12 ಮಾರ್ಚ್ 2022, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೇಷಕ್ಕೆ ಹೆಚ್ಚಲಿವೆ ನಕಾರಾತ್ಮಕ ಯೋಚನೆಗಳು..
ಮೇಷ(Aries): ನಕಾರಾತ್ಮಕ ಯೋಚನೆಗಳು ಹೆಚ್ಚಬಹುದು. ಸಂಗಾತಿ ಬಗೆಗೆ ಅನುಮಾನ ಮೂಡುವುದು. ಹೆಚ್ಚು ಎಳೆಯದೆ ಮಾತುಕತೆಯಲ್ಲಿ ನಿಮ್ಮ ಗೊಂದಲಗಳನ್ನು ತಕ್ಷಣ ಪರಿಹರಿಸಿಕೊಳ್ಳಿ. ನಿದ್ರಾಹೀನತೆಯಿಂದ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ. ಶನಿ ಸ್ಮರಣೆ ಮಾಡಿ.
ವೃಷಭ(Taurus): ನಿಮ್ಮ ಕೆಲಸ ಕಾರ್ಯದಲ್ಲಿ ಅದರಲ್ಲೂ ಸ್ವಂತ ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಲಾಭ ಪಡೆಯುವಿರಿ. ಮಕ್ಕಳ ಓದಿನ ಬಗ್ಗೆ ಚಿಂತೆ ಎದುರಾಗುವುದು. ರಕ್ತದೊತ್ತಡ, ತಲೆನೋವು ಇತ್ಯಾದಿ ಬಾಧೆ ಕಾಡಬಹುದು. ಪ್ರೇಮಿಗಳ ನಡುವೆ ಬಿಕ್ಕಟ್ಟು ಹೆಚ್ಚಲಿದೆ. ಕಪ್ಪು ಎಳ್ಳು ದಾನ ಮಾಡಿ.
ಮಿಥುನ(Gemini): ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮನೆ ಹಿರಿಯರಿಂದ ಕಿರಿಕಿರಿ ಹೆಚ್ಚಿ ಬೇಸತ್ತು ಹೋಗುವಿರಿ. ಬಿಪಿ, ಸಕ್ಕರೆ ಕಾಯಿಲೆಯಂಥ ಸಮಸ್ಯೆಗಳು ಉಲ್ಬಣವಾಗಿ ಚಿಂತೆಯಾಗಬಹುದು. ತಪಾಸಣೆ ಮಾಡಿಸಿ. ಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವಿರಿ. ಅಶ್ವತ್ಥ ಕಟ್ಟೆಗೆ ಎಳ್ಳೆಣ್ಣೆಯ ದೀಪ ಹಚ್ಚಿ.
ಕಟಕ(Cancer): ಕೆಲಸದಿಂದ ಕೊಂಚ ವಿಶ್ರಾಂತಿ ಸಿಗಲಿದೆ. ಮಕ್ಕಳಿಗೆ ಹೆಚ್ಚು ಸಮಯ ವ್ಯಯಿಸುವಿರಿ. ಕುಟುಂಬದೊಂದಿಗೆ ತಿರುಗಾಟ ಸಾಧ್ಯತೆಗಳಿವೆ. ಸುಸ್ತು ಆವರಿಸಿದರೂ ಸಂತಸ ಮನ ತುಂಬಲಿದೆ. ಆಪ್ತರೊಂದಿಗೆ ಮಾತಾಡುವಾಗ ಮನಸ್ಸಿಗೆ ನೋವಾಗದಂತೆ ಎಚ್ಚರ ವಹಿಸಿ. ಆಂಜನೇಯ ಸ್ಮರಣೆ ಮಾಡಿ.
Vastu Tips : ಹೀಗೆ ಮಾಡಿದ್ರೆ ವ್ಯವಹಾರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ
ಸಿಂಹ(Leo): ಚಿನ್ನಾಭರಣ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಲ್ಲಿ ಸಾಕಷ್ಟು ಶುಭ ಫಲಗಳಿವೆ. ಭೂಮಿಯ ವ್ಯವಹಾರದಲ್ಲಿ ಅಭಿವೃದ್ಧಿ ಆಗುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಪ್ರೇಮ ವ್ಯವಹಾರದಲ್ಲಿ ಮನಸ್ಸಿಗೆ ನೋವಾಗಬಹುದು. ಶಿವ ಶತ ನಾಮಾವಳಿ ಹೇಳಿಕೊಳ್ಳಿ.
ಕನ್ಯಾ(Virgo): ಸ್ವಂತ ಉದ್ಯೋಗದಲ್ಲಿರುವವರು ಅಭಿವೃದ್ಧಿ ಪಡೆಯುವಿರಿ. ಖಾಸಗಿ ಉದ್ಯೋಗಿಗಳಿಗೆ ಒತ್ತಡ ಹೆಚ್ಚುವುದು. ತಂದೆ ತಾಯಿಯ ಮನಸ್ಸಿಗೆ ನೋವುಂಟು ಮಾಡಲು ಹೋಗಬೇಡಿ. ಒಡಹುಟ್ಟಿದವರೊಂದಿಗಿನ ಜಗಳಗಳಿಂದಾಗಿ ನಿಮ್ಮ ಕುಟುಂಬ ಜೀವನದಲ್ಲಿ ಅಸ್ಥಿರತೆ ಉಂಟಾಗಬಹುದು. ದೇವಾಲಯಕ್ಕೆ ಭೇಟಿ ನೀಡಿ ನವಗ್ರಹಕ್ಕೆ ಸುತ್ತು ಬನ್ನಿ.
ತುಲಾ(Libra): ಪ್ರೇಮ ಸಂಬಂಧಗಳು ನಿಮ್ಮ ಜೀವನೋತ್ಸಾಹ ಹೆಚ್ಚಿಸಲಿವೆ. ಉದ್ಯೋಗ ತೊರೆಯುವ ಯೋಚನೆ ಇರುವವರು ಹೊಸ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಇಂದು ಸೂಕ್ತ ದಿನವಾಗಿದೆ. ಮಕ್ಕಳಿಗೆ ಉತ್ತಮ ಪ್ರತಿಭಾನ್ವೇಷಣೆ ಅವಕಾಶಗಳು ಸಿಗುವುವು. ಆತ್ಮವಿಶ್ವಾಸ ಇರಲಿದೆ. ಕಪ್ಪು ವಸ್ತ್ರ ದಾನ ಮಾಡಿ.
Bijli Mahadev temple: 12 ವರ್ಷಗಳಿಗೊಮ್ಮೆ ಸಿಡಿಲಿಗೆ ಒಡೆವ ಶಿವಲಿಂಗ!
ವೃಶ್ಚಿಕ(Scorpio): ಎಲ್ಲರೂ ನಿಮ್ಮ ಮಾತಿನಂತೆ ನಡೆಯಬೇಕು ಎಂಬ ಪ್ರವೃತ್ತಿಯಿಂದ ಅಸಹನೆ ಹೆಚ್ಚಬಹುದು. ಸಂಗಾತಿಯೊಂದಿಗೆ ಮೌನ ಯುದ್ಧ ನಡೆಯಬಹುದು. ಭೂಮಿಗೆ ಸಂಬಂಧಿಸಿದ ಕೆಲಸ ಮಾಡುವವರಿಗೆ ಉತ್ತಮ ಫಲಗಳಿವೆ. ಮನೆದೇವರಿಗೆ ತುಪ್ಪದ ದೀಪ ಹಚ್ಚಿ.
ಧನುಸ್ಸು(Sagittarius): ಎಷ್ಟೇ ನಂಬಿಕೆಯ ಜನರಾದರೂ ಕುಟುಂಬದ ಗುಟ್ಟುಗಳನ್ನು ಬಿಟ್ಟು ಕೊಡಬೇಡಿ. ಮನೆ ಹಿರಿಯರ ಚುಚ್ಚು ಮಾತುಗಳಿಗೆ ಅಲಕ್ಷ್ಯವೇ ಉತ್ತಮ ಪ್ರತಿಕ್ರಿಯೆ. ಲೇವಾದೇವಿ ವ್ಯವಹಾರಗಳಲ್ಲಿ ಲಾಭವಿದೆ. ಅಕ್ಕಪಕ್ಕದವರೊಡನೆ ಜಗಳಕ್ಕೆ ಹೋಗಬೇಡಿ. ನಯವಾದ ಮಾತಿನಲ್ಲಿ ಹೇಳಬೇಕಾದ ವಿಚಾರ ತಿಳಿಸಿ. ಹನುಮಾನ್ ಚಾಳೀಸ್ ಹೇಳಿಕೊಳ್ಳಿ.
ಮಕರ(Capricorn): ಹೆಚ್ಚು ನಗುತ್ತಾ ಕಾಲ ಕಳೆಯುವಿರಿ. ಕಟ್ಟಡ ನಿರ್ಮಾಣ ಕೆಲಸಗಾರರಿಗೆ ಲಾಭ, ಸಂಗಾತಿಯೊಂದಿಗೆ ಅತ್ಯುತ್ತಮ ಸಮಯ ಕಳೆಯಲಿರುವಿರಿ. ಹಳೆ ಸ್ನೇಹಿತರೊಂದಿಗೆ ಮಾತಾಡಿ ಸಂತಸ. ಹೊಸ ವಸ್ತುಗಳ ಖರೀದಿ ಮಾಡಲಿರುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ. ತಿಲ ಹಾಗೂ ಕ್ಷೀರ ದಾನ ಮಾಡಿ.
ಕುಂಭ(Aquarius): ಕೆಲಸದಲ್ಲಿ ಏಕಾಗ್ರತೆ ನಿಲ್ಲದೆ ಕಿರಿಕಿರಿಯಾಗಲಿದೆ. ಕಂಡ ಕನಸುಗಳು ನನಸಾಗುವ ಹಾದಿಯಲ್ಲಿ ವಿಘ್ನಗಳೆದುರಾಗಿ ಮನಸ್ಸಿಗೆ ಕಸಿವಿಸಿಯಾಗಲಿದೆ. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ನಿಲುವಿನಿಂದ ಮುಂದುವರಿಯಿರಿ. ಆಸ್ತಿ ಖರೀದಿ ವಿಷಯ ಮುಂದೂಡಿಕೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ.
ಮೀನ(Pisces): ತ್ವಚೆಯ ಸಮಸ್ಯೆಗಳು ಕಾಡಬಹುದು. ನೆಂಟರಿಷ್ಟರ ನಡೆಗಳು ಮನಸ್ಸಿನಲ್ಲಿ ಕ್ಲೇಶ ಉಂಟು ಮಾಡಬಹುದು. ಬೇಡದ ಅತಿಥಿಯ ಆಗಮನವಾಗಬಹುದು. ಮನಸ್ಸು ದುರ್ಬಲವಾಗುವುದು. ಯಾವುದೇ ಪ್ರಮುಖ ನಿರ್ಧಾರಗಳನ್ನು ಇಂದು ತೆಗೆದುಕೊಳ್ಳಬೇಡಿ. ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ.