Daily Horoscope: ಸಿಂಹ ರಾಶಿಗೆ ಕಾದಿದೆ ನಿರಾಸೆ, ನಿಮ್ಮ ರಾಶಿಫಲ ಏನಿದೆ ನೋಡಿ..

By Suvarna NewsFirst Published Dec 29, 2021, 5:02 AM IST
Highlights

29 ಡಿಸೆಂಬರ್ 2021, ಬುಧವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮಿಥುನಕ್ಕೆ ದಿನ ನುಂಗುವ ಉದಾಸೀನ

ಮೇಷ(Aries): ಉದ್ಯೋಗ ರಂಗದಲ್ಲಿ ದೊಡ್ಡ ಯೋಜನೆಗಳನ್ನು ಮುಗಿಸಿ ಸೈ ಎನಿಸಿಕೊಳ್ಳುವಿರಿ. ಮನೆಯಲ್ಲಿ ಮಕ್ಕಳಿಂದ ಸಂತೋಷ. ಸಂತಾನ ನಿರೀಕ್ಷೆಯಲ್ಲಿರುವ ದಂಪತಿಗೆ ಸಿಹಿಸುದ್ದಿ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಕೂಡಿ ಬರುವುವು. ಗಣಪತಿಗೆ ದರ್ಬೆ ಅರ್ಪಿಸಿ. 

ವೃಷಭ(Taurus): ಗೃಹದಲ್ಲಿ ಸೌಖ್ಯ ಇರಲಿದೆ. ಹೊರಗೆ ಸುತ್ತಾಟದಿಂದ ಮನಸ್ಸಿಗೆ ಪ್ರಫುಲ್ಲತೆ. ಸ್ನೇಹಿತರ ಸಹಕಾರದಿಂದ ದೊಡ್ಡ ಕನಸುಗಳು ಈಡೇರುವುವು. ಬೇರೊಬ್ಬರು ಹೇಳಿದ್ದೆಲ್ಲ ಕೇಳುವ ಹಿತ್ತಾಳೆ ಕಿವಿ ಇಟ್ಟುಕೊಳ್ಳಬೇಡಿ. ನಿಮ್ಮ ಬುದ್ಧಿಯನ್ನೇ ಬಲವಾಗಿ ಪ್ರಯೋಗಿಸಿ. ಕೃಷ್ಣನಿಗೆ ಅವಲಕ್ಕಿ ನೈವೇದ್ಯ ಮಾಡಿ. 

Latest Videos

ಮಿಥುನ(Gemini): ಯಾವ ಕೆಲಸಕ್ಕೂ ಮನೋಬಲ ಕಡಿಮೆ, ಉದಾಸೀನವಾಗಿ ದಿನ ಕಳೆಯುವಿರಿ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡಿ ದಿನಾಂತ್ಯದಲ್ಲಿ ಕೊರಗುವರು. ಆಹಾರಕ್ಕಾಗಿ ಖರ್ಚು ಮಾಡಬಹುದು. ಆರೋಗ್ಯ ಸಮಸ್ಯೆಗಳು ಕಿರಿಕಿರಿ ಉಂಟು ಮಾಡಲಿವೆ. ಕೃಷ್ಣನಿಗೆ ತುಳಸಿ ಅರ್ಪಿಸಿ. 

ಕಟಕ(Cancer): ಆಸ್ತಿ ಖರೀದಿ ಸಂಬಂಧ ಮಾತುಕತೆ. ದಾಖಲೆ ಪತ್ರಗಳ ಪರಿಶೀಲನೆ. ಬಹುಕಾಲದಿಂದ ಮುಂದೂಡಿದ್ದ ಕೆಲಸ ಕೈಗೆತ್ತಿಕೊಳ್ಳುವಿರಿ. ದೇವತಾಕಾರ್ಯಗಳಲ್ಲಿ ಭಾಗಿ. ತಂದೆ- ಮಕ್ಕಳಲ್ಲಿ ಸಾಮರಸ್ಯ ಹೆಚ್ಚಲಿದೆ. ಕ್ರೀಡಾಳುಗಳಿಗೆ ಒಳ್ಳೆಯ ದಿನ. ದೇಹ ಬಲ ಇರಲಿದೆ. ಇರುವೆಗೆ ಸಿಹಿ ಹಾಕಿ. 

ಸಿಂಹ(Leo): ಅಂದುಕೊಂಡ ಕೆಲಸಗಳೊಂದೂ ಆಗದೆ ದಿನಾಂತ್ಯಕ್ಕೆ ಮನಸ್ಸಿಗೆ ಕಿರಿಕಿರಿ, ಬಹಳ ನಿರೀಕ್ಷೆಯಿಟ್ಟುಕೊಂಡಿದ್ದ ವಿಷಯವೊಂದು ನಿರಾಸೆ ಮೂಡಿಸುವುದು. ಮುಂದಿನ ಶುಭ ಕಾರ್ಯದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ.

ಕನ್ಯಾ(Virgo): ಕೆಲಸದ ಸ್ಥಳದಲ್ಲಿ ಹಿರಿಯ ಸಹೋದ್ಯೋಗಿಗಳಿಂದ ಪ್ರಶಂಸೆ. ಕೆಲ ದೊಡ್ಡ ಹಣಕಾಸಿನ ಹೊಣೆ ಹೆಗಲೇರುವುದು. ಸಂಗಾತಿಯ ಮೇಲೆ ಅನಗತ್ಯ ಅನುಮಾನದಿಂದ ಯಾವ ಲಾಭವೂ ಇಲ್ಲ. ಮೂರನೆಯವರ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ. ವಿಷ್ಣು ಸಹಸ್ರನಾಮ ಪಠಣ ಮಾಡಿ. 

ತುಲಾ(Libra): ಆರೋಗ್ಯದಲ್ಲಿ ವ್ಯತ್ಯಾಸವಿದ್ದರೂ ಚಿಂತಿಸುವ ಅಗತ್ಯವಿಲ್ಲ. ಸಹೋದರರ ಸಹಕಾರದಿಂದ ಗೃಹಕಾರ್ಯಗಳು ಸುಲಭವಾಗುವುವು. ವ್ಯಾಪಾರಿಗಳಿಗೆ ಉತ್ತಮ ಲಾಭ. ಗೃಹಿಣಿಯರಿಗೆ ಹೊಸ ಉಡುಗೊರೆಯೊಂದು ದೊರೆಯಬಹುದು. ನವಗ್ರಹ ಪ್ರಾರ್ಥನೆ ಮಾಡಿ. 

ವೃಶ್ಚಿಕ(Scorpio): ನಿರುದ್ಯೋಗಿಗಳು ನೀವು ಹುಡುಕದೆ ಇರುವ ಕ್ಷೇತ್ರದಿಂದ ಬರುತ್ತಿರುವ ಅವಕಾಶವನ್ನು ಒಪ್ಪಿಕೊಳ್ಳುವುದರಿಂದ ಒಳಿತಾಗುವುದು. ಕೆಲಸ ಬದಲಿಸಲಿಚ್ಚಿಸುವ ಉದ್ಯೋಗಿಗಳಿಗೆ ಅವಕಾಶ ಬರಬಹುದು. ಮಕ್ಕಳಲ್ಲಿ ಅನಾರೋಗ್ಯ ಕಾಡಬಹುದು. ಧನ್ವಂತರಿ ಪ್ರಾರ್ಥನೆ ಮಾಡಿ. 

ಮಕ್ಕಳ ಏಕಾಗ್ರತೆ ಹೆಚ್ಚಿಸಲು Vaastu tips

ಧನುಸ್ಸು(Sagittarius): ನಿರಾಳದ ದಿನ. ಮನೆಯಲ್ಲಿ ಪತ್ನಿ ಮಕ್ಕಳ ಸಹಕಾರದಿಂದ ಬಹಳಷ್ಟು ನೆಮ್ಮದಿ ಸಿಗುವುದು. ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ನೀವು ಖರ್ಚು ಮಾಡಬೇಕಿಲ್ಲ. ಅಗತ್ಯವೋ ಅಲ್ಲವೋ ನೋಡಿಯೇ ಖರ್ಚು ಮಾಡಿ. ಉಳಿತಾಯದ ಮಹತ್ವ ಸಧ್ಯದಲ್ಲೇ ಗೊತ್ತಾಗಲಿದೆ. ಗಣಪತಿ ಶತನಾಮಾವಳಿ ಹೇಳಿ. 

ಮಕರ(Capricorn): ಬಹುಕಾಲದಿಂದ ಮುಂದೂಡಿಕೊಂಡು ಬಂದ ಬ್ಯಾಂಕ್ ಕೆಲಸಗಳು ಸರಾಗ. ಧನ ಸಮೃದ್ಧಿಯಿಂದ ಸಂತೋಷ. ವಾಗ್ಬಲ ಇರಲಿದೆ, ಮಾತಿನಿಂದ ಸಾಧನೆ. ವಕೀಲ ವೃತ್ತಿ ಸೇರಿದಂತೆ ಮಾತೇ ಆಯುಧವಾಗಿರುವ ವೃತ್ತಿಯಲ್ಲಿರುವವರಿಗೆ ಗೆಲುವು. ಸಿಹಿ ಸುದ್ದಿ ಕಿವಿಗೆ ಬೀಳಲಿದೆ. ಗಣೇಶನ ದೇವಾಲಯಕ್ಕೆ ಭೇಟಿ ನೀಡಿ. 

ಕುಂಭ(Aquarius): ನೀರಿನ ಸಮೀಪದಲ್ಲಿ ಎಚ್ಚರವಾಗಿರಿ. ರೈತರು, ವ್ಯಾಪಾರಿಗಳು, ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಪ್ರಶಂಸೆ. ಮನಸ್ಸಿನ ಕೊರಗು ಕೊಂಚ ಕಡಿಮೆಯಾಗಲಿದೆ. ಮಕ್ಕಳ ವಿಷಯದಲ್ಲಿ ಹೆಚ್ಚಿನ ಎಚ್ಚರ ಅಗತ್ಯ. ಪ್ರಯಾಣದಲ್ಲಿ ಅನಿರೀಕ್ಷಿತ ಅನುಭವಗಳು ಎದುರಾಗಲಿವೆ. ಗುರು ರಾಯರ ಸ್ಮರಣೆ ಮಾಡಿ. ಶುಭಕ್ಕೆ ಧನ್ಯವಾದ ಅರ್ಪಿಸಿ.

Fertility Astrology: ಗರ್ಭ ಕಟ್ಟುತ್ತಿಲ್ಲವೇ? ಈ ಟಿಪ್ಸ್ ಫಾಲೋ ಮಾಡಿ..

ಮೀನ(Pisces): ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ. ನೂತನ ಗೃಹ ನಿರ್ಮಾಣಕ್ಕೆ, ವಾಹನ ಖರೀದಿಗೆ ಸಕಾಲವಲ್ಲ. ನಿತ್ಯದ ಕೆಲಸ ತುಸು ಶ್ರಮ ಎನಿಸಲಿದೆ. ಶೇರು ವ್ಯವಹಾರಗಳಲ್ಲಿ ನಷ್ಟ. ದೂರ ಪ್ರಯಾಣದಿಂದ ಆಯಾಸ. ವೆಂಕಟೇಶ್ವರ ಸ್ವಾಮಿಯ ಶ್ಲೋಕ ಹೇಳಿಕೊಳ್ಳಿ. 
 

click me!