ಶ್ರೀದೇವಿ ಕೊನೆ ಆಸೆ ಈಡೇರಿಸುತ್ತಿದ್ದಾರೆ ಪತಿ ಬೋನಿ!

Published : Jan 29, 2019, 04:31 PM ISTUpdated : Jan 29, 2019, 04:46 PM IST
ಶ್ರೀದೇವಿ ಕೊನೆ ಆಸೆ ಈಡೇರಿಸುತ್ತಿದ್ದಾರೆ ಪತಿ ಬೋನಿ!

ಸಾರಾಂಶ

2018ರಲ್ಲಿ ನಮ್ಮನ್ನಗಲಿದ ಎವರ್‌ಗ್ರೀನ್ ನಟಿ ಶ್ರೀದೇವಿಯ ಕೊನೆಯ ಕನಸೊಂದು ಹಾಗೆ ಉಳಿದಿತ್ತು. ಅದನ್ನು 2019ರಲ್ಲಿ ನನಸು ಮಾಡುತ್ತಿದ್ದಾರೆ ಪತಿ ಬೋನಿ ಕಪೂರ್.

ಬೋನಿ ಕಪೂರ್ ಶ್ರೀದೇವಿಗೆ ಕೊಟ್ಟ ಮಾತೊಂದನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಅದೇನು ಗೊತ್ತಾ?

ಬೋನಿ ಕಪೂರ್‌ ತಮಿಳು ನಟ ಅಜಿತ್ ಕುಮಾರ್ ಜೊತೆ ಪ್ರಾಜೆಕ್ಟ್‌ವೊಂದನ್ನು ಮಾಡಬೇಕೆಂದು ಶ್ರೀದೇವಿ ಕೇಳಿಕೊಂಡಿದ್ದರಂತೆ. ಆದರೆ, ಕೈಯಲ್ಲಿ ಯಾವ ಕಥೆಯೂ ಇಲ್ಲದ ಕಾರಣ ಮೌನಕ್ಕೆ ಶರಣಾಗಿದ್ದರು. ಶ್ರೀದೇವಿ ಆಶಯವನ್ನು ಈಡೇರಿಸಲು ಅಜಿತ್ ತಾವೇ ಪ್ಲಾನ್‌ವೊಂದನ್ನು ಹಿಡಿದು, ಮುಂದೆ ಬಂದಿದ್ದಾರೆ. ಅದುವೇ ಬಾಲಿವುಡ್ ಖ್ಯಾತ ನಟ ಅಮಿತಾಬಚ್ಚನ್ ಅಭಿನಯದ ಚಿತ್ರ ಪಿಂಕ್ ತಮಿಳಿನಲ್ಲಿ ರಿಮೇಕ್ ಮಾಡುವುದು. ಇದನ್ನು ಕೇಳಿದಾಕ್ಷಣ ಓಕೆ ಅಂದಿದ್ದರು ಎವರ್‌ಗ್ರೀನ್ ನಟಿ ಶ್ರೀದೇವಿ. ಆದರೆ, ಕೆಲವು ದಿನಗಳ ನಂತರ ನಮ್ಮನ್ನೆಲ್ಲ ಅಗಲಿದರು. ಆ ಕಾರಣದಿಂದ ಕನಸು ಹಾಗೆಯೇ ಉಳಿದಿತ್ತು.

ತಮಿಳಿನ ಅಜಿತ್‌ಗೆ u-Turn ಹೊಡೆದ ಸ್ಯಾಂಡಲ್‌ವುಡ್ ನಟಿ!

ಇದೀಗ ಶ್ರೀದೇವಿ ಓಕೆ ಎಂದಿದ್ದ ಪ್ರಾಜೆಕ್ಟ್‌ ಅನ್ನು ಬೋನಿ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಈ ಸಂತೋಷದ ವಿಚಾರವನ್ನು ಬೋನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ತಮಿಳು ಜನತೆಗೆ ವಿದ್ಯಾ ಬಾಲನ್ ಅವರನ್ನು ಪಿಂಕ್ ಚಿತ್ರದ ಮೂಲಕ ನಿಮ್ಮೆಲ್ಲರ ಮುಂದೆ ತರಲು ಬಯಸುತ್ತೇನೆ. ಇದರ ಜೊತೆ ಕನ್ನಡ ನಟಿ ಶ್ರದ್ಧಾ ಶ್ರೀನಾಥ್ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ರಾಜೇಂದ್ರ ಪಾಂಡೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ,’ ಎಂದು ತಿಳಿಸಿದ್ದಾರೆ.

ತಮಿಳಿನ ‘English Vinglish’ ಚಿತ್ರದಲ್ಲಿ ಶ್ರೀದೇವಿಯೊಂದಿಗೆ ಅಜಿತ್ ನಟಿಸಿದ್ದರು. ಆಗಲೇ ಅಜಿತ್ ತಮ್ಮ ಹೋಮ್ ಪ್ರೊಡಕ್ಷನ್‌ನಲ್ಲಿ ಚಿತ್ರ ಮಾಡಲು ಕೇಳಿಕೊಂಡಿದ್ದರಂತೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!