ಎಸ್. ಮಹೇಂದರ್ ವಿರುದ್ಧ ಬಿ.ಸಿ.ಪಾಟೀಲ್ ಗರಂಆಗಿದ್ದು ಏಕೆ ?

By Internet DeskFirst Published Sep 24, 2016, 3:20 PM IST
Highlights

ಬೆಂಗಳೂರು(ಸೆ.24): ಸಿನಿಮಾದ ಟೈಟಲ್ ವಿವಾದಕ್ಕೆ ಸಿಲುಕಿದೆ. ಟೈಟಲ್​​ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದೇಶನ ಎಸ್.ಮಹೇಂದರ ವಿರುದ್ದ ನಟ ಬಿ.ಸಿ ಪಾಟೀಲ್ ಗರಂ ಆಗಿದ್ದಾರೆ. ಒನ್ಸ್ ಮೋರ್ ಕೌರವ ಸಿನಿಮಾದ ಟೈಟಲನ್ನು ನಾನು ರಿಜಿಸ್ಟರ್ ಮಾಡಿಸಿದ್ದೇನೆ. ಈ ಸಿನಿಮಾ ಮಾಡುವುದಕ್ಕೆ ಎಸ್. ಮಹೇಂದರ್‌ಗೆ ಹಣವನ್ನು ಕೊಟ್ಟಿದ್ದೇನೆ. ಆದರೆ ಇವತ್ತು ನನ್ನನ್ನ ಬಿಟ್ಟು ಸಿನಿಮಾ ಮಾಡುತ್ತಿರುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಹಾವೇರಿಯ ಹಿರೇಕೆರೂರಿನಲ್ಲಿ ಮಾತನಾಡಿದ ಪಾಟೀಲ್​​​, ಕರ್ನಾಟಕಕ್ಕೆ ಒಬ್ಬನೆ ಕೌರವ, ಮೀಸೆ ಹಚ್ಚಿಕೊಂಡವರೆಲ್ಲ ಕೌರವ ಆಗಲು ಸಾಧ್ಯವಿಲ್ಲ. ಅದು ಮಹೇಂದರ ಅವರ ದಡ್ಡತನ ಅಂತ ಪಾಟೀಲ್​ ಗುಡುಗಿದ್ದಾರೆ.

click me!