗದ ಪಾಳೆಗಾರ ಗಂಡುಗಲಿ ಮದಕರಿ ನಾಯಕನಾಗಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. 

ಸಾಹಿತಿ ಬಿಎಲ್ ವೇಣು ಅವರೇ ಬರೆದಿರುವ ‘ಗಂಡುಗಲಿ ಮದಕರಿ ನಾಯಕ’ ಕಾದಂಬರಿಯನ್ನು ಆಧರಿಸಿದ ಚಿತ್ರವಿದು.ಹೀಗಾಗಿ ಚಿತ್ರಕ್ಕೆ ‘ಗಂಡುಗಲಿ ಮದಕರಿ ನಾಯಕ’ ಎಂದೇ ಹೆಸರಿಡಲಾಗುತ್ತಿದೆ. 

ವಿಶೇಷ ಅಂದರೆ ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ರಾಜೇಂದ್ರಸಿಂಗ್ ಬಾಬು. ನಿರ್ಮಾಣ ಮಾಡುತ್ತಿರುವುದು ರಾಕ್‌ಲೈನ್ ವೆಂಕಟೇಶ್. ಈಗಾಗಲೇ ಕತೆ ರೆಡಿಯಾಗಿದ್ದು, ಇದಕ್ಕೆ ಚಿತ್ರಕತೆ ಹಾಗೂ ಸಂಭಾಷಣೆ ಬರೆಯುವುದರಲ್ಲಿ ಸಾಹಿತಿ ಬಿ ಎಲ್ ವೇಣು ಅವರು ಬ್ಯುಸಿಯಾಗಿದ್ದಾರೆ.

ಒಂದು ಹಂತದ ಚಿತ್ರಕತೆ ಹಾಗೂ ಡೈಲಾಗ್ ಕೆಲಸ ಮುಗಿಸಿದ್ದು, ನಿರ್ದೇಶಕ ಹಾಗೂ ನಿರ್ಮಾಪಕರು ರೀಡಿಂಗ್ ಕೂಡ ತೆಗೆದುಕೊಂಡಿದ್ದಾರೆ. ಕೆಲವು ತಿದ್ದುಪಡಿಗಳು ನಡೆಯುತ್ತಿವೆ. ಅಂದುಕೊಂಡಂತೆ ಆದರೆ, ಮುಂದಿನ ವರ್ಷ ದರ್ಶನ್ ‘ಗಂಡುಗಲಿ ಮದಕರಿ ನಾಯಕ’ನಾಗಲಿದ್ದಾರೆ. 

ಅಂದರೆ ಈ ಸಿನಿಮಾ ಸೆಟ್ಟೇರುವುದು ಮುಂದಿನ ವರ್ಷ. ಈಗಾಗಲೇ ‘ಒಡೆಯ’ ಚಿತ್ರ ಮಾಡುತ್ತಿದ್ದು, ಇದರ ನಂತರ ಉಮಾಪತಿ ನಿರ್ಮಾಣದ ಚಿತ್ರಕ್ಕೆ ಬರಲಿದ್ದಾರೆ. ಈ ಎರಡು ಸಿನಿಮಾ ಮುಗಿಸುವ ಹೊತ್ತಿಗೆ ದರ್ಶನ್ ಮುಂದೆ ಮದಕರಿ ನಾಯಕ ಬಂದು ನಿಲ್ಲಲಿದ್ದಾರೆ.

ಇತ್ತ ರಾಕ್‌ಲೈನ್ ವೆಂಕಟೇಶ್ ಕೂಡ ಅನೂಪ್ ಭಂಡಾರಿ ಹಾಗೂ ರಾಧಿಕಾ ಪಂಡಿತ್ ಕಾಂಬಿನೇಷನ್‌ನಲ್ಲಿ ‘ಆದಿಲಕ್ಷ್ಮೀ ಪುರಾಣ’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದು ಮುಗಿಸಿದ ಮೇಲೆಯೇ ಬೇರೆಯ ಚಿತ್ರದತ್ತ ಮುಖ ಮಾಡಲಿದ್ದಾರೆ.

ಅದ್ದೂರಿಯಾಗಿ ಬಹು ಕೋಟಿ ವೆಚ್ಚದಲ್ಲಿ ಸೆಟ್ಟೇರಲಿರುವ ಈ ಚಿತ್ರ ಆಗುವುದಕ್ಕೆ ಮೂಲ ಕಾರಣ ಹಿರಿಯ ನಟ ದೊಡ್ಡಣ್ಣ ಅವರಂತೆ. ಅವರೇ ಇಂಥದ್ದೊಂದು ಕತೆಯನ್ನು ಸಿನಿಮಾ ಮಾಡಿಸುವುದಕ್ಕೆ
ರಾಕ್‌ಲೈನ್ ವೆಂಕಟೇಶ್ ಅವರಿಗೆ ಸಲಹೆ ನೀಡಿದ್ದು, ಈ ಚಿತ್ರದ ನಿರ್ದೇಶನದ ಸಾರಥ್ಯವನ್ನು ರಾಜೇಂದ್ರಸಿಂಗ್ ಬಾಬು ಅವರ ಹೆಗಲಿಗೆ ವಹಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನ್ನ ಶಿಷ್ಯನೆಂದು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸಿಲ್ಲ! ಕಿಚ್ಚ ಸುದೀಪ್ ಈ ಮಾತು ಹೇಳಿದ್ಯಾರಿಗೆ ಗೊತ್ತಾಯ್ತ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?