ಮಹಿಳೆಯ ಹೃದಯ ಬಗೆದು ಅಲೂಗಡ್ಡೆ ಜೊತೆ ಫ್ರೈ : ಸಂಬಂಧಿಗಳಿಗೆ ಬಡಿಸಿದ ಸೈಕೋಪಾತ್

Published : Mar 17, 2023, 03:19 PM ISTUpdated : Mar 17, 2023, 03:27 PM IST
ಮಹಿಳೆಯ ಹೃದಯ ಬಗೆದು  ಅಲೂಗಡ್ಡೆ ಜೊತೆ ಫ್ರೈ : ಸಂಬಂಧಿಗಳಿಗೆ ಬಡಿಸಿದ ಸೈಕೋಪಾತ್

ಸಾರಾಂಶ

ಅಮೆರಿಕಾದ ನ್ಯಾಯಾಲಯವೂ ಮೂವರನ್ನು ಕೊಲೆಗೈದ ಪ್ರಕರಣವೊಂದರಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿದೆ. ಈತ ಮಾಡಿದ ಭೀಕರ ಕೊಲೆ ಪ್ರಕರಣ ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.  

ನ್ಯೂಯಾರ್ಕ್‌:  ಅಮೆರಿಕಾದ ನ್ಯಾಯಾಲಯವೂ ಮೂವರನ್ನು ಕೊಲೆಗೈದ ಪ್ರಕರಣವೊಂದರಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿದೆ. ಈತ ಮಾಡಿದ ಭೀಕರ ಕೊಲೆ ಪ್ರಕರಣ ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ.  

ಮಹಿಳೆಯನ್ನು ಕೊಂದು, ಆಕೆಯ ಹೃದಯವನ್ನು ಕತ್ತರಿಸಿ ಬಳಿಕ ಆಲೂಗಡ್ಡೆಯೊಂದಿಗೆ ಅದನ್ನು ಫ್ರೈ ಮಾಡಿ ತನ್ನ ಸಂಬಂಧಿಗಳಿಗೆ ಬಡಿಸಿದ ಆರೋಪಿ ನಂತರ ಅವರನ್ನು ಕೂಡ ಹತ್ಯೆ ಮಾಡಿದ್ದಾನೆ. ಈ ರೀತಿ ಭೀಕರವಾಗಿ ಹತ್ಯೆ ಮಾಡಿದ ಆರೋಪಿಗೆ ಈಗ ಅಮೆರಿಕಾದ ಕೋರ್ಟ್ ಜೀವಮಾನದ ಶಿಕ್ಷೆ ವಿಧಿಸಿದೆ. 44 ವರ್ಷದ ಲಾರೆನ್ಸ್ ಪಾಲ್ ಆಂಡರ್ಸನ್ ( Lawrence Paul Anderson) ಎಂಬಾತನೇ ಹೀಗೆ ಭೀಭತ್ಸ ಅಪರಾಧವೆಸಗಿದ ವ್ಯಕ್ತಿ. ಬೇರೆ ಪ್ರಕರಣವೊಂದರಲ್ಲಿ ಜೈಲಿಗೆ ಹೋದ ಈತ ಕೈದಿಗಳ ಮನಪರಿವರ್ತನೆಯ ಭಾಗದ ನಂತರ ಜೈಲಿನಿಂದ ಬಿಡುಗಡೆಗೊಂಡಿದ್ದ. ಇದಾಗಿ ಒಂದು ತಿಂಗಳು ಕಳೆಯುವ ಮುನ್ನವೇ ಈತ ಈ ಭೀಕರ ಹತ್ಯೆಯನ್ನು ಮಾಡಿದ್ದಾನೆ. 2021ರಲ್ಲಿ ಈ ತ್ರಿವಳಿ ಕೊಲೆ ನಡೆದಿದ್ದು, ಈಗ ಆರೋಪಿಗೆ ನ್ಯಾಯಾಲಯ ಜೀವಮಾನವಿಡೀ ಜೈಲಿನಲ್ಲೇ ಕಳೆಯುವ ಶಿಕ್ಷೆ ನೀಡಿದೆ. 

ಜೈಲಿನಿಂದ ಬಿಡುಗಡೆಯಾದ ಈತ ವಾರಗಳ ನಂತರ, ಆಂಡ್ರಿಯಾ ಬ್ಲಾಂಕೆನ್‌ಶಿಪ್ (Andrea Blankenship)ಎಂಬಾಕೆಯನ್ನು ಕೊಂದು ಆಕೆಯ ಹೃದಯವನ್ನು ಬಗೆದು ತೆಗೆದಿದ್ದಾನೆ ಬಳಿಕ ಅದನ್ನು ತನ್ನ ಚಿಕ್ಕಮ್ಮ ಮತ್ತು ಚಿಕ್ಕಪ್ಪನ ಮನೆಗೆ ಕೊಂಡೊಯ್ದ ಆತ ಅಲ್ಲಿ ಆಲೂಗೆಡ್ಡೆಯೊಂದಿಗೆ ಅದನ್ನು ಬೇಯಿಸಿದ್ದಾನೆ. ನಂತರ ಈ ಕೊಲೆಗಡುಕ ತನ್ನ  ಅಂಕಲ್  67 ವರ್ಷದ ಲಿಯಾನ್ ಪೈ (Leon Pye) ಮತ್ತು ಅವರ 4 ವರ್ಷದ ಮೊಮ್ಮಗಳು ಕೆಯೋಸ್ ಯೇಟ್ಸ್ (Kaeos Yates) ಅವರನ್ನು ಇರಿದು ಕೊಲ್ಲುವ ಮೊದಲು ಲಿಯಾನ್ ಪೈ ಹಾಗೂ ಅವರ ಪತ್ನಿಗೆ ತಾನು ಕೊಲೆ ಮಾಡಿದ ಮಹಿಳೆಯ ಹೃದಯದ ಫ್ರೈ ಅನ್ನು ತಿನ್ನಿಸಲು ಯತ್ನಿಸಿದ್ದ ಎಂಬ ಆಘಾತಕಾರಿ ವಿಚಾರ ತನಿಖೆಯಲ್ಲಿ ಬಯಲಾಗಿದೆ. 

ಹೃದಯ ಬಗೆದು, ಮರ್ಮಾಂಗ ತುಂಡು ತುಂಡಾಗಿ ಕತ್ತರಿಸಿ ಯುವಕನ ಭೀಕರ ಹತ್ಯೆ

ಇದಕ್ಕೂ ಮೊದಲು ಡ್ರಗ್‌ ಕೇಸೊಂದರಲ್ಲಿ ಜೈಲು ಸೇರಿದ್ದ ಲಾರೆನ್ಸ್ ಪಾಲ್ ಆಂಡರ್ಸನ್‌ಗೆ ಆ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಯಾಗಿತ್ತು.  ಆದರೆ ಮನಪರಿವರ್ತನೆಯ ಹಿನ್ನೆಲೆಯಲ್ಲಿ  ಒಕ್ಲಹೋಮಾದ (Oklahoma) ಗವರ್ನರ್ ಕೆವಿನ್ ಸ್ಟಿಟ್ (Kevin Stitt) ಅವರು ಆಂಡರ್ಸನ್‌ಗೆ ನೀಡಿದ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿ ಆತನನ್ನು ಜೈಲಿನಿಂದ ಬಿಡುಗಡೆಗೊಳಿಸಿದ್ದರು.  ಹೀಗಾಗಿ ಡ್ರಗ್‌ ಕೇಸಿನಲ್ಲಿ ಜೈಲಿಗೆ ಹೋಗಿದ್ದ ಈತ 20 ವರ್ಷ ಶಿಕ್ಷೆಯಾದರೂ  ಕೇವಲ 3 ವರ್ಷದಲ್ಲಿ ಹೊರಬಂದಿದ್ದ. ಜೈಲಿನಿಂದ ಹೊರಬಂದರೂ ಬುದ್ಧಿ ಕಲಿಯದ ಈತ ತಿಂಗಳಾಗುವ ಮೊದಲೇ ಭೀಕರವಾಗಿ ಮೂವರನ್ನು ಹತ್ಯೆಗೈದು ಮತ್ತೆ ಜೈಲು ಸೇರಿದ್ದಾನೆ. 

ಆದರೆ ಈತ ತ್ರಿವಳಿ ಕೊಲೆ ಮಾಡುತ್ತಿದ್ದಂತೆ ಈತನ ಬಗ್ಗೆ ತನಿಖೆಗೆ ಮುಂದಾದ ಪೊಲೀಸರಿಗೆ ಶಾಕ್ ಕಾದಿತ್ತು. ಏಕೆಂದರೆ ಮನಪರಿವರ್ತನೆ (commutation) ಹಿನ್ನೆಲೆಯಲ್ಲಿ ಬಿಡುಗಡೆಯಾಗಲಿರುವ ಕೈದಿಗಳ ಪಟ್ಟಿಯಲ್ಲಿ ಈತ ತಪ್ಪಾಗಿ ಸ್ಥಾನ ಪಡೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.  ಕೊಲೆ, ಆಕ್ರಮಣ ಮತ್ತು ಅಂಗವೈಕಲ್ಯತೆಯನ್ನು ಉಂಟು ಮಾಡಿರುವುದನ್ನು ನ್ಯಾಯಾಲಯದ ಮುಂದೆ ಆಂಡರ್ಸನ್ ಒಪ್ಪಿಕೊಂಡಿದ್ದು,  ಆತನಿಗೆ ಒಟ್ಟು ಐದು ಜೀವಾವಧಿ ಶಿಕ್ಷೆಗಳನ್ನು ವಿಧಿಸಲಾಗಿದೆ. ಈತನಿಂದ ಭೀಕರವಾಗಿ ದಾಳಿಗೊಳಗಾದ ಈತನ ಚಿಕ್ಕಮ್ಮ, ಹಾಗೂ ಹತ್ಯೆಯಾದ ಮಹಿಳೆಯ ಕುಟುಂಬದವರು ಆರೋಪಿಯನ್ನು ಮನ ಪರಿವರ್ತನೆಯ ಮೇಲೆ ಬಿಡುಗಡೆಗೊಳಿಸಿದ ಜೈಲು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Mysuru: ದಶಕದ ದಾಂಪತ್ಯಕ್ಕೆ ಅಡ್ಡ ಬಂದವನ ರುಂಡ ತುಂಡರಿಸಿದ ಗಂಡ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು