
ದಿವಂಗತ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಪವರ್ ಸ್ಟಾರ್ ಒಮ್ಮೆ ಮನೆಗೆ ಬರಬೇಕೆಂದು ಮನವಿ ಮಾಡಿಕೊಂಡಿದರು. 'ಯುವರತ್ನ' ಶೂಟಿಂಗ್ಗೆಂದು ಮೈಸೂರಿನಲ್ಲಿ ಹಲವಾರು ದಿನಗಳಿಂದ ವಾಸವಿರುವ ಪುನೀತ್, ಅವರ ಮನೆಗೆ ತೆರಳಿ ಅಶ್ವಥ್ ಪತ್ನಿ ಶಾರದಮ್ಮ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಉಪ್ಪಿಟ್ಟು, ಕೇಸರಿಬಾತ್ ಸವಿದು ಅರ್ಧ ಗಂಟೆಗಳ ಕಾಲ ಮನೆಯವರೊಂದಿಗೆ ಸಮಯ ಕಳೆದಿದ್ದಾರೆ.
ಔಟ್ಡೋರ್ ಜಿಮ್ ಉದ್ಘಾಟಿಸಿದ ಪವರ್ ಸ್ಟಾರ್!
ಹಿರಿಯ ನಟ ಅಶ್ವಥ್ ಅವರು ಬದುಕಿದ್ದಾಗ ಡಾ. ರಾಜ್ಕುಮಾರ್ ಮೈಸೂರಿಗೆ ತೆರಳಿದಾಗಲೆಲ್ಲಾ ತಪ್ಪದೆ ಇವರ ಮನೆಗೆ ಭೇಟಿ ನೀಡುತ್ತಿದ್ದರಂತೆ. ಈ ಅಮೂಲ್ಯ ಕ್ಷಣಗಳ ಫೋಟೋಗಳನ್ನು ಶಂಕರ್ ಅಶ್ವಥ್ ತಮ್ಮ ಫೇಸ್ಬುಕ್ ಖಾತೆಯಲ್ಲಿ 'ನಾನು ಕಂಡ ಸತ್ಯ, ತಂದೆ ಮಹಾರಾಜ ಮಗ ರಾಜಕುಮಾರ ಎಂದು' ಬರೆದು ಶೇರ್ ಮಾಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.