
1. ಈ ಚಿತ್ರದ ಟೈಟಲ್ ಫಿಕ್ಸ್ ಆಗಿದೆ. ‘ಕೃಷ್ಣ ಟಾಕೀಸ್’ ಎಂಬ ಹೆಸರು ಇಡಲಾಗಿದೆ. ಅಜಯ್ ರಾವ್ ನಟನೆಯ ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ ಚಿತ್ರಗಳ ಯಶಸ್ಸು ‘ಕೃಷ್ಣ ಟಾಕೀಸ್’ ಎಂಬ ಹೆಸರಿಡಲು ಮುಖ್ಯ ಕಾರಣ. ಈ ಕಾರಣದಿಂದಲೇ ಅಜಯ್ ರಾವ್ ತಮ್ಮ ಹೆಸರನ್ನು ಕೃಷ್ಣ ಅಜಯ್ ಅಂತಲೇ ಬದಲಾಯಿಸಿಕೊಂಡಿದ್ದಾರೆ.
2. ‘ಕೃಷ್ಣ ಟಾಕೀಸ್’ಗೆ ಇಬ್ಬರು ನಾಯಕಿಯರು. ಈಗಾಗಲೇ ಅಪೂರ್ವ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇವರ ಜತೆಗೆ ಸಿಂಧು ಲೋಕನಾಥ್ ಚಿತ್ರತಂಡ ಸೇರಿಕೊಂಡಿದ್ದಾರೆ. ಮದುವೆ ನಂತರ ಸಿನಿಮಾಗಳಿಗೆ ಅಪರೂಪ ಆಗಿದ್ದ ಸಿಂಧು ಈ ಚಿತ್ರದ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ.
3. ಈ ಚಿತ್ರದ ನಿರ್ದೇಶಕರು ಹೆಸರು ಬೇರೆ ಬದಲಾಯಿಸಿಕೊಂಡಿದ್ದಾರೆ. ಆನಂದ್ ಪ್ರಿಯಾ ಈಗ ವಿಜಯಾನಂದ್ ಆಗಿದ್ದಾರೆ.
ನಿರ್ಮಾಪಕರು ರೆಡಿ ಇದ್ರೂ ಈ ತಾರೆಯರಿಗೆ ಪುರುಸೊತ್ತಿಲ್ಲ!
ಈ ಚಿತ್ರವನ್ನು ಎಎಚ್ ಗೋವಿಂದುರಾಜು ನಿರ್ಮಾಣ ಮಾಡುತ್ತಿದ್ದಾರೆ. ಮೇ 9ರಿಂದ ಆರಂಭವಾಗಲಿರುವ ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ‘ರಂಗಿತರಂಗ’ ಖ್ಯಾತಿಯ ಸಿನಿಮಾಟೋಗ್ರಾಫರ್ ವಿಲಿಯಮ್ ಡೇವಿಡ್, ಕೆಜಿಎಫ್ ಚಿತ್ರದ ಸಂಕಲನಕಾರ ಶ್ರೀಕಾಂತ್ ಅವರು ಈ ಚಿತ್ರದ ತಾಂತ್ರಿಕ ಸದಸ್ಯರು.
ಚಿಕ್ಕಣ್ಣ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡು, ಶೋಭರಾಜ್, ಮಂಡ್ಯ ರಮೇಶ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ಈ ‘ಕೃಷ್ಣ ಟಾಕೀಸ್’ ಎನ್ನುವ ಹೆಸರಿಗೆ ‘ಬಾಲ್ಕನಿ ಎಫ್ 13’ ಎನ್ನುವ ಟ್ಯಾಗ್ ಲೈನ್ ಕೂಡ ಕೊಡಲಾಗಿದೆ. ಶಿವಮೊಗ್ಗ, ಬೆಂಗಳೂರು ಸುತ್ತ ಚಿತ್ರೀಕರಣ ನಡೆಯಲಿದ್ದು, ಜಯಂತ್ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ಅವರು ಹಾಡುಗಳಿಗೆ ಸಾಹಿತ್ಯ ನೀಡಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.