ಕರ್ನಾಟಕದಲ್ಲಿ ಅಡಗಿದ್ದ ಐಸಿಸ್‌ ಉಗ್ರ ನಬೀಲ್‌ ತಮಿಳ್ನಾಡಲ್ಲಿ ಬಂಧನ

Published : Sep 07, 2023, 01:00 AM IST
ಕರ್ನಾಟಕದಲ್ಲಿ ಅಡಗಿದ್ದ ಐಸಿಸ್‌ ಉಗ್ರ ನಬೀಲ್‌ ತಮಿಳ್ನಾಡಲ್ಲಿ ಬಂಧನ

ಸಾರಾಂಶ

ಕೇರಳದಲ್ಲಿ ಉಗ್ರ ಕೃತ್ಯಗಳನ್ನು ಎಸಗಲು ನಡೆಸಿದ್ದ ಪಿತೂರಿಯನ್ನು ಬಯಲು ಮಾಡಿದ ಬಳಿಕ ತ್ರಿಶೂರ್‌ ಮೂಲದ ನಿಷೇಧಿತ ಉಗ್ರ ಸಂಘಟನೆಯ ನಾಯಕ ಸೈಯದ್‌ ನಬೀಲ್‌ ಕಳೆದ ಹಲವು ವಾರಗಳಿಂದ ಕರ್ನಾಟಕ ಹಾಗೂ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ತಲೆಮರೆಸಿಕೊಂಡಿದ್ದ. ರಾಷ್ಟ್ರೀಯ ತನಿಖಾ ದಳದ ಪಲಾಯನವಾದಿಗಳ ಟ್ರ್ಯಾಕ್‌ ತಂಡ ಹುಡುಕಿ ಬಂಧಿಸಿದೆ. 

ನವದೆಹಲಿ(ಸೆ.07):  ಕರ್ನಾಟಕದ ಹಲವು ಭಾಗಗಳಲ್ಲಿ ತಲೆ ಮರೆಸಿಕೊಂಡಿದ್ದ ಹಾಗೂ ವಿದೇಶಕ್ಕೆ ಪರಾರಿಯಾಗಲು ಸಿದ್ಧತೆ ನಡೆಸಿದ್ದ ತ್ರಿಶೂರ್‌ ಮಾಡೆಲ್‌ನ ಐಸಿಸ್‌ ಉಗ್ರ ಸಂಘಟನೆಯ ನಾಯಕ ಸೈಯದ್‌ ನಬೀಲ್‌ನನ್ನು ರಾಷ್ಟ್ರೀಯ ತನಿಖಾ ದಳ ಚೆನ್ನೈನಲ್ಲಿ ಬಂಧಿಸಿದೆ.

ಕೇರಳದಲ್ಲಿ ಉಗ್ರ ಕೃತ್ಯಗಳನ್ನು ಎಸಗಲು ನಡೆಸಿದ್ದ ಪಿತೂರಿಯನ್ನು ಬಯಲು ಮಾಡಿದ ಬಳಿಕ ತ್ರಿಶೂರ್‌ ಮೂಲದ ನಿಷೇಧಿತ ಉಗ್ರ ಸಂಘಟನೆಯ ನಾಯಕ ಸೈಯದ್‌ ನಬೀಲ್‌ ಕಳೆದ ಹಲವು ವಾರಗಳಿಂದ ಕರ್ನಾಟಕ ಹಾಗೂ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ತಲೆಮರೆಸಿಕೊಂಡಿದ್ದ. ರಾಷ್ಟ್ರೀಯ ತನಿಖಾ ದಳದ ಪಲಾಯನವಾದಿಗಳ ಟ್ರ್ಯಾಕ್‌ ತಂಡ ಹುಡುಕಿ ಬಂಧಿಸಿದೆ. 

ಸನ್ನಡತೆ ಅಡಿ ಸ್ಫೋಟ ರೂವಾರಿ ಉಗ್ರನ ಬಿಡುಗಡೆಗೆ ಸರ್ಕಾರ ಸಿದ್ಧತೆ!

ಈತ ನಕಲಿ ದಾಖಲೆಗಳನ್ನು ಬಳಸಿಕೊಂಡು ನೇಪಾಳಕ್ಕೆ ಹೋಗುವ ಮೂಲಕ ದೇಶಬಿಟ್ಟು ಓಡಿಹೋಗಲು ಯೋಜನೆ ರೂಪಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪದಲ್ಲಿ ಜು.11ರಂದು ಯುಎಪಿಎ ಅಡಿ ಪ್ರಕರಣ ದಾಖಲಿಸಿದ್ದ ಎನ್‌ಐಎ ತನಿಖೆ ಆರಂಭಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!