
ಔರಾದ್(ನ.04): ಬಾಡಿಗೆ ಜಮೀನಿನಲ್ಲಿ ಗಾಂಜಾ ಬೆಳೆ ಬೆಳೆದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಯನಗುಂದಾ ಗ್ರಾಮದ ರಾಜಕುಮಾರ ಶಿವರಾಜ ಗೋರನಾಳೆ ಮತ್ತು ಭೀಮಶಾ ಶಿವರಾಜ ಕುದರೆ ಬಂಧಿತ ಆರೋಪಿಗಳು.
ಬಾಡಿಗೆ ಪಡೆದ ಜಮೀನಿನಲ್ಲಿ ಇವರು ತೊಗರಿ ಬೆಳೆಯ ನಡುವೆ ಗಾಂಜಾ ಗಿಡ ಬೆಳೆಸಿದ್ದರು. ರಾಜಕುಮಾರ ಎಂಬಾತ ಬಾಡಿಗೆ ಪಡೆದ ಜಮೀನಿನಲ್ಲಿ 110 ಗಿಡ ಬೆಳೆದಿದ್ದು, 26 ಕೆ.ಜಿ 513 ಗ್ರಾಂ. ತೂಕದ ಹಸಿ ಗಾಂಜಾ ಗಿಡ ವಶಪಡಿಸಿಕೊಂಡಿದ್ದು, ಇದರ ಮೌಲ್ಯ ಅಂದಾಜು 20.6 ಲಕ್ಷ, ಇನ್ನೂ ಇದೇ ಗ್ರಾಮದ ಭೀಮಶಾ ಶಿವರಾಜ ಕುದರೆ 45 ಗಿಡ ಬೆಳೆದಿದ್ದು, ಈತನಿಂದ 5 ಕೆ.ಜಿ 220 ಗ್ರಾಂ. ತೂಕದ ಹಸಿ ಗಾಂಜಾ ಗಿಡವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಅಂದಾಜು 2 ಲಕ್ಷ 8,800 ರು. ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಪೂಜೆ ಮಾಡಲು ಪಾಟ್ನಲ್ಲಿ ಗಾಂಜಾ ಗಿಡ ಬೆಳೆಸಿದ್ದ ಪೇಯಿಂಟರ್ ಜೈಲಿಗೆ..!
ಖಚಿತ ಮಾಹಿತಿ ಪಡೆದ ಚಿಂತಾಕಿ ಪೊಲೀಸರು ಎಸ್ಪಿ ಚೆನ್ನಬಸವಣ್ಣ ಎಸ್, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಮಾರ್ಗದರ್ಶನದಲ್ಲಿ ಜಮೀನಿನ ಮೇಲೆ ದಾಳಿ ನಡೆಸಿದ್ದಾರೆ.
ಈ ಕುರಿತು ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ (ಎನ್ಡಿಪಿಎಸ್) ಅಡಿಯಲ್ಲಿ ರೈತರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಪಂಚೆನಾಮೆ ಮಾಡಿದರು. ಸಿಪಿಐ ರಘುವೀರಸಿಂಗ್ ಠಾಕೂರ್, ಚಿಂತಾಕಿ ಪಿಎಸ್ಐ ಸಿದ್ಧಲಿಂಗ, ಸಂತಪೂರ ಪಿಎಸ್ಐ ಮಹೆಬೂಬ್ ಅಲೀ, ಶೀರಸ್ಥೆದಾರ ರಾಜಕುಮಾರ ಕುಲಕರ್ಣಿ, ಕರವಸೂಲಿಗಾರ ಭಾವುರಾವ್ ಪಾಟೀಲ್ ಸೇರಿದಂತೆ ಸಿಬ್ಬಂದಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ