Daily Horoscope: ವೃಷಭಕ್ಕೆ ಸಿಹಿ ಸುದ್ದಿ, ವೃಶ್ಚಿಕಕ್ಕಿದೆ ಅಭಿವೃದ್ಧಿ

By Suvarna NewsFirst Published Dec 27, 2021, 5:06 AM IST
Highlights

27 ಡಿಸೆಂಬರ್ 2021, ಸೋಮವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕಟಕಕ್ಕೆ ಉತ್ತಮ ಆರೋಗ್ಯ, ಮಕರಕ್ಕೆ ಕಾಡಲಿದೆ ಅಂಜಿಕೆ

ಮೇಷ(Aries): ಮುಂದೆಯೇ ಸಾಗದೆ  ನಿಂತಿದ್ದ ಸರ್ಕಾರಿ ಕೆಲಸಗಳು ಇಂದು ಕೊಂಚ ಮುಂದೋಡುವುದು. ಕೋರ್ಟ್ ವ್ಯಾಜ್ಯಗಳಲ್ಲಿ ಸೋಲಾಗುವ ಸಾಧ್ಯತೆ. ಮನೆಯಲ್ಲಿ ಶುಭ ಕಾರ್ಯಗಳಿಂದ ಮನಸ್ಸು ಪ್ರಫುಲ್ಲಿತವಾಗುತ್ತದೆ. ಶಿವನಿಗೆ ಜಲಾಭಿಷೇಕ ಮಾಡಿ. 

ವೃಷಭ(Taurus): ಇಂದು ನಿಮಗೆ ಕೆಲಸದಲ್ಲಿ ಬಹಳ ಒಳ್ಳೆಯ ದಿನ. ಸರ್ಕಾರಿ ಕೆಲಸಗಳಲ್ಲಿರುವವರಿಗೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿರುವವರಿಗೆ ಒಳ್ಳೆಯ ಸುದ್ದಿಗಳು ಕೇಳಿ ಬರುತ್ತವೆ. ನಿಮ್ಮ ಅಭಿಪ್ರಾಯವನ್ನು ಇತರರ ಮುಂದೆ ಹೇಳಿಕೊಳ್ಳಿ. ಅದರಿಂದ ಖಂಡಿತಾ ಫಲ ಸಿಗಲಿದೆ. ಆಂಜನೇಯ ಸ್ಮರಣೆ ಮಾಡಿ. 

Latest Videos

ಮಿಥುನ(Gemini): ಶೇರು ವ್ಯವಹಾರಗಳಲ್ಲಿ ನಷ್ಟ ಹೆಚ್ಚಿಲ್ಲದಿದ್ದರೂ ಲಾಭವೂ ಅಷ್ಟಕ್ಕಷ್ಟೇ ಇರುವುದು. ಪ್ರವಾಸ ಯೋಜನೆಗಳಿಂದ ಸಂತಸ. ಮನಸ್ಸನ್ನು ಪ್ರಶಾಂತವಾಗಿರಿಸಿಕೊಂಡು ಮುಂದುವರಿಯಿರಿ. ಮಕ್ಕಳ ಸಂಬಂಧಿ ಶುಭ ಕಾರ್ಯಗಳು ಜರುಗುವುವು. ಹಸುವಿಗೆ ಹಸಿರು ತಿನ್ನಿಸಿ. 

ಕಟಕ(Cancer): ಹೊಸ ವ್ಯವಹಾರವನ್ನು ಇಂದು ಆರಂಭಿಸಬಹುದು. ಕಷ್ಟಕರ ಕೆಲಸಗಳನ್ನು ಸುಲಭವಾಗಿ ಪೂರೈಸುವಿರಿ. ಆರೋಗ್ಯ ಸಂಬಂಧಿ ಚಿಕಿತ್ಸೆಗಳು ಪಡೆದಿದ್ದರೆ ಅವುಗಳು ಅಚ್ಚರಿಯ ಫಲಿತಾಂಶ ಕೊಟ್ಟು ಸಂತಸ ಹೆಚ್ಚುವುದು. ಕೋರ್ಟ್ ವ್ಯಾಜ್ಯಗಳ ಮುನ್ನಡೆ. ಶಿವ ಶತನಾಮಾವಳಿ ಹೇಳಿಕೊಳ್ಳಿ. 

Hindu mythology: ಹಾವುಗಳಿಗೇಕೆ ಎರಡು ನಾಲಿಗೆ?

ಸಿಂಹ(Leo): ನಿಮ್ಮ ನಿರ್ಧಾರಗಳು ಗಟ್ಟಿಯಾಗುವ ಹೊತ್ತಿಗೆ ಕಾರ್ಯವೇ ಮುಗಿದಿರುತ್ತದೆ. ಹಿತಶತ್ರುಗಳ ಉಪಟಳ ಹಾಗೂ ದಾಯಾದಿಗಳ ಕಿರಿಕಿರಿ ಕಾಡಬಹುದು. ಮಾತಿಗೆ ಮಾತು ಬೆಳೆಸದೆ ಮೌನದಿಂದ ಕಾರ್ಯ ಸಾಧಿಸಿ. ಆಸ್ತಿ ಖರೀದಿ ಸಂಬಂಧಿ ಚಟುವಟಿಕೆಗಳು ಗರಿಗೆದರಲಿವೆ. ರುದ್ರಾಭಿಷೇಕ ಮಾಡಿಸಿ. 

ಕನ್ಯಾ(Virgo): ಕೆಲಸದ ಪರಿಸ್ಥಿತಿ ಸುಧಾರಿಸಲಿದೆ. ಬಹಳ ದಿನಗಳಿಂದ ಕಾಡುತ್ತಿರುವ ಚಿಂತೆ ದೂರಾಗಲಿದೆ. ಹೊಸತೇನೋ ಸಮಸ್ಯೆ ಎದುರಾಗಲೂಬಹುದು. ಪೋಷಕರ ಭಾವನೆಗಳನ್ನು ಗೌರವಿಸಿ. ಅವರ ಸಲಹೆಗಳಲ್ಲೇ ಪರಿಹಾರವಿರಬಹುದು. ಶಿವ ಶಕ್ತಿಯರ ಪ್ರಾರ್ಥನೆ ಮಾಡಿ.

ತುಲಾ(Libra): ನಿರುದ್ಯೋಗಿಗಳು ಬಂದ ಅವಕಾಶಕ್ಕೆ ನೆಪ ಹೇಳಿ ಕೈ ಬಿಡಬೇಡಿ. ಅವಕಾಶಗಳನ್ನು ಬಳಸಿಕೊಳ್ಳುವುದೇ ಜಾಣತನ. ಪ್ರಗತಿಯ ಹೊಸ ಮಾರ್ಗಗಳು ಕಾಣಬಹುದು. ಅವನ್ನು ಹೆಚ್ಚು ಪರಾಂಬರಿಸಿ ಆಯ್ದುಕೊಳ್ಳಿ. ವಿರೋಧಿಗಳ ಬಗ್ಗೆ ಯೋಚಿಸುತ್ತಾ ಸಮಯ ವ್ಯರ್ಥ ಮಾಡಬೇಡಿ. ತಾಯಿ ಅನ್ನಪೂರ್ಣೇಶ್ವರಿಯ ಪ್ರಾರ್ಥನೆ ಮಾಡಿ. 

Vasu Tips 2022: ಹೊಸ ವರ್ಷ ಸಂತೋಷವಾಗಿರಬೇಕೆಂದರೆ ಮನೆಯಿಂದ ಈ ವಸ್ತುಗಳನ್ನು ಆಚೆ ಹಾಕಿ..

ವೃಶ್ಚಿಕ(Scorpio): ಕೂಡಿಟ್ಟ ಹಣದ ಸದುಪಯೋಗವಾಗಿ ಬಂಧುಮಿತ್ರರಿಂದ ಪ್ರಶಂಸೆಗೊಳಗಾಗುವಿರಿ. ದೂರದ ನೆಂಟರ ಸಹಕಾರದಿಂದ ದೊಡ್ಡ ಯೋಜನೆಯೊಂದಕ್ಕೆ ಕೈ ಹಾಕುವಿರಿ. ಆರೋಗ್ಯದ ವಿಷಯದಲ್ಲಿ ಕೊಂಚ ಎಚ್ಚರಿಕೆ ವಹಿಸಿ. ವಾತಾವರಣ ಸಂಬಂಧಿ ಅನಾರೋಗ್ಯಗಳು ಕಾಡಬಹುದು. ಲಲಿತಾ ಸಹಸ್ರನಾಮ ಪಠಣ ಮಾಡಿ. 

ಧನುಸ್ಸು(Sagittarius): ಕಾರ್ಯ ಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸದಿಂದ ದಣಿವಾಗುವುದು. ಮಕ್ಕಳ ಪ್ರಗತಿಯಿಂದ ನೆಮ್ಮದಿ ಇರುವುದು. ತಂದೆ ತಾಯಿಯ ಆರೋಗ್ಯ ಸುಧಾರಣೆ ಸಮಾಧಾನ ತರುವುದು. ಹೊಸ ತಂತ್ರಜ್ಞಾನ ಮತ್ತು ಜ್ಞಾನವನ್ನು ಪಡೆಯುವ ಬಯಕೆ ಇರುತ್ತದೆ. ಪೋಷಕರ ಆಶೀರ್ವಾದ ಪಡೆದುಕೊಳ್ಳಿ.

ಮಕರ(Capricorn): ಕೆಲಸದ ವಿಷಯದಲ್ಲಿ ಅಂಜಿಕೆಯೊಂದು ಕಾಡಬಹುದು. ಹೆದರಿಕೊಂಡು ಕುಳಿತರೆ ಏನೂ ಪ್ರಯೋಜನವಿಲ್ಲ. ಮೈ ಕೊಡವಿ ಎದ್ದು ಮುಂದೆ ಹೋದರೆ ಬೆಟ್ಟದಂತೆ ಕಂಡಿದ್ದು ಸಣ್ಣ ಕಲ್ಲಾಗಿ ಕಾಣಿಸಬಹುದು. ಆಂಜನೇಯನ ಸ್ಮರಣೆ ಮಾಡಿ. 

ಕುಂಭ(Aquarius): ಉದಾಸೀನ ಕಾಡಿ ಯಾವ ಕೆಲಸಗಳೂ ಮುಂದೆ ಹೋಗುವುದಿಲ್ಲ. ವಿದ್ಯಾರ್ಥಿಗಳು ಸೋಮಾರಿತನಕ್ಕಾಗಿ ಬೈಸಿಕೊಳ್ಳಬೇಕಾಗಿ ಬರಬಹುದು. ಆರೋಗ್ಯ ಚೆನ್ನಾಗಿರುತ್ತದೆ. ವಾಹನವನ್ನು ಪರಿಶೀಲಿಸಿ ನಂತರ ಚಾಲನೆ ಮಾಡಿ. ಸರ್ವೀಸ್ ಮಾಡಿಸುವುದೊಳಿತು. ಹಕ್ಕಿಗಳಿಗೆ ಹಸಿವು ನೀಗಿಸಿ. 

ಮೀನ(Pisces): ಉದ್ಯೋಗದಲ್ಲಿ ಮುನ್ನಡೆ, ಪ್ರವಾಸದಿಂದ ಸಂತಸ, ಆರೋಗ್ಯ ಸಾಥ್ ನೀಡುವುದು. ಅವಿವಾಹಿತರಿಗೆ ಸಂಬಂಧ ಕೂಡಿ ಬರುವುದು. ನಿರುದ್ಯೋಗಿಗಳಿಗೆ ಕೂಡಾ ಅದೃಷ್ಟ ಸಾಥ್ ನೀಡಲಿದೆ. ಪ್ರಯತ್ನ ಹೆಚ್ಚಿಸಬೇಕು. ಬಡವರಿಗೆ ಆಹಾರ ದಾನ ನೀಡಿ. 

click me!