ಹಾಸನ: ಪತ್ನಿ ಕೊಂದವನನ್ನು ಜೈಲಿಗಟ್ಟಿದ ಬೀದಿ ನಾಯಿಗಳು..!

Published : Nov 04, 2023, 11:30 PM IST
ಹಾಸನ: ಪತ್ನಿ ಕೊಂದವನನ್ನು ಜೈಲಿಗಟ್ಟಿದ ಬೀದಿ ನಾಯಿಗಳು..!

ಸಾರಾಂಶ

ಹಳೆಬಾಗೆ ಗ್ರಾಮದ ಶಾಂತಿವಾಸು ಕೊಲೆಯಾದ ಮಹಿಳೆ. ಈಕೆಯ ಪತಿ ಮೈಲಾರಿ ಕೊಲೆಯ ಆರೋಪಿ. ಪತ್ನಿಯನ್ನು ಕೊಂದು ಆರೋಪಿ ಹೂತು ಹಾಕಿದ್ದ. ಆದರೆ ಬೀದಿ ನಾಯಿಗಳು ಈ ಪ್ರಕರಣದ ಪತ್ತೆ ಹಾಗೂ ಆರೋಪಿ ಬಂಧನಕ್ಕೆ ಕಾರಣವಾಗಿವೆ.

ಸಕಲೇಶಪುರ(ನ.04):  ತಾಲೂಕಿನ ಬಾಗೆ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿ ಹೂತುಹಾಕಿದ್ದ ಪ್ರಕರಣ ಮೂರು ತಿಂಗಳ ನಂತರ ಬೀದಿ ನಾಯಿಗಳಿಂದ ಬೆಳಕಿಗೆ ಬಂದಿದೆ. ಹಳೆಬಾಗೆ ಗ್ರಾಮದ ಶಾಂತಿವಾಸು (32) ಕೊಲೆಯಾದ ಮಹಿಳೆ. ಈಕೆಯ ಪತಿ ಮೈಲಾರಿ ಕೊಲೆಯ ಆರೋಪಿ. ಪತ್ನಿಯನ್ನು ಕೊಂದು ಆರೋಪಿ ಹೂತು ಹಾಕಿದ್ದ. ಆದರೆ ಬೀದಿ ನಾಯಿಗಳು ಈ ಪ್ರಕರಣದ ಪತ್ತೆ ಹಾಗೂ ಆರೋಪಿ ಬಂಧನಕ್ಕೆ ಕಾರಣವಾಗಿವೆ.

ಕಳೆದ ಹನ್ನೆರೆಡು ವರ್ಷದ ಹಿಂದೆ ಮದುವೆಯಾಗಿದ್ದ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದು ಇತ್ತೀಚಿನ ವರ್ಷಗಳಲ್ಲಿ ಕುಟುಂಬ ಕಲಹ ನಿತ್ಯ ನಡೆಯುತ್ತಿತ್ತು. ಕಳೆದ ಜುಲೈ ತಿಂಗಳಲ್ಲಿ ನಡೆದ ಕಲಹದಲ್ಲಿ ಪತಿ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದರಿಂದ ನೆಲಕ್ಕೆ ಬಿದ್ದ ಪತ್ನಿ ತಲೆಗೆ ಪೆಟ್ಟು ಬಿದ್ದು ಅಸುನೀಗಿದ್ದರು.

ಅಮಾಯಕರನ್ನ ಯಾಮಾರಿಸಿ ಕೋಟ್ಯಂತರ ರೂ. ದೋಚಿದ ಖತರ್ನಾಕ್ ದಂಪತಿ!

ವಿಚಾರವನ್ನು ಗೋಪ್ಯವಾಗಿಟ್ಟು ಮನೆಯಿಂದ ಮುನ್ನೂರು ಮೀಟರ್ ದೂರದವರಗೆ ಹೆಣವನ್ನು ಹೊತ್ತೊಯ್ದು ಶ್ರೀನಿವಾಸ್ ಎಂಬ ವ್ಯಕ್ತಿಯ ಕಾಫಿ ತೋಟದಲ್ಲಿ ಗುಂಡಿ ತೋಡಿ ಮುಚ್ಚಿ ಹಾಕಿದ್ದ ಆರೋಪಿ ಹೆಂಡತಿ ಮನೆ ಬಿಟ್ಟು ಹೋಗಿರುವುದಾಗಿ ನಂಬಿಸಿದ್ದ. ಆದರೆ, ಶುಕ್ರವಾರ ಗುಂಡಿಯಲ್ಲಿದ್ದ ಹೆಣವನ್ನು ಬೀದಿ ನಾಯಿಗಳು ಎಳೆದು ಮೇಲಕ್ಕೆ ಹಾಕಿವೆ. ಇದನ್ನು ಗಮನಿಸಿದ ಕಾಫಿ ತೋಟದ ಮಾಲೀಕ ಶ್ರೀನಿವಾಸ್ ಪಟ್ಟಣ ಠಾಣೆಗೆ ದೂರು ನೀಡಿದ್ದರು. ಸ್ಥಳಕ್ಕೆ ತೆರಳಿದ ಪೋಲಿಸರು ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು