Daily Horoscope: ಮಿಥುನ ರಾಶಿಗೆ ವ್ಯವಹಾರ ನಷ್ಟ, ವೃಶ್ಚಿಕಕ್ಕೆ ಹೆಚ್ಚುವ ಹೊರೆ

By Suvarna NewsFirst Published Jan 12, 2022, 5:00 AM IST
Highlights

12 ಜನವರಿ 2022, ಬುಧವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮಕರ ರಾಶಿಯ ನಿರುದ್ಯೋಗಿಗಳಿಗೆ ಸ್ನೇಹಿತರ ಸಹಕಾರದಿಂದ ಅವಕಾಶ

ಮೇಷ(Aries): ಕಚೇರಿಯಿಂದ ಉಡುಗೊರೆಗಳು ದೊರೆಯಬಹುದು. ಮನೆಯ ಕೆಲಸಗಳು ಸರಾಗ. ಕೋಪವನ್ನು ನಿಯಂತ್ರಿಸಿಕೊಳ್ಳದಿದ್ದರೆ ಕಿರಿಕಿರಿ ಮೈ ಮೇಲೆಳೆದುಕೊಳ್ಳುವಿರಿ. ಹೆತ್ತವರೊಂದಿಗೆ ವಾದ ಮಾಡಲು ಹೋಗದಿರಿ. ಅವರ ಆರೋಗ್ಯದ ಬಗ್ಗೆ ಕಾಳಜಿ ಮಾಡಿ. ಗಣಪತಿ ಅಷ್ಟೋತ್ತರ ಹೇಳಿಕೊಳ್ಳಿ. 

ವೃಷಭ(Taurus): ವೈವಾಹಿಕ ಜೀವನದಲ್ಲಿ ಧನಾತ್ಮಕ ಬದಲಾವಣೆಗಳಾಗಲಿವೆ. ಆಮದು ರಫ್ತಿನ ಉದ್ಯಮದಲ್ಲಿರುವವರಿಗೆ ಅನಿರೀಕ್ಷಿತ ಲಾಭ. ಬಂಗಾರ, ಬೆಳ್ಳಿ ಸೇರಿದಂತೆ ಆಭರಣ ವ್ಯಾಪಾರಗಾರರಿಗೆ ಭರಪೂರ ಧನಲಾಭ. ಮಕ್ಕಳ ಪ್ರಗತಿ ಸಮಾಧಾನ ತರಲಿದೆ. ಮನೆ ದೇವರನ್ನು ಪ್ರಾರ್ಥಿಸಿ. 

Latest Videos

ಮಿಥುನ(Gemini): ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕದಿದ್ದರೆ ಪಶ್ಚಾತ್ತಾಪ ಪಡಬೇಕಾಗಿ ಬರಲಿದೆ. ಅಲಂಕಾರಿಕ ವಸ್ತುಗಳು, ಕೃಷಿ, ಪಶು, ಹೈನು ವ್ಯವಹಾರಗಳಿಂದ ಅಧಿಕ ಲಾಭ. ಲೇವಾದೇವಿ ವ್ಯವಹಾರಗಳಲ್ಲಿ ನಷ್ಟ. ಕೃಷ್ಣನನ್ನು ಪ್ರಾರ್ಥಿಸಿ. ಭಗವದ್ಗೀತೆ ಶ್ರವಣ ಮಾಡಿ. 

ಕಟಕ(Cancer): ಉದ್ಯೋಗದಲ್ಲಿ ಎಷ್ಟೇ ಬೇಗ ಕೆಲಸಗಳನ್ನು ಪೂರೈಸಬೇಕೆಂದರೂ ಸಣ್ಣ ಪುಟ್ಟ ತಪ್ಪುಗಳು, ಅಡೆತಡೆಗಳು ಎದುರಾಗಿ ತಡವಾಗಬಹುದು. ಕುಟುಂಬವರ್ಗದವರಿಂದ ಕಾರ್ಯವೈಖರಿಗೆ ಟೀಕೆಗಳು ಬರಬಹುದು. ಅವನ್ನು ಪಾಸಿಟಿವ್ ಮನಸ್ಥಿತಿಯಿಂದ ತೆಗೆದುಕೊಳ್ಳಿ. ಮನೆಯ ವಿಚಾರದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಗಣಪತಿಗೆ ದರ್ಬೆ ಅರ್ಪಿಸಿ. 

Spirituality: ಬ್ರಹ್ಮ, ವಿಷ್ಣು, ಶಿವನ ಆವಾಸಸ್ಥಾನ ಅಶ್ವತ್ಥ ಮರ

ಸಿಂಹ(Leo): ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಹಲವಾರು ಅವಕಾಶಗಳು ಕಂಡುಬರುತ್ತದೆ. ಕಚೇರಿಯಲ್ಲಿ ನಿಮ್ಮ ಹಿರಿಯರು ಹೇಳುವ ಸಲಹೆಗಳನ್ನು ಪಾಲಿಸುವುದರಿಂದ ಲಾಭವಾಗಲಿದೆ. ಮನೆ ನವೀಕರಣ ಕಾರ್ಯಗಳು ನಡೆಯಲಿವೆ. ಆಸ್ತಿ ವ್ಯಾಜ್ಯಗಳು ಅಂತಿಮ ಹಂತ ತಲುಪಲಿವೆ. ಹಸಿದವರಿಗೆ ಹೊಟ್ಟೆ ತುಂಬಿಸಿ. 

ಕನ್ಯಾ(Virgo): ಹಲವು ಶುಭ ಕಾರ್ಯಗಳಿಗೆ ಧನ ವಿನಿಯೋಗ. ಮನೆ ಹಿರಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಆಶೀರ್ವಾದ ಬಲ ಸಿಗಲಿದೆ. ಉದ್ಯೋಗ ರಂಗದಲ್ಲಿ ಬದಲಿ ಅವಕಾಶ ಒದಗಿ ಬರಲಿವೆ.ದೂರ ಸಂಚಾರದಿಂದ ಕಾರ್ಯಾನುಕೂಲ. ದೇವರ ಸನ್ನಿಧಿಗೆ ಕಾಣಿಕೆ ಹಾಕಿ.

ತುಲಾ(Libra): ಆರೋಗ್ಯದ ವಿಚಾರದಲ್ಲಿ ಅಸಡ್ಡೆ ಬೇಡ. ಧೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕಂಗಾಲಾಗಿಸಲಿವೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಿದ್ಧಿಸಲಿದೆ. ಕೂಡಿಟ್ಟ ಹಣದ ಸದುಪಯೋಗವಾಗಿ ಬಂಧುಮಿತ್ರರಿಂದ ಪ್ರಶಂಸೆಗೊಳಗಾಗುವಿರಿ. ವಿದ್ಯಾರ್ಥಿಗಳಿಗೆ ಶಿಕ್ಷಕರ ನೆರವು ದೊರಕಿ ಜ್ಞಾನ ಹೆಚ್ಚುವುದು. ಗೋ ಗ್ರಾಸ ನೀಡಿ.

Astrology Tips: ರೊಮ್ಯಾಂಟಿಕ್ ಲೈಫ್‌‌‌‌‌‌ಗಾಗಿ ಮಹಿಳೆಯರೇನು ಮಾಡಬೇಕು?

ವೃಶ್ಚಿಕ(Scorpio): ಅಕೌಂಟಿಂಗ್, ಮಾರ್ಕೆಟಿಂಗ್ ವೃತ್ತಿಯಲ್ಲಿರುವವರಿಗೆ ಕೆಲಸ ವಿಪರೀತವಾಗಿ ಸುಸ್ತು, ತಲೆನೋವಿನಂಥ ಕಿರಿಕಿರಿಗಳು ಬಾಧಿಸಬಹುದು. ಅವ್ಯವಹಾರಗಳು, ಕಳ್ಳ ನಡೆಗಳು, ಅಪರಾಧಗಳು ಬೆಳಕಿಗೆ ಬರಬಹುದು. ಸರ್ಕಾರಿ ನೌಕರರಿಗೆ ದಣಿವು. ಪೋಲೀಸ್ ವೃತ್ತಿಯಲ್ಲಿರುವವರು ನ್ಯಾಯಯುತ ನಡೆಯಿಂದ ಪ್ರಶಂಸೆಗೊಳಗಾಗುವರು. ಶನಿ ದೇವರನ್ನು ಪ್ರಾರ್ಥಿಸಿ. 

ಧನುಸ್ಸು(Sagittarius): ವೃತ್ತಿರಂಗದಲ್ಲಿ ವಿವೇಚನೆಯಿಂದ ನಡೆಯಿರಿ. ತಾಳಿದವನು ಬಾಳಿಯಾನು ಎಂಬ ಮಾತನ್ನು ಆಗಾಗ ಹೇಳಿಕೊಂಡು ಮುನ್ನಡೆಯುವುದರಿಂದ ಯಶ ಸಿಗಲಿದೆ. ಸಾಮಾಜಿಕವಾಗಿ ಗೌರವ ಪ್ರಾಪ್ತಿಯಾಗಲಿದೆ. ಕೌಟುಂಬಿಕವಾಗಿ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇಡುವುದು ಅಗತ್ಯ. ಗಣಪತಿ ದೇವಾಲಯಕ್ಕೆ ಭೇಟಿ ನೀಡಿ. 

ಮಕರ(Capricorn): ಹೊಸ ವ್ಯವಹಾರ ಸಂಬಂಧ ದಾಖಲೆಗಳ ವಿಷಯದಲ್ಲಿ ತೊಡಗುವಿರಿ. ನಿರುದ್ಯೋಗಿಗಳಿಗೆ ಸ್ನೇಹಿತರ ಸಹಾಯದಿಂದ ಅವಕಾಶಗಳು ಬರಬಹುದು. ದುಡುಕಿನ ನಿರ್ಧಾರ ಬೇಡ. ಮಕ್ಕಳು ನಿಮ್ಮಿಂದ ಮುಖ್ಯ ಸಂಗತಿ ಮುಚ್ಚಿಡುತ್ತಿರುವುದು ತಿಳಿದು ಮನಸ್ಸು ವ್ಯಾಕುಲಗೊಳ್ಳಬಹುದು. ಪ್ರಬುದ್ಧತೆಯಿಂದ ವರ್ತಿಸಿ. ಶಿವ ಪಾರ್ವತಿಯನ್ನು ಪ್ರಾರ್ಥಿಸಿ. 

ಕುಂಭ(Aquarius): ನೀವೇನೇ ಯೋಚನೆ ಮಾಡಿದರೂ ಅದು ತಾನಾಗಿಯೇ ಸಿದ್ದಿಸುವಂಥ ಆತ್ಮಶಕ್ತಿ ಇರಲಿದೆ. ಅದೃಷ್ಟಪರೀಕ್ಷೆಗಿದು ಸುದಿನ. ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಷೇರು  ಮಾರುಕಟ್ಟೆ ವ್ಯವಹಾರದಲ್ಲಿ ಲಾಭದಾಯಕ ಆದಾಯವಿದ್ದರೂ ದುಡುಕದೇ ಮುಂದುವರಿಯಿರಿ. ಬಡವರಿಗೆ ದವಸ ದಾನ ಮಾಡಿ. 

ಮೀನ(Pisces): ದಿನದ ಆರಂಭದಲ್ಲಿ ಧನ ನಷ್ಟವಾಗಿ ಮನಸ್ಸು ಹಾಳಾಗುವುದು. ಚಿಂತಿಸಿ ಫಲವಿಲ್ಲ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಏಕಾಗ್ರತೆ ಸಾಧಿಸಿ ಪರಿಶ್ರಮ ಹಾಕಿದರೆ ದಿನಾಂತ್ಯಕ್ಕೆ ನಷ್ಟ ತುಂಬಿಕೊಳ್ಳಬಹುದು. ಕುಟುಂಬ ಜೀವನ ಚೆನ್ನಾಗಿರಲಿದೆ. ದುರ್ಗಾ ಅಷ್ಟೋತ್ತರ ಪಠಿಸಿ. 
 

click me!